ಆಂಗ್ಲ ಮಾಧ್ಯಮ ನಿಲುವು ಪುನರ್ ಪರಿಶೀಲಿಸಿ
Team Udayavani, Jun 10, 2019, 3:00 AM IST
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿರುವ ರಾಜ್ಯ ಸರ್ಕಾರ ತನ್ನ ನಿಲುವನ್ನು ಪುನರ್ ಪರಿಶೀಲಿಸಬೇಕು ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಒತ್ತಾಯಿಸಿದರು.
ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಪ್ರತಿಭಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ನಡೆದ ಅಂಕಣಕಾರ ಡಾ.ಕೆ.ಪಿ.ಪುತ್ತೂರಾಯರ “ಬಾಗಿನ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿರುವ ರಾಜ್ಯ ಸರ್ಕಾರ ತನ್ನ ನಿಲುವು ಸಮಂಜಸವಲ್ಲ.
ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕ್ರಮವನ್ನು ಸರ್ಕಾರ ಮತ್ತೂಮ್ಮೆ ಪರಿಶೀಲಿಸುವುದ ಅತ್ಯಗತ್ಯ. ಇನ್ನು ರಾಜ್ಯ ಸರ್ಕಾರವು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾಷೆಯ ಪರವಾಗಿಲ್ಲದಿರುವುದು ನೋವಿನ ಸಂಗತಿಯಾಗಿದೆ. ಈ ವಿಚಾರ ಕುರಿತು ಸಚಿವ ಸಂಪುಟದಲ್ಲಿ ಗಂಭೀರ ಚರ್ಚೆಯಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಜೀವನದಲ್ಲಿ ಮನುಷ್ಯ ಎತ್ತರಕ್ಕೇರಬೇಕೆಂದರೆ ಅಧ್ಯಯನದ ಆಳಕ್ಕಿಳಿಯಬೇಕು ಎಂದು ತಿಳಿಸಿದರು.ಅಧ್ಯಯನಶೀಲತೆ ಒಂದೇ ಮನುಷ್ಯನಿಗೆ ಸಾಧನೆ ಹಾದಿ ತೋರುತ್ತದೆ. ಧರ್ಮ, ಜಾತಿ, ಸಿದ್ಧಾಂತಕ್ಕಿಂತ ದೇಶ ಮುಖ್ಯ.
ಯುವ ಜನತೆಯು ಒಂದೇ ಧರ್ಮ, ಒಂದೇ ರಾಜಕೀಯ ಚಿಂತನೆಗೆ ಸೀಮಿತವಾಗದೇ ಅಧ್ಯಯನಶೀಲರಾಗಬೇಕು. ಎಲ್ಲ ಧರ್ಮಗಳಲ್ಲೂ ಒಳ್ಳೆಯ ಅಂಶಗಳಿದ್ದು, ಅವುಗಳನ್ನು ಪ್ರೀತಿಸಿ, ಗೌರವಿಸಬೇಕು. ಜಾತಿ, ಧರ್ಮವನ್ನೇ ಮುಂದೆ ಇಟ್ಟುಕೊಂಡು ಏಕತೆಗೆ ಧಕ್ಕೆ ತರಬಾರದು. ಈ ನಿಟ್ಟಿನಲ್ಲಿ ಅಧ್ಯಯನದ ಆಳಕ್ಕಿಳಿದಾಗ ಮಾತ್ರ ಮನುಷ್ಯ ಎತ್ತರಕ್ಕೇರಲು ಸಾಧ್ಯ ಎಂದರು.
ಅಧ್ಯಯನಶೀಲರಲ್ಲಿ ಕೆ.ಪಿ.ಪುತ್ತೂರಾಯರು ಒಬ್ಬರಾಗಿದ್ದು, ಅವರ ಬಾಗಿನ ಕೃತಿಯ ವಿಚಾರಗಳಲ್ಲಿ ಅವರ ಅಧ್ಯಯನ ಆಳ ತಿಳಿಯುತ್ತದೆ. 5000 ವರ್ಷಗಳ ಹಿಂದಿನ ವೇದ ಉಪನಿಷತ್ತಿನಿಂದ ಹಿಡಿದು 20ನೇ ಶತಮಾನದ ಕುವೆಂಪು-ಕಾರಂತರ ಬರಹಗಳ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ.
ಕೃತಿಯಲ್ಲಿ 12ನೇ ಶತಮಾನದ ವಚನಕಾರರು, ಸರ್ವಜ್ಞನ ತ್ರಿಪದಿಗಳು, ದಾಸರ ಪದಗಳು, ಗೋವಿಂದ ಪೈ, ಕುವೆಂಪು,ಕಾರಂತರ ಸಾಹಿತ್ಯದ ಪ್ರಮುಖ ಅಂಶಗಳನ್ನು ಬಳಸಿಕೊಂಡು ಉದಾಹರಣೆಗಳ ಮೂಲಕ ಸೊಗಸಾಗಿ ವಿವರಿಸಿದ್ದಾರೆ.
ಈ ಕೃತಿ 100ಕ್ಕೂ ಹೆಚ್ಚು ಲೇಖನ ಬರಹಗಳನ್ನು ಹೊಂದಿದ್ದು, ಶಿಕ್ಷಣ, ಸಾಮಾಜಿಕ ಕಳಕಳಿ, ಸಂಸಾರ, ಆರೋಗ್ಯ, ವ್ಯಕ್ತಿತ್ವ ವಿಕಸನ, ಪರಿಸರ ಕಾಳಜಿ, ಸಂಸ್ಕೃತಿ, ಸಂಸ್ಕಾರದಂತಹ ಸಾಕಷ್ಟು ವಿಚಾರಗಳನ್ನು ಕೃತಿ ಒಳಗೊಂಡಿದೆ. ಕನ್ನಡ ಮಾತ್ರವಲ್ಲದೇ ಸಂಸ್ಕೃತ, ಹಿಂದಿ, ತೆಲುಗು, ತಮಿಳಿನ ನಾನ್ನುಡಿ ಬಳಸಿದ್ದಾರೆ ಎಂದು ತಿಳಿಸಿದರು.
ಕವಿ ಎಚ್.ಡುಂಡಿರಾಜ್ ಮಾತನಾಡಿ, ಕೆ.ಪಿ.ಪುತ್ತೂರಾಯರು ಬರಹ ಹಾಗೂ ಭಾಷಣ ಎರಡರಲ್ಲೂ ಯಶಸ್ಸು ಪಡೆದಿದ್ದಾರೆ. ದಕ್ಷಿಣ ಕನ್ನಡ ಮೂಲದವರಾಗಿದ್ದು, ಇಂದು ಹಾಸ್ಯ ಭಾಷಣ, ಅಂಕಣ ಬರಹದ ಮೂಲಕ ಕರ್ನಾಟಕದಲ್ಲಿ ಹೆಸರು ಪಡೆದಿರುವುದು ಸಂತಸದ ವಿಚಾರ.
ಬಾಗಿನ ಎಂದರೆ ಉಡುಗೊರೆ ಎಂದರ್ಥವಾಗಿದ್ದು, ಈ ಕೃತಿಯು ಸಾಕಷ್ಟು ಸಂದೇಶಗಳ ಮೂಲಕ ಯುವಜನತೆಗೆ ಉಪಯುಕ್ತ ಉಡುಗೊರೆಯಾಗಲಿದೆ ಎಂದ ಅವರು “ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಕೊಂಡೋದಿರಿ’ ಎಂಬ ಹಾಸ್ಯ ಚುಟಾಕಿಯೊಂದಿಗೆ ಕಿವಿಮಾತನ್ನು ಹೇಳಿದರು.
ಕೃತಿಕಾರ ಕೆ.ಪಿ.ಪುತ್ತೂರಾಯರು ಮಾತನಾಡಿ, ನನ್ನ ಮಾತೃ ಭಾಷೆ ತುಳು. ಪಕ್ಕದ ಊರಿನ ಭಾಷೆ ಮಲಯಾಳಂ, ದ್ವಿತೀಯ ಭಾಷೆಯಾಗಿ ಕಲಿತದ್ದು ಹಿಂದಿ. ಆದರೆ ನನ್ನ ಹೃದಯದಲ್ಲಿರುವ ಭಾಷೆ ಮಾತ್ರ ಕನ್ನಡವಾಗಿದೆ. ಕನ್ನಡ ಅರ್ಥ ಮಾಡಿಕೊಳ್ಳದವರಿಗೆ ಕಲ್ಲು, ಅರ್ಥ ಮಾಡಿಕೊಂಡವರಿಗೆ ಅದು ಕಲ್ಲು ಸಕ್ಕರೆ. ಇದುವೇ ನಮ್ಮ ಕನ್ನಡದ ವೈಶಿಷ್ಟ.
ಸಾಹಿತ್ಯ ಕೃಷಿಗೆ ದೊಡ್ಡ ಗದ್ದೆ ಬೇಕಿದೆ. ಆದರೆ, ನನ್ನಲ್ಲಿ ಗದ್ದೆಯಿಲ್ಲ. ಸಾಹಿತ್ಯದ ಸಂತೆಯಲ್ಲಿ ನನ್ನದೊಂದು ಚಿಲ್ಲರೆ ಅಂಗಡಿಯಾಗಿದ್ದು ವ್ಯಾಪಾರ ಚೆನ್ನಾಗೇ ಇದೆ ಎಂದು ಸಂತಸವ್ಯಕ್ತಪಡೆಸಿದರು. ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ, ಕರ್ನಾಟಕ ಪ್ರತಿಭಾ ಕೇಂದ್ರ ಅಧ್ಯಕ್ಷ ಪಾನ್ಯಂ ನಟರಾಜ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್