ಸರ್ಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣ
Team Udayavani, Mar 1, 2019, 6:09 AM IST
ಬೆಂಗಳೂರು: ದಿ ಬೆಂಗಳೂರು ನಾರ್ತ್ ರೌಂಡ್ ಟೇಬಲ್ 25 ಮತ್ತು ಲೇಡಿಸ್ ಸರ್ಕಲ್ 14 ಪಾಲುಗಾರಿಕೆಯಲ್ಲಿ ಐಟಿಸಿ ಎಸ್ಸೆಂಟ್ರಾ ಹಾಗೂ ಗಿರಿಯಾಸ್ ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪಾಪುರ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 3 ಕೊಠಡಿಗಳನ್ನು ಹಾಗೂ ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳನ್ನು ನಿರ್ಮಿಸಿ ದಾನವಾಗಿ ನೀಡಿದೆ.
ನೂತನ ಕೊಠಡಿಗಳನ್ನು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಐಟಿಸಿ ಸಿಇಒ ಸುರಜಿತ್ ಘೋಷ್ ಹಾಗೂ ಸಿಎಫ್ಒ ಕೊಯಲ್ ಮುಖರ್ಜಿ ಉದ್ಘಾಟಿಸಿದರು. 30 ಲಕ್ಷ ರೂ.ಗಳಲ್ಲಿ ನಿರ್ಮಿಸಿರುವ ಐದು ಕೊಠಡಿಗಳ ಬಹುಪಾಲು ದೇಣಿಗೆ ಐಟಿಸಿ ಮತ್ತು ಗಿರಿಯಾಸ್ ನೀಡಿವೆ. ಎರಡೂ ಶಾಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೊಸ ಕೊಠಡಿಗಳಿಂದ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ರೌಂಡ್ ಟೇಬಲ್ ಇಂಡಿಯಾದ ಧ್ರುವ್ ದಾಲಿಯ, ಲೇಡಿಸ್ ಸರ್ಕಲ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ನರ್ಮತಾ ಶೆಣೈ, ಏರಿಯಾ-6 ಚೇರ್ಮನ್ ಧೀರಜ್ ಬಜಾಜ್, ಏರಿಯಾ-6 ಎಎಸ್ಟಿ ಅಂಗದ್ ಕೆಎಮ್, ಏರಿಯಾ-6 ಎವಿಸಿ ಆರತಿ ಶ್ರಫ್, ಥೀಮ್ ಪ್ರಾಜೆಕ್ಟ್ ಕನೀನರ್ ರೈನಾ ಭಾಟಿಯ, ಎಲ್ಸಿ ಚೇರ್ಪರ್ಸನ್ ಎಲ್ಸಿ-14 ನಿಧಿ ಸೊಮಾನಿ, ಏರಿಯಾ ಪ್ರಾಜೆಕ್ಟ್ ಕನೀನರ್ ಟಿಆರ್ ಗೋಪಾಲ್ ಗೆರಾ ಹಾಗೂ ಟಿಆರ್ ರಾಜ್ ಕಿರಣ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ