ಮೀನು ಸಾಯುವ, ವಲಸೆ ಹಕ್ಕಿ ಬರುವುದನ್ನು ನಿಲ್ಲಿಸುವ ಮೊದಲು ಕೆರೆ ಸ್ವಚ್ಛಗೊಳಿಸಿ: ಬಿಜ್ಜೂರ್
Team Udayavani, Jun 27, 2022, 3:51 PM IST
Representative Image
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಪರಿಸರದ ಅಂದವನ್ನು ಹದಗೆಡಿಸುತ್ತಿದೆ. ಸುಂದವಾದ ಕೆರೆಗಳು ಮಲಿನಗೊಳ್ಳುತ್ತಿವೆ. ಈ ನಡುವೆ ಖ್ಯಾತ ಅಂಕಣಕಾರ ಹಾಗು ಬ್ರ್ಯಾಂಡ್ ಸ್ಟ್ರಾಟೆಜಿಸ್ಟ್ ಹರೀಶ್ ಬಿಜ್ಜೂರ್ ಅವರು ಕಾಡುಗೊಂಡನಹಳ್ಳಿ ಕೆರೆ ಮಲಿನಗೊಳ್ಳುತ್ತಿರುವ ಕುರಿತು ಕೂ ಮಾಡಿದ್ದಾರೆ.
ಸುಂದರವಾದ ಕಾಡುಗೊಂಡನಹಳ್ಳಿ ಕೆರೆಗೆ ಒಳಚರಂಡಿ ನೀರು ಹರಿಯುತ್ತಿರುವ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು ಕೆರೆಯನ್ನು ರಕ್ಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಕೂ ಮಾಡಿರುವ ಹರೀಶ್ ಬಿಜ್ಜೂರ್, ಒಳಚರಂಡಿಯಲ್ಲಿ ಕಸ ತುಂಬಿಕೊಂಡು ನೀರು ಗಬ್ಬೆದ್ದು ನಾರುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ‘ಈ ಕೊಳಕು ಚರಂಡಿ ನೀರು ಸುಂದರವಾದ ಕಾಡುಗೊಂಡನಹಳ್ಳಿ ಕೆರೆಗೆ ಹರಿಯುತ್ತದೆ! ಮೀನು ಸಾಯುವ ಮತ್ತು ವಲಸೆ ಹಕ್ಕಿಗಳು ಬರುವುದನ್ನು ನಿಲ್ಲಿಸುವ ಮೊದಲು ಇದರ ಸ್ವಚ್ಛತೆ ಕಾಪಾಡಿ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!