50 ಲಕ್ಷ ರೂ. ದರೋಡೆ
Team Udayavani, Jul 19, 2018, 12:54 PM IST
ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಬಳಿಯ ಹೆಲ್ತ್ ಲೇಔಟ್ನಲ್ಲಿ ಮಂಗಳವಾರ ಬೆಳಗ್ಗೆ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ರೆಸಾರ್ಟ್ ಖರೀದಿಗೆಂದು ಇಟ್ಟಿದ್ದ 50 ಲಕ್ಷ ರೂ. ಹಣ ದರೋಡೆ ಮಾಡಿದ್ದಾರೆ.
ಬಸವೇಶ್ವರನಗರದ ರಾಮುಗೌಡ(64) ಹಣ ಕಳೆದುಕೊಂಡ ವರು. ಈ ಸಂಬಂಧ ರಾಮುಗೌಡ ಅನ್ನಪೂರ್ಣೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ. ದೇವಾಲಯದ ಬಳಿ ಪೂಜೆ ಸಾಮಗ್ರಿ ವ್ಯಾಪಾರ ಮಾಡುವ ರಾಮುಗೌಡ, ದೇವೇಂದ್ರಪ್ಪ ಎಂಬುವರಿಗೆ ಸೇರಿದ ರಾಮೋಹಳ್ಳಿಯಲ್ಲಿರುವ 2 ಎಕರೆ ಜಾಗ ಖರೀದಿಗೆ ಮುಂದಾಗಿದ್ದರು.
ಅದಕ್ಕಾಗಿ ಬ್ಯಾಂಕ್ನಿಂದ 50 ಲಕ್ಷ ರೂ. ಡ್ರಾ ಮಾಡಿಕೊಂಡು ತಂದಿದ್ದರು. ಜು.17ರಂದು ರೆಸಾರ್ಟ್ ಖರೀದಿ ಮಾಡುವ ವಿಚಾರವಾಗಿ ಮಾತನಾಡಲು ಹೆಲ್ತ್ ಲೇಔಟ್ನಲ್ಲಿರುವ ಸಂಬಂಧಿ ಮನೆಗೆ ಬರುವಂತೆ ರಾಮುಗೌಡ ಜಮೀನು ಮಾಲೀಕ ದೇವೇಂದ್ರಪ್ಪಗೆ ಬರುವಂತೆ ಸೂಚಿಸಿದ್ದರು. ಇದೇ ವೇಳೆಯೇ ಕಾರಿನಲ್ಲಿ ಬಂದ ಆರು ಮಂದಿ ದರೋಡೆಕೋರರು, ಮನೆಯೊಳಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ 50 ಲಕ್ಷ ರೂ. ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ರೈಸ್ ಪುಲ್ಲಿಂಗ್ ವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ವಾಹನ ನೊಂದಣಿ ಸಂಖ್ಯೆ ಪತ್ತೆಯಾಗಿದ್ದು, ದೇವೇಂದ್ರಪ್ಪ ಅವರನ್ನು ವಿಚಾರಣೆಗೊಳ ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ