ಕಾಡುತ್ತಿದೆ ರೇಬಿಸ್ ಔಷಧ ಕೊರತೆ
ಆರು ಜಿಲ್ಲೆಗಳಲ್ಲಿ ಔಷಧ ಸಂಗ್ರಹ ಶೂನ್ಯ | ಕಳೆದೊಂದು ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆದೇ ಇಲ್ಲ
Team Udayavani, Jul 24, 2019, 9:35 AM IST
ಬೆಂಗಳೂರು: ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಕರೆಯಲಾಗುವ ಟೆಂಡರ್ ಪ್ರಕ್ರಿಯೆಗಳು ತಡವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ್ಯಂಟಿ ರೇಬಿಸ್ ಔಷಧದ ಕೊರತೆ ಹೆಚ್ಚಾಗಿದೆ. ಪ್ರಮುಖ ಆರು ಜಿಲ್ಲೆಗಳ ಸೊಸೈಟಿಯ ಔಷಧ ಉಗ್ರಾಣದಲ್ಲಿ ಮಾರಣಾಂತಿಕವಾಗಿ ನಾಯಿ ಕಚ್ಚಿದ ಗಂಭೀರ ಪ್ರಕರಣಗಳಿಗೆ ನೀಡುವ ರೇಬಿಸ್ ಇಮ್ಯುನೊಗ್ಲೋಬಿನ್ ಔಷಧದ ಸಂಗ್ರಹಣೆಯೇ ಇಲ್ಲ.
ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯಿಂದಲೇ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಯಾಗುತ್ತದೆ. ಒಂದು ವರ್ಷದಿಂದ ಟೆಂಡರ್ ಪ್ರಕ್ರಿಯೆ ಆಗದ ಹಿನ್ನೆಲೆಯಲ್ಲಿ ಸೊಸೈಟಿಯಲ್ಲಿ ನಾಯಿ ಕಚ್ಚಿದ ಪ್ರಕರಣಗಳ ಚುಚ್ಚುಮದ್ದುವಿನ (ಆ್ಯಂಟಿ ರೇಬಿಸ್ ಲಸಿಕೆ) ಕೊರತೆಯಾಗಿದೆ. ಆರೋಗ್ಯ ಇಲಾಖೆ ಕಳೆದ ತಿಂಗಳು ತಮಿಳುನಾಡಿನಿಂದ ಈ ಔಷಧವನ್ನು ತರಿಸಿ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ವಿತರಿಸಿತ್ತು. ಆದರೆ, ಈಗ ಮಾರಣಾಂತಿಕವಾಗಿ ನಾಯಿ ಕಚ್ಚುವ ಪ್ರಕರಣಗಳಲ್ಲಿ ಅಂದರೆ ದೇಹದ ಭಾಗದ ಮಾಂಸ ಕಿತ್ತು ಬರುವಂತೆ ನಾಯಿ ಕಚ್ಚಿದ ಸಂದರ್ಭದಲ್ಲಿ ನೀಡುವ ರೇಬಿಸ್ ಇಮ್ಯುನೊಗ್ಲೋಬಿನ್ ಎಂಬ ಚುಚ್ಚುಮದ್ದಿನ ಮೂಲಕ ನೀಡುವ ಔಷಧ ಕೊರತೆಯಾಗಿದೆ.
ಎಲ್ಲೆಲ್ಲಿ ಶೂನ್ಯ ಸಂಗ್ರಹ?: ಸದ್ಯ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯ ಜಿಲ್ಲಾ ಕೇಂದ್ರಗಳಲ್ಲಿ ರೇಬಿಸ್ ಇಮ್ಯುನೊಗ್ಲೋಬಿನ್ ಔಷಧ ಶೇ.14.88ರಷ್ಟು ಮಾತ್ರ ಸಂಗ್ರಹವಿದೆ. ಸೊಸೈಟಿಯ ದಾಖಲೆ ಪ್ರಕಾರ ಬೆಂಗಳೂರು, ಬೆಳಗಾವಿ, ಧಾರವಾಡ, ಕೊಪ್ಪಳ, ಮೈಸೂರು ಮತ್ತು ರಾಯಚೂರು ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ಇಮ್ಯುನೊಗ್ಲೋಬಿನ್ ಔಷಧ ಸಂಗ್ರಹವಿಲ್ಲ. ಇನ್ನು, ಈ ರೇಬಿಸ್ ಇಮ್ಯುನೊಗ್ಲೋಬಿನ್ ಒಂದು ವಾಯಿಲ್ಸ್ಗೆ 4,000ರೂ. ಇದ್ದು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ. ಜತೆಗೆ ಚಿಕಿತ್ಸೆ ಶುಲ್ಕವೂ ಹೆಚ್ಚಾಗುತ್ತದೆ.
ಉಳಿದಂತೆ ಚಿತ್ರದುರ್ಗ-2, ಗದಗ-6, ಬಾಗಲ.ಕೋಟೆ-9, ಹಾವೇರಿ-10, ಬಳ್ಳಾರಿ-10, ಬೀದರ್-11, ಗೋಕಾಕ್-11, ರಾಮನಗರ-14, ದಾವಣಗೆರೆ-15, ವಿಜಯಪುರ-19, ಮಡಿಕೇರಿ-19, ಕಲಬುರಗಿ-25, ಯಾದಗಿರಿ-43, ಬೆಂ.ಗ್ರಾಮಾಂತರ- 94, ಹಾಸನ-155, ಕೋಲಾರ-153, ಮಂಗಳೂರು-243, ಶಿವಮೊಗ್ಗ-45, ತುಮಕೂರು-131 ವಯಲ್ (ಒಂದು ವಯಲ್ನಲ್ಲಿ 10 ಚುಚ್ಚುಮದ್ದು ಅಥವಾ 150 ಮಿ.ಲೀ. ಇರುತ್ತದೆ) ಗಳಷ್ಟು ಔಷಧ ಸಂಗ್ರಹವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ
FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್
Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ