ವಿಜಯ್ ನಿಧನಕ್ಕೆ ಚಿತ್ರರಂಗ ಅಶ್ರುತರ್ಪಣ
Team Udayavani, Jun 16, 2021, 1:31 PM IST
ಬೆಂಗಳೂರು: ರವೀಂದ್ರ ಕಲಾಕ್ಷೇತ್ರದ ರಂಗತಾಲೀಮು ಕೊಠಡಿಯಲ್ಲಿ ಹಲವು ನಾಟಕಗಳರಂಗತಾಲೀಮು ನಡೆಸಿದ್ದ ನಟ ಸಂಚಾರಿ ವಿಜಯ್ಮಂಗಳವಾರ ಆ ಕೊಠಡಿಗಳ ಮುಂಭಾಗ ಶವವಾಗಿಮಲಗಿದ್ದರು. ಆತ ಯಾವುದೋ ನಾಟಕದ ತಾಲೀಮಿನಲ್ಲಿ ಮುಳುಗಿದ್ದಾನೆ ಎಂಬಂತೆ ವಿಜಯ್ ಮೃತದೇಹ ಕಾಣುತ್ತಿತ್ತು.
ಶನಿವಾರ ಮಧ್ಯರಾತ್ರಿ ಬೈಕ್ ಅಪಘಾತದಿಂದತೀವ್ರವಾಗಿ ಗಾಯಗೊಂಡು, ಮೂರು ದಿನಗಳಿಂದಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ನಟಸಂಚಾರಿ ವಿಜಯ್ ಮಂಗಳವಾರ ಬೆಳಗಿನ ಜಾವ3.34ರ ಸುಮಾರಿಗೆ ಕೊನೆಯುಸಿರೆಳೆದರು.ಪಾರ್ಥೀವ ಶರೀರವನ್ನು ಬೆಂಗಳೂರಿನ ರವೀಂದ್ರಕಲಾಕ್ಷೇತ್ರಕ್ಕೆ ತಂದು ಬೆಳಗ್ಗೆ 8 ರಿಂದ 10.30 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.ಇನ್ನು ಚಂದನವನದ ನಟ-ನಟಿಯರು ಕೆಲವರುಪ್ರತ್ಯಕ್ಷವಾಗಿ ಅಂತಿಮ ನಮನ ಸಲ್ಲಿಸಿ ಸಂತಾಪಸೂಚಿಸಿದ್ದರೆ ಕೆಲವರು ಟ್ವೀಟ್, ಪೇಸ್ಬುಕ್ಮೂಲಕ ಪರೋಕ್ಷವಾಗಿ ಕಂಬನಿ ಮಿಡಿದಿದ್ದಾರೆ.
ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್,ಶಂಕರ್ ನಾಗ್ ನಂತರ ಚಿಕ್ಕವಯಸ್ಸಿನಲ್ಲೆ ರಾಷ್ಟ್ರಪ್ರಶಸ್ತಿಪಡೆದು ಅವರಂತೆಯೇ ಚಿಕ್ಕವಯಸ್ಸಿನಲ್ಲಿ ನಮ್ಮನ್ನುಅಗಲಿದ್ದಾರೆ ಎಂದು ಹೇಳಿದ್ದಾರೆ. “ಹಠಾತ್ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ನನಗೆ ತೀವ್ರ ನೋವುತಂದಿದೆ ಎಂದು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.ಅವರು ಅದ್ಭುತ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತಸಂಚಾರಿ ವಿಜಯ್ ರವರು ಬೈಕ್ ಅಪಘಾತದಿಂದ ಅಸುನೀಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಚಿತ್ರರಂಗವನ್ನು ಶೋಕದಲ್ಲಿ ಮುಳುಗಿಸಿದೆ. ಎಂದು ನಟ,ನಿರ್ದೇಶಕ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು,ಸುಮಲತಾ ಸಂತಾಪ ಸೂಚಿಸಿದ್ದು, ನಟ ಶರಣ್,ನಟಿ ಶ್ರುತಿ ಹರಿಹರನ್, ರಂಗಕರ್ಮಿ ಹಾಗೂ ನಟಮಂಡ್ಯರಮೇಶ್, ನಟ ನಿಖೀಲ್ ಕುಮಾರ್ ಕಂಬನಿಮಿಡಿದಿದ್ದು, ಅವರ ಕುಟುಂಬಕ್ಕೆ ನೋವನ್ನುಸಹಿಸುವ ಶಕ್ತಿ ನೀಡಲಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ