ಶಿವರಾಮಕಾರಂತ ಬಡಾವಣೆ 300 ಕಟ್ಟಡ ಸಕ್ರಮ
Team Udayavani, Dec 3, 2021, 11:57 AM IST
ಬೆಂಗಳೂರು: ಡಾ.ಶಿವರಾಮಕಾರಂತ ಬಡಾವಣೆಯ 300ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಸಕ್ರಮಗೊಳಿಸಿ ಬಿಡಿಎಗೆ ಆದೇಶ ನೀಡಿದ್ದು ನಾಲ್ಕು ವಾರದ ಒಳಗೆ ಕಟ್ಟಡದ ಮಾಲೀಕರಿಗೆ ಸಕ್ರಮ ದೃಢೀಕರಣ ಪತ್ರ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಸೂಚನೆ ನೀಡಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಎ.ವಿ.ಚಂದ್ರಶೇಖರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ನ ಈ ತೀರ್ಪು ಸೂರಿಲ್ಲದವರಿಗೆ ಸೂರು ಕಲ್ಪಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಕ್ರಮ ದೃಢೀಕರಣ ಪತ್ರವನ್ನು ಕಟ್ಟಡದ ಮಾಲೀಕರಿಗೆ ನೀಡುವ ಪ್ರಕ್ರಿಯೆ ಕೂಡ ಜಸ್ಟೀಸ್ ಚಂದ್ರಶೇಖರಯ್ಯ ಕಮಿಟಿಯ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ ಎಂದರು.
ಸಕ್ರಮ ದೃಢೀಕರಣ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 300 ಕಟ್ಟಡಗಳ ಮಾಲೀಕರಿಗೆ ಶುಕ್ರವಾರ ಬೆಳಗ್ಗೆಯೊ ಳಗೆ ಅವರು ನೀಡಿರುವಂತಹ ಮೊಬೈಲ್ ಸಂಖ್ಯೆಗೆ ಸಂದೇಶ ಕೂಡ ನೀಡ ಲಾಗು ವುದು. ಈ ಪ್ರಕರಣಗಲ್ಲಿ ಸುಪ್ರೀಂ ಕೋರ್ಟ್ ಆರ್ಟಿಕಲ್ 142ರ ಅಧಿಕಾರವನ್ನು ಸದು ಪಯೋಗ ಮಾಡಿಕೊಂಡಿದ್ದು ಇದರಿಂದಾಗಿ ಸೂರು ಇಲ್ಲದ ಬಡ ಮತ್ತು ಮಧ್ಯವ ವರ್ಗ ದವರಿಗೆ ಸೂರ ಕಲ್ಪಿಸಿದಂತಾಗಿದೆ. ಕೋರ್ಟ್ ಈ ತೀರ್ಪು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಇದು ಟ್ರೈಲರ್ ಅಷ್ಟೇ: ಡಾ.ಶಿವರಾಮ ಕಾರಂತ ಲೇಔಟ್ ಭೂಸ್ವಾಧೀನ ಅಧಿಸೂಚನೆ ಸಂಬಂಧ ಬಿಡಿಎಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.ಇಲ್ಲಿವರೆಗೆ 6,200 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ 5700 ಅರ್ಜಿಗಳು ಬಾಕಿ ಇವೆ.ಉಳಿದ ಅರ್ಜಿಗಳನ್ನು ಪರಿಶೀಲನೆ ಮಾಡುವ ಕೆಲಸ ನಡೆಯುತ್ತಿದೆ.ಈಗ ಆಗಿದ್ದು ಟ್ರೈಲರ್ ಅಷ್ಟೇ ಡಿ. 15ರ ಒಳಗೆ ಮತ್ತೂಂದು ವರದಿಯನ್ನು ನೀಡಲಾಗುತ್ತದೆ ಎಂದರು.
ಸಕ್ರಮ ಸಂಬಂಧ ಒಂದಿಷ್ಟು ಹಣನ್ನು ಬಿಡಿಎಗೆ ಮನೆ ಮಾಲೀಕರು ನೀಡಬೇಕಾಗು ತ್ತದೆ.ಅದನ್ನು ಬಿಡಿಎ ನಿರ್ಧರಿಸಲಿದೆ .2018 ಒಳಗೆ ಕಟ್ಟಡ ನಿರ್ಮಾಣ ಮಾಡಿಕೊಂಡವರಿಗೆ ಮಾತ್ರ ಈ ಆದೇಶ ಅನ್ವಯಿಸಲಿದೆ.ಉಳಿದವ ರಿಗೆ ಈ ತೀರ್ಪು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋ ಸಂರಕ್ಷಣೆ ಮಾಡಿದರೆ ನಾಡಿನ ಸಮಸ್ತ ಸಂಪತ್ತು ವೃದ್ಧಿ; ಪೇಜಾವರ ಶ್ರೀ ಅಭಿಮತ
ಕುಡಿವ ನೀರಿಗೆ ಗಲ್ಲಿ ಗಲ್ಲಿ ಅಲೆಯುತ್ತಿರುವ ಗೊರಗುಂಟೆಪಾಳ್ಯ ಕೊಳೆಗೇರಿ ನಿವಾಸಿಗಳು
Water shortage: ಕಬ್ಬನ್ಪಾರ್ಕ್ನ ಬಾಲಭವನ ಬೋಟಿಂಗ್ಗೂ ನೀರಿನ ಬರ
Fraud: ನಕಲಿ ಪೇಮೆಂಟ್ ಆ್ಯಪ್ ಬಳಸಿ 2.29 ಲಕ್ಷ ಚಿನ್ನ ಖರೀದಿಸಿ ದೋಖಾ
Arrested: ಚಿನ್ನಾಭರಣ ದರೋಡೆಗೆ ಯತ್ನಿಸಿದ್ದ ನಾಲ್ವರ ಬಂಧನ
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ