ಸೌಲಭ್ಯ ಬಳಸಿಕೊಂಡು ಗುರಿ ಮುಟ್ಟಿ
Team Udayavani, Sep 23, 2018, 12:58 PM IST
ಕೆಂಗೇರಿ: ತಮಗೆ ಲಭ್ಯವಿರುವ ಮೂಲ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ತಿಗಳು ತಮ್ಮ ಗುರಿ ತಲುಪಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ಕೆಂಗೇರಿಯ ಎಸ್ಜೆಬಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 14ನೇ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಎಲ್ಲರೂ ಸದ್ದು ಮಾಡಬೇಕು. ಆದರೆ, ಆ ಸದ್ದು ಮತ್ತೂಬ್ಬರಿಗೆ ತೊಂದರೆ ಆಗಬಾರದು. ನಮ್ಮ ಜೀವನ ಆರಂಭವಾಗುವುದು ಮತ್ತು ಕೊನೆಯಾಗುವುದು ನಿಶ್ಯಬ್ದದಿಂದ. ಇವರೆಡರ ನಡುವೆ ನಾವು ಮಾಡುವ ಸದ್ದು ಸಾಧನೆಯಾಗಿರಬೇಕು ಎಂದು ಹೇಳಿದರು.
ತಾಂತ್ರಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ವಿಪ್ರೋ ಸಂಸ್ಥೆಯ ಜಿಎಂ ಪಿ.ಬಿ.ಕೋಟೂರ್ ಅವರು ಮಾತನಾಡಿ, ಉದ್ಯೋಗ ಪಡೆಯುವ ಏಕೈಕ ಗುರಿಯ ಬದಲಾಗಿ, ಉದ್ಯಮಶೀಲತೆ ಮೈಗೂಡಿಸಿಕೊಳ್ಳುವ ಉದ್ದೇಶದಿಂದ ಶಿಕ್ಷಣ ಪಡೆದಾಗ ಅದು ಸಾರ್ಥಕವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಡಾ.ಪ್ರಕಾಶನಾಥ ಸ್ವಾಮೀಜಿ, ಎಸ್.ಜೆ.ನಾಗನಗೌಡ, ನರೇಶ್ ವಿ. ನರಸಿಂಹನ್ ಸೇರಿ ಹಲವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ