ಶಾಸಕ ಬಸನಗೌಡಗೆ 150 ಕೋಟಿ ಆಫರ್: ಉಗ್ರಪ್ಪ
Team Udayavani, May 19, 2018, 6:10 AM IST
ಬೆಂಗಳೂರು: ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಬಿಜೆಪಿ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ನ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ಗೆ ಬಿಜೆಪಿ ಮುಖಂಡ, ಮಾಜಿ ಸಚಿವ ಜೆ. ಜನಾರ್ದನ ರೆಡ್ಡಿ 150 ಕೋಟಿ ರೂ.ಗಳ ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ಆರೋಪಿಸಿದ್ದು, ಇಬ್ಬರೂ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಅವರು,ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷ
ಒಡ್ಡುತ್ತಿದ್ದಾರೆ. ಇದುವರೆಗೂ 25 ಕೋಟಿ ರೂ. ಆಮಿಷ ಒಡ್ಡುತ್ತಿದ್ದರು.ಈಗ 150 ಕೋಟಿ ರೂ.ಆಮಿಷ ಒಡ್ಡಿ
ದ್ದಾರೆ. ಸ್ವತಃ ಜನಾರ್ದನ ರೆಡ್ಡಿ ಅವರು ಬಸನಗೌಡ ದದ್ದರ್ಗೆ ದೂರವಾಣಿ ಕರೆ ಮಾಡಿ ಆಮಿಷ ಒಡ್ಡಿದ್ದಾರೆ ಎಂದರು.
ಅಮಿತ್ ಶಾ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರಿಗೆ ಆಮಿಷವೊಡ್ಡಿರುವ ಆಡಿ ಯೋವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಆಡಿಯೋದಲ್ಲಿರುವುದು: ” ಹಲೋ ಬಸನಗೌಡ, ಫ್ರಿಯಾಗಿದ್ದಿಯಮ್ಮಾ… ಏನಿಲ್ಲಮ್ಮಾ ನಿನ್ನದು ಹಳೆಯದೇ
ನಿದ್ದರೂ ಮರೆತು ಬಿಡು. ನಾನು ನಿನಗೆ ಅರ್ಧ ರಾತ್ರಿಯಲ್ಲಿ ಹೇಳುತ್ತಿದ್ದೇನೆ.
ನನಗೆ ಒಳ್ಳೆಯ ಕಾಲ ಶುರುವಾಗಿದೆ. ನಿನ್ನ ಹತ್ತಿರ ನೇರವಾಗಿ ದೊಡ್ಡವರು ರಾಷ್ಟ್ರೀಯ ಅಧ್ಯಕ್ಷರು ಮಾತನಾಡಲಿ
ದ್ದಾರೆ. ಒನ್ ಟು ಒನ್ ಮಾತನಾಡಿಯೇ ಮುಂದಿನ ಹೆಜ್ಜೆ ಇಡೋಣ.
ಶಿವನಗೌಡ ನಾಯಕ್ ನನ್ನ ಮಾತು ಕೇಳಿ ಮಂತ್ರಿಯಾಗಿ ಈಗ ಉದಾಟಛಿರ ಆಗಿದ್ದಾನೆ. ಸಾಯೋವರೆಗೂ ಎಂಎಲ್ಎ ಆಗೋವಷ್ಟು ಶಕ್ತಿವಂತ ನಾಗಿದ್ದಾನೆ. ನನ್ನಿಂದಾನೇ ಆಗಿದ್ದು, ರಾಜುಗೌಡಾನೂ ನನ್ನಿಂದಲೇ ಆಗಿದ್ದು.
ಇವತ್ತು ಏನಂದರೆ, ಶಿವನಗೌಡ ಗೆದ್ದರೂ ಪ್ರಯೋಜನ ಇಲ್ಲ. ನೀನು ಇವತ್ತು ಮಂತ್ರಿ ಆಗುತ್ತಿ. ಏನಂದರೆ, ದೊಡ್ಡವರ ಜೊತೆ ಒನ್ ಟು ಒನ್ ನಾನೇ ಮಾತನಾಡಿಸುತ್ತೇನೆ. ದೇಶದಲ್ಲಿ ಅವರು ಏನು ಆಡಳಿತ ಮಾಡುತ್ತಿದ್ದಾರೆ. ಅವರು ಮಾತು ಉಳಿಸಿಕೊಳ್ಳುವಂ ತವರಿದ್ದಾರೆ.
ನೀನು ಈಗ ಏನ್ ಆಸ್ತಿ ಮಾಡಿಕೊಂಡಿದ್ದೀಯ ಅದರ ನೂರರಷ್ಟು ಆಸ್ತಿ ಮಾಡಿಕೊಳ್ಳುತ್ತೀಯ ಬಸನಗೌಡ’ ಎಂದು
ಹೇಳಿದ್ದಾರೆ ಎಂದು ಹೇಳಲಾಗಿದೆ.
“ಇಲ್ಲ ಸರ್, ಲಾಸ್ಟ್ ಪರಿಸ್ಥಿತಿಯೊಳಗ ನನಗ ಕರಕೊಂಡು ಬಂದು ಟಿಕೆಟ್ ಕೊಡಿಸಿ ಅವರ ಇಲೆಕ್ಷನ್ ಮಾಡ್ಯಾರು.
ಅವರಿಗೆ ದ್ರೋಹ ಮಾಡೋದು ಅರ್ಥ ಇಲ್ಲಾ. ನಿಮ್ಮ ಬಗ್ಗೆ ನನಗೆ ಗೌರವ ಇದೆ’ಎಂದು ಬಸನಗೌಡ ಹೇಳಿರುವುದು
ಆಡಿಯೋದಲ್ಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ