500 ರೂ.ಗೆ ಕೂಲಿ ಕಾರ್ಮಿಕನ ಕೊಲೆ : ಆರೋಪಿ ಬಂಧನ
Team Udayavani, Mar 9, 2022, 11:47 AM IST
ಬಂಧಿತ ಆರೋಪಿ
ಬೆಂಗಳೂರು: ಐದು ನೂರು ರೂಪಾಯಿಗಾಗಿ ಕೂಲಿ ಕಾರ್ಮಿಕನ ತಲೆಗೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಕೊಲೆಗೈದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಮೂಲದ ಸಬಾಸ್ಟಿನ್ (19) ಬಂಧಿತ. ಆರೋಪಿ ಫೆ.24ರಂದು ಕಾಮಾಕ್ಷಿಪಾಳ್ಯದ ಸತೀಶ್ (42) ಎಂಬ ಕೂಲಿ ಕಾರ್ಮಿಕನನ್ನು ಕೊಲೆಗೈದಿದ್ದ.
ಆರೋಪಿ ಸಬಾಸ್ಟಿನ್ ಪಾನಿಪುರಿ ಅಂಗಡಿಗಳಲ್ಲಿ ಪ್ಲೇಟ್ ತೊಳೆಯುವ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ಫುಟ್ ಪಾತ್ ಮೇಲೆ ಮಲಗಿರುವ ಅಥವಾ ಮದ್ಯದ ಅಮಲಿ ನಲ್ಲಿ ಬಿದ್ದಿರುವ ವ್ಯಕ್ತಿಗಳ ಜೇಬುಗಳಲ್ಲಿನ ಹಣ, ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ. ಫೆ.24ರಂದು ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿಯ ಫುಟ್ಪಾತ್ನಲ್ಲಿ ಸತೀಶ್ ಕೆಲಸ ಮುಗಿಸಿಕೊಂಡು ಮಲಗಿದ್ದರು. ಅದನ್ನು ಗಮನಿಸಿದ ಆರೋಪಿ ಸತೀಶ್ ಜೇಬಿನಲ್ಲಿದ್ದ 500 ರೂ. ಹಾಗೂ 1 ಕೀ ಪ್ಯಾಡ್ ಮೊಬೈಲ್ನ್ನು ತೆಗೆದುಕೊಂಡಿದ್ದಾನೆ. ಎಚ್ಚರಗೊಂಡ ಸತೀಶ್, ಸೆಬಾಸ್ಟಿನ್ ಕೈಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಗಾಬರಿಗೊಂಡ ಆರೋಪಿ ಶರ್ಟ್ ಬಟ್ಟೆಯಿಂದ ಸತೀಶ್ನ ಕೈ ಕಟ್ಟಿ ಹಾಕಿ, ಆತನ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ.
ಕಾಮಾಕ್ಷಿಪಾಳ್ಯ ಪೊಲೀಸರು ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ