ಈರುಳ್ಳಿ ವಾಹನದಲ್ಲಿ ಹೊಸನೋಟು!:4 ಕೋಟಿ ರೂ ಸಹಿತ ಮೂವರ ಸೆರೆ
Team Udayavani, Jan 31, 2017, 2:49 PM IST
ಬೆಂಗಳೂರು: ನಗರದ ಕೋಡಿಗೆ ಹಳ್ಳಿ ಬಳಿ ಸಿಸಿಬಿ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿ ಈರುಳ್ಳಿ ವಾಹನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಬರೋಬ್ಬರಿ 4,27,800 ರೂಪಾಯಿ ಹಣ ಸಹಿತ ಮೂವರನ್ನು ಬಂಧಿಸಿದ್ದಾರೆ.
ಬಂಧಿತರು ಅಬ್ದುಲ್ , ಶಂಶುದ್ದೀನ್ ಮತ್ತು ಅಫ್ಜಲ್ ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದ ಹಣದ ಪೈಕಿ 3 ಕೋಟಿಯಷ್ಟು 2000 ರೂಪಾಯಿ ಮುಖಬೆಲೆಯ ನೋಟುಗಳಾಗಿದ್ದು ಉಳಿದ ಹಣ 500 ರೂಪಾಯಿ ಮತ್ತು 100 ರೂಪಾಯಿ ಮುಖಬೆಲೆಯದ್ದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಬಂಧಿತರ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು,1 ಲಕ್ಷ ರೂಪಾಯಿ ಹಣ ಸಾಗಾಟ ಮಾಡಿದ್ದಕ್ಕೆ 100 ರೂಪಾಯಿ ಕಮಿಷನ್ ಪಡೆಯುತ್ತಿದ್ದರು ಎನ್ನಲಾಗಿದೆ. ಹಣ ಯಾರಿಗೆ ಸೇರಿದ್ದುದು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.