ಕಲ್ಲಿದ್ದಲಿಗೆ ಪರ್ಯಾಯ ಉರುವಲಿಗೆ ಬೇಡಿಕೆ
Team Udayavani, Dec 1, 2018, 6:10 AM IST
ಬೆಂಗಳೂರು: ಅರಣ್ಯ ಹಾಗೂ ಕೃಷಿ ತ್ಯಾಜ್ಯದಿಂದಾಗಿ ತಯಾರಿಸುತ್ತಿರುವ ಜೈವಿಕ ಇಂಧನ ಉರುವಲು (ಬಯೋಮಾಸ್ ಬ್ರಿಕೆಟ್ಸ್)ಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಕರ್ನಾಟಕ ಮೂಲದ ಅಲೆಕ್ಸಿಸ್ ಸಿಸ್ಟಮ್ಸ್ ಸಂಸ್ಥೆ ಜೈವಿಕ ಇಂಧನ ಉಂಡೆಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.
ಕಲ್ಲಿದ್ದಲು ಸುಡುವುದರಿಂದ ಬರುವ ಕಪ್ಪು ಹೊಗೆ ಹೆಚ್ಚಿನ ಮಾಲಿನ್ಯ ಸೃಷ್ಟಿಸುತ್ತದೆ. ಆ ಹಿನ್ನೆಲೆಯಲ್ಲಿ ದೆಹಲಿ ಸೇರಿ ಹಲವು ಪ್ರಮುಖ ನಗರಗಳ ಕಾರ್ಖಾನೆಗಳಲ್ಲಿ ಕಲ್ಲಿದ್ದಲು ಸುಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆ ಹಿನ್ನೆಲೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಇಂಧನಗಳ ಬಳಕೆಗೆ ಕಾರ್ಖಾನೆಗಳು ಮುಂದಾಗುತ್ತಿದ್ದು, ಜೈವಿಕ ಇಂಧನ ಉಂಡೆಗಳ ಮಾರುಕಟ್ಟೆ ವಿಸ್ತರಿಸುತ್ತಿದೆ.
ಹೊಲಗಳಲ್ಲಿನ ತ್ಯಾಜ್ಯಕ್ಕೆ ರೈತರು ಬೆಂಕಿಯಿಡುತ್ತಾರೆ. ಇದರಿಂದಾಗಿ ಮತ್ತೆ ಮಾಲಿನ್ಯ ಉಂಟಾಗುತ್ತದೆ. ಆ ಹಿನ್ನೆಲೆಯಲ್ಲಿ ಜೈವಿನ ಇಂಧನ ಉಂಡೆಗಳ ಉತ್ಪಾದನೆಗಾಗಿ ಅಲೆಕ್ಸಿಸ್ ಸಿಸ್ಟಮ್ಸ್ ಸಂಸ್ಥೆಯು ಅರಣ್ಯ ಹಾಗೂ ಕೃಷಿ ಹೊಲಗಳಲ್ಲಿನ ತ್ಯಾಜ್ಯವನ್ನು ರೈತರಿಂದ ಖರೀದಿಸುತ್ತದೆ. ಹೀಗೆ ಖರೀದಿಸಿದ ತ್ಯಾಜ್ಯವನ್ನು ಬಳಕೆಯಾಗುವ ಹಾಗೂ ಬಳಕೆಯಾಗದ ತ್ಯಾಜ್ಯವೆಂದು ವಿಂಗಡಿಸಿ, ಬಳಕೆಯಾಗುವ ತ್ಯಾಜ್ಯವನ್ನು 5 ರಿಂದ 8 ಎಂಎಂ ಅಳತೆಗೆ ಕತ್ತರಿಸಲಾಗುತ್ತದೆ.
ಕತ್ತರಿಸಿದ ತ್ಯಾಜ್ಯದಲ್ಲಿನ ತೇವಾಂಶವನ್ನು ವಿಶೇಷ ಯಂತ್ರಗಳ ಮೂಲಕ ಕಡಿಮೆ ಮಾಡಲಾಗುತ್ತದೆ. ಬಳಿಕ ತ್ಯಾಜ್ಯ
ಘನೀಕರಣವಾಗದಂತೆ ಹಾಗೂ ಮತ್ತೆ ತ್ಯಾಜ್ಯದಲ್ಲಿ ತೇವಾಂಶ ಕಂಡು ಬರದಂತೆ ಶಾಖ ನೀಡಲಾಗುತ್ತದೆ.
ಕೊನೆಗೆ ಇಂಧನ ಉಂಡೆಗೆ ತಯಾರಿಕೆಗೆ ಅಗತ್ಯವಾದ ಕೆಲವು ಜೈವಿಕ ಪದಾರ್ಥಗಳನ್ನು ಹಾಗೂ ತ್ಯಾಜ್ಯವನ್ನು ಮಿಕ್ಸರ್ನಲ್ಲಿ
ಹಾಕಲಾಗುತ್ತದೆ. ಮಿಕ್ಸಿಂಗ್ ಆದ ಬಳಿಕ ತ್ಯಾಜ್ಯವು ಘನ ರೂಪ ಪಡೆದುಕೊಳ್ಳಲಿದ್ದು, ಕಟ್ಟರ್ ಯಂತ್ರದ ಮೂಲಕ ಅಗತ್ಯ
ಅಳತೆಗೆ ಉಂಡೆಗಳನ್ನು ಕತ್ತರಿಸಲಾಗುತ್ತದೆ. ಬಳಿಕ 30-40 ಕೆ.ಜಿ.ಯಂತೆ ಉಂಡೆಗಳನ್ನು ಪ್ಯಾಕಿಂಗ್ ಮಾಡಲಾಗುತ್ತದೆ.
ಹೀಗೆ ಪ್ಯಾಕ್ ಮಾಡಿದ ಇಂಧನ ಉರುವಲು ಕಾರ್ಖಾನೆಯವರು ಖರೀದಿಸುತ್ತಾರೆ. ಸಿಮೆಂಟ್ ತಯಾರಿಕೆ, ಗಾರ್ಮೇಂಟ್ಸ್ ಸೇರಿ ಬಾಯ್ಲರ್ಗಳನ್ನು ಬಳಕೆ ಮಾಡುವಂತಹ ಎಲ್ಲ ಕಾರ್ಖಾನೆಗಳಲ್ಲಿ ಜೈವಿಕ ಇಂಧನ ಉರುವಲು ಅನುಕೂಲವಾಗಲಿವೆ. ಇದರೊಂದಿಗೆ ಕಲ್ಲಿದ್ದಲಿಗಿಂತಲೂ ಕಡಿಮೆ ಬೆಲೆಗೆ ಈ ಉರುವಲು ಲಭ್ಯವಾಗಲಿವೆ ಎಂದು ಸಂಸ್ಥೆಯ ನಿರ್ದೇಶಕ ಸಮಿತ್ ತಂಗಾ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ