ಚಂದ್ರಯಾನ-2ಗೆ ರಸ್ತೆಗಳೂ ಲಕ ಲಕ!
Team Udayavani, Sep 7, 2019, 3:05 AM IST
ಬೆಂಗಳೂರು: ವಾರದ ಹಿಂದೆ ಅಲ್ಲಿನ ರಸ್ತೆಯುದ್ದಕ್ಕೂ ಗುಂಡಿಗಳು, ಪೈಪ್ಲೈನ್ಗಳು ಬಿದ್ದಿದ್ದವು. ಎತ್ತರಿಸಿದ ಮಾರ್ಗದಲ್ಲಿ ಮಳೆ ಬಿದ್ದರೆ, ಅದರಲ್ಲಿನ ಪೈಪ್ನಿಂದ ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಆ ಮಳೆನೀರಿನ ಸ್ನಾನ ಆಗುತ್ತಿತ್ತು. ಆದರೆ ಶುಕ್ರವಾರ ರಸ್ತೆಯ ಚಿತ್ರಣವೇ ಬದಲಾಗಿದ್ದು, ಹುಡುಕಿದರೂ ಗುಂಡಿಗಳ ಗುರುತು ಸಿಗುತ್ತಿರಲಿಲ್ಲ. ಇದೆಲ್ಲವೂ ಚಂದ್ರಯಾನ-2 ಎಫೆಕ್ಟ್!
ಬಾಹ್ಯಾಕಾಶದಲ್ಲಿ ಚಂದ್ರನ ಸುತ್ತ ತಿರುಗುತ್ತಿರುವ “ಚಂದ್ರಯಾನ-2’ಕ್ಕೂ ನಗರದ ಪೀಣ್ಯ ರಸ್ತೆಗೂ ಯಾವ ಸಂಬಂಧ? ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ನೀವು ಕೇಳಬಹುದು. ಆದರೆ, ಸ್ವಾರಸ್ಯ ಇರುವುದು ಇಲ್ಲಿಯೇ. ಮಹತ್ವಾಕಾಂಕ್ಷಿ ಈ ಉಪಗ್ರಹದ ಹಗುರ ಚಂದ್ರನ ಸ್ಪರ್ಶಕ್ಕೆ ಸಾಕ್ಷಿಯಾಗಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಬರುವ ಪ್ರಧಾನಿ, ಇದೇ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೋ ಟೆಲಿಮೆಟ್ರಿಕ್ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್ವರ್ಕ್ (ಐಎಸ್ಟಿಆರ್ಎಸಿ) ಕೇಂದ್ರಕ್ಕೆ ರಸ್ತೆ ಮೂಲಕ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ರಸ್ತೆ ದುರಸ್ತಿ ಕಾರ್ಯ ನಡೆಸಲಾಗಿತ್ತು.
ಗೊರಗುಂಟೆಪಾಳ್ಯದಿಂದ ಜಾಲಹಳ್ಳಿ ಕ್ರಾಸ್ನ ಎಡಕ್ಕೆ ತಿರುಗುತ್ತಿದ್ದಂತೆ ಜಲ ಮಂಡಳಿ ರಸ್ತೆ ಕೊರೆದಿತ್ತು. ಇದರಿಂದ ಅಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗಿತ್ತು. ಈ ಬಗ್ಗೆ ಅಧಿಕಾರಿಗಳು ತಿರುಗಿ ಕೂಡ ನೋಡಿರಲಿಲ್ಲ. ಗುರುವಾರ ಆ ರಸ್ತೆ ಸಂಪೂರ್ಣ ದುರಸ್ತಿಯಾಗಿದೆ. ಅದೇ ರೀತಿ, ಎತ್ತರಿಸಿದ ಮಾರ್ಗದಿಂದ ಮಳೆ ನೀರು ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಸುರಿಯುತ್ತಿತ್ತು. ಅದನ್ನೂ ಶುಕ್ರವಾರ ದುರಸ್ತಿ ಮಾಡಿದ್ದಾರೆ. ಇಸ್ರೋದ ಚಂದ್ರಯಾನ-2 ಕಾರ್ಯಕ್ರಮಕ್ಕೆ ಹಾಗೂ ಇದನ್ನು ವೀಕ್ಷಿಸಲು ಆಗಮಿಸುತ್ತಿರುವ ಪ್ರಧಾನಿಗೆ ಅಭಿನಂದನೆಗಳು ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಹೇಳಿದರು.
ಯಶವಂತಪುರ ಬಳಿ ರಸ್ತೆ ಉಬ್ಬುಗಳು (ಎರಡೂ ಬದಿಯಲ್ಲಿದ್ದವು) ಇದ್ದವು. ಅವುಗಳನ್ನು ತೆರವುಗೊಳಿಸಿ, ಡಾಂಬರೀಕರಣಗೊಳಿಸಲಾಗಿದೆ. ಅಲ್ಲದೆ, ಮಾರ್ಗದುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ತಲೆಯೆತ್ತಿದ್ದವು. ಮೇಲಧಿಕಾರಿಗಳ ಸೂಚನೆ ಮೇರೆಗೆ ನಿರಂತರವಾಗಿ ಗುಂಡಿ ಮುಚ್ಚಲಾಗಿದೆ. ಮೂರರಿಂದ ನಾಲ್ಕು ತಂಡಗಳು ಈ ಕೆಲಸ ಕೈಗೆತ್ತಿಕೊಂಡಿವೆ ಎಂದು ರಸ್ತೆ ಉಬ್ಬು ತೆರವುಗೊಳಿಸುತ್ತಿದ್ದ ಗುತ್ತಿಗೆದಾರರ ಸಹಾಯಕರೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ