ಹಾರರ್ ಚಲನಚಿತ್ರ ನೋಡಿ ಮೂರ್ಛೆ ಹೋದ ಸಹನಟ!
Team Udayavani, Oct 14, 2017, 7:30 AM IST
ಬೆಂಗಳೂರು: ತಾನೇ ನಟಿಸಿದ್ದ “ಗಾಯತ್ರಿ’ ಎಂಬ ದೆವ್ವದ ಸಿನಿಮಾ ನೋಡುತ್ತಿದ್ದ ಸಹನಟರೊಬ್ಬರು ಭಯಗೊಂಡು ಮೂರ್ಛೆ ಬಿದ್ದ ಘಟನೆ ಶುಕ್ರವಾರ ಮೇನಕ ಚಿತ್ರಮಂದಿರದಲ್ಲಿ ನಡೆದಿದೆ.
ಮಾರ್ನಿಂಗ್ ಶೋ ವೀಕ್ಷಿಸಲು ಬಂದಿದ್ದ ಚನ್ನರಾಯಪಟ್ಟಣ ಗ್ರಾಮದ ಲಕ್ಕಪ್ಪ ಎಂಬುವರು ಗಾಬರಿಗೊಂಡು ಮೂರ್ಛೆ ಹೋದವರು. ಸತ್ಯಸಾಮ್ರಾಟ್ ನಿರ್ದೇಶನದ ಹಾರರ್ ಚಿತ್ರ “ಗಾಯತ್ರಿ’ಯಲ್ಲಿ ಲಕ್ಕಪ್ಪ ಅವರು ಸಣ್ಣ ಪಾತ್ರ ನಿರ್ವಹಿಸಿದ್ದರು. ಕಳೆದ ಎಂಟು ತಿಂಗಳ ಹಿಂದೆ ಶುರುವಾಗಿದ್ದ “ಗಾಯತ್ರಿ’, ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿದೆ. ಚಿತ್ರ ಶುರುವಾಗಿ ಅರ್ಧಗಂಟೆಯಲ್ಲೇ ತೆರೆಯ ಮೇಲೆ ದೆವ್ವದ ದೃಶ್ಯಗಳು ರಾರಾಜಿಸಿವೆ. ಅದನ್ನು ವೀಕ್ಷಿಸುತ್ತಿದ್ದ ಲಕ್ಕಪ್ಪ ಅವರು ಇದ್ದಕ್ಕಿದ್ದಂತೆ ಗಾಬರಿಗೊಂಡು ನೆಲಕ್ಕೆ ಬಿದ್ದು ಮೂಛೆì ಹೋಗಿದ್ದಾರೆ. ಈ ವೇಳೆ ಅವರ ಬಾಯಲ್ಲಿ ರಕ್ತ ಕಾಣಿಸಿಕೊಂಡಿದೆ. ಅಕ್ಕಪಕ್ಕದ್ದಲ್ಲಿದ್ದವರು ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಿನಿಮಾ ನೋಡುವಾಗ, ಗಾಬರಿಗೊಂಡು ಮೂಛೆì ಹೋದ ಲಕ್ಕಪ್ಪ ಅವರನ್ನು ಪರೀಕ್ಷಿಸಿದ ವೈದ್ಯರು, ಹೆದರಿರುವುದರಿಂದ ಹೀಗಾಗಿದ್ದು, ಜೀವಕ್ಕೇನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.
ಚಿತ್ರದ ನಿರ್ಮಾಪಕಿ ಭಾರತಿಗೌಡ ಅವರು ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ, ಲಕ್ಕಪ್ಪ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಲಕ್ಕಪ್ಪ ಅವರಿಗೆ ನಟನೆ ಹೊಸದು. ಇದೇ ಮೊದಲ ಬಾರಿಗೆ “ಗಾಯತ್ರಿ’ ಚಿತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ನಟಿಸುವಾಗಲೇ ಅವರು ಅನೇಕ ಸಲ ಗಾಬರಿಗೊಂಡಿದ್ದರು ಎಂದು ಚಿತ್ರದ ಮತ್ತೂಬ್ಬ ನಿರ್ಮಾಪಕ ವಿ.ಕುಮಾರ್ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ. ಸಿನಿಮಾ ನೋಡೋಕೆ ಬಂದು, ಕೆಲ ದೆವ್ವದ ದೃಶ್ಯಗಳನ್ನು ನೋಡಿ, ಈ ರೀತಿ ಭಯಗೊಂಡು ಮೂಛೆì ಹೋಗಿದ್ದರಿಂದ ಚಿತ್ರತಂಡದವರಿಗೂ ಭಯವಾಗಿದೆ. ಈ ಘಟನೆಯಿಂದಾಗಿ ಚಿತ್ರ ಪ್ರದರ್ಶನ ಅರ್ಧಗಂಟೆ ಸ್ಥಗಿತಗೊಂಡಿತ್ತು. ಲಕ್ಕಪ್ಪ ಅವರನ್ನು ಆಸ್ಪತ್ರೆಗೆ ಕಳುಹಿಸಿದ ಬಳಿಕ ಪ್ರದರ್ಶನವನ್ನು ಮುಂದುವರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ