ಅಂಬರೀಶ್ ಮನೆಗೆ ಶತ್ರುಘ್ನ ಸಿನ್ಹಾ ಭೇಟಿ
Team Udayavani, Dec 21, 2018, 6:00 AM IST
ಬೆಂಗಳೂರು: ನ.24ರಂದು ನಿಧನರಾದ ನಟ ಅಂಬರೀಶ್ ಮನೆಗೆ, ಬಾಲಿವುಡ್ನ ಹಿರಿಯ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಭೇಟಿ ನೀಡಿ, ಅಂಬರೀಶ್ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್ಗೆ ಸಾಂತ್ವನ ಹೇಳಿದರು. ಇದೇ ವೇಳೆ, ಅಂಬರೀಶ್ ಅವರೊಂದಿಗಿನ ತಮ್ಮ ಸ್ನೇಹ, ಒಡನಾಟ, ಕಳೆದ ನೆನಪುಗಳನ್ನು ಅಂಬಿ ಕುಟುಂಬದ ಜೊತೆ ಮೆಲುಕು ಹಾಕಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಶತ್ರುಘ್ನ ಸಿನ್ಹಾ, “ನನ್ನ ಅದ್ಭುತ ಸ್ನೇಹಿತ, ಜನಪ್ರಿಯ ನಾಯಕ, ಕನ್ನಡದ ಸೂಪರ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಇಂದು ಭಾವನಾತ್ಮಕ ಘಳಿಗೆಯನ್ನು ಕಳೆದೆ. ಅವರ ಶ್ರೀಮತಿ ಹಾಗೂ ಅವರ ಪುತ್ರ, ಭವಿಷ್ಯದ ಸ್ಟಾರ್ ಅಭಿಷೇಕ್ ಅವರನ್ನು
ಭೇಟಿಯಾದೆ. ಕಳೆದ ತಿಂಗಳು ಅವರು ಸ್ವರ್ಗದಲ್ಲಿರುವ ತಮ್ಮ ಸ್ಥಾನಕ್ಕೆ ಹೋಗಿದ್ದಾರೆ. ಅವರ ಸ್ನೇಹ ನನ್ನ ಮನದಲ್ಲಿ
ಶಾಶ್ವತವಾಗಿದೆ. ಈ ವೇಳೆ ನನ್ನನ್ನು ಗುರು ದ್ರೋಣಾಚಾರ್ಯರಿಗೆ ಹೋಲಿಸಿ, ಅಭಿಷೇಕ್ ತನ್ನನ್ನು ಏಕಲವ್ಯ ಎಂದು ಕರೆದುಕೊಂಡಿದ್ದು, ನನ್ನನ್ನು ಸಾಕಷ್ಟು ವಿನಮ್ರವಾಗಿಸಿತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?