ಪಾರ್ಶ್ವವಾಯುಗೆ ಬೆನ್ನುಮೂಳೆ ಟಿಬಿ ಕಾರಣ


Team Udayavani, Jun 23, 2019, 3:04 AM IST

parfshva

ಬೆಂಗಳೂರು: ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಕ್ಷಯ (ಟಿಬಿ) ರೋಗಿಗಳು ಭಾರತದಲ್ಲಿದ್ದಾರೆ. ಸುಮಾರು 6 ದಶಲಕ್ಷದಷ್ಟು ಕ್ಷಯ ರೋಗ ಪ್ರಕರಣಗಳು ಇಲ್ಲಿವೆ. ಅದರಲ್ಲಿ ಶೇ. 2 ರಷ್ಟು ಮಂದಿ ಅಸ್ಥಿಪಂಜರ ವ್ಯವಸ್ಥೆಯ ಟಿಬಿಯಿಂದ ಬಳಲುತ್ತಿದ್ದರೆ, ಅರ್ಧಕ್ಕಿಂತ ಹೆಚ್ಚಿನವರು ಬೆನ್ನುಮೂಳೆ ಟಿಬಿಯನ್ನು ಹೊಂದಿದ್ದಾರೆ ಎಂದು ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್‌ ಸ್ಪೈನ್‌ ಸರ್ಜರಿ ಡಾ.ಅಮೃತ್‌ಲಾಲ್‌ ಎ. ಮಸ್ಕರೇನಸ್‌ ತಿಳಿಸಿದ್ದಾರೆ.

ನಗರದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷಯ ಅನಾದಿಕಾಲದ ರೋಗ. ಅತಿಯಾದ ಜನಸಂಖ್ಯೆ, ಅಪೌಷ್ಟಿಕತೆ, ಅಸ್ವತ್ಛತೆ, ಧೂಮಪಾನ, ಮದ್ಯಪಾನ, ಮಾದಕ ವ್ಯಸನ, ಎಚ್‌ಐವಿ ಸೋಂಕು ಇನ್ನಿತರ ದುಶ್ಚಟಗಳು ಕಾಯಿಲೆ ಹರಡಲು ಕಾರಣವಾದರೆ, ಮಧುಮೇಹ, ರೋಗ ನಿರೋಧಕ ಚಿಕಿತ್ಸೆ ಮತ್ತು ಅನುವಂಶೀಯ ಅನುಮಾನಗಳು ಕೂಡ ಕಾರಣವಾಗುತ್ತವೆ.

ಬೆನ್ನುಹುರಿಯಲ್ಲಿ ಕಿವು ಕಟ್ಟಿಕೊಂಡು ಬೆನ್ನು ಹುರಿಯ ಮೇಲೆ ಒತ್ತಡ ತರುವ ಈ ಟಿಬಿ ನರಮಂಡಲದೊಂದಿಗೂ ಬೆರೆತಿದೆ. ಬೆನ್ನುಹುರಿಯನ್ನು ಒತ್ತುವ ಮೂಲಕ ನರವೈಜ್ಞಾನಿಕ ಸಮಸ್ಯೆಗಳನ್ನು ತರುತ್ತದೆ. ಇದರಿಂದ ಕಾಲಿನ ಪಾರ್ಶ್ವವಾಯು ಅಥವಾ ದೇಹದ ಕೆಳಭಾಗದ‌ಲ್ಲಿ ಗಂಭೀರ ಸ್ವರೂಪದ ಪರಿಣಾಮಗಳು ಉಂಟಾಗುತ್ತವೆ. ಇದನ್ನು “ಪಾಟ್ಸ್‌ ಸ್ಪೈನ್‌’ ಎಂತಲೂ ಕರೆಯುತ್ತಾರೆ.

ಕನ್ಸಲ್ಟೆಂಟ್‌ ಚೆಸ್ಟ್‌ ಫಿಸಿಶಿಯನ್‌ ಡಾ.ವಸುನೇತ್ರ ಕಾಸರಗೋಡು ಅವರು ಮಾತನಾಡಿ, ಬೆನ್ನುಮೂಳೆಯ ಟಿಬಿ ಹೊಂದಿರುವ ರೋಗಿಗಳಿಗೆ ಆದಷ್ಟೂ ಶೀಘ್ರ ಟಿಬಿ ನಿರೋಧಕ ಚಿಕಿತ್ಸೆ ಆರಂಭಿಸುವುದು ಒಳ್ಳೆಯದು. ಕಾಯಿಲೆ ಗಂಭೀರ ಸ್ವರೂಪಕ್ಕೆ ತಿರುಗಿದಾಗ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ. ಒಟ್ಟಾರೆ ಚಿಕಿತ್ಸೆ ರೋಗದ ಗಂಭೀರತೆ ಮೇಲೆ ಅವಲಂಬಿಸಿರುತ್ತದೆ ಎಂದು ತಿಳಿಸಿದರು.

ವಿಕ್ರಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ.ಸೋಮೇಶ್‌ ಮಿತ್ತಲ್‌ ಅವರು ಮಾತನಾಡಿ, ಟಿಬಿ ಕಾಯಿಲೆ ಇಡೀ ಸಮಾಜಕ್ಕೆ ಒಂದು ರೀತಿಯಲ್ಲಿ ಸಂಕಷ್ಟದ ಸನ್ನಿವೇಶ ತಂದೊಡ್ಡುತ್ತದೆ. ಅದರಲ್ಲೂ ಬೆನ್ನುಮೂಳೆ ಟಿಬಿ ಅತ್ಯಂತ ನೋವುಕಾರಕ ಹಾಗೂ ರೋಗಿಯನ್ನು ಚಲನೆ ಇಲ್ಲದಂತೆ ಮಾಡುತ್ತದೆ ಎಂದರು.

ರೋಗ ಲಕ್ಷಣಗಳು: ಅಸ್ವಸ್ಥತೆ, ತೂಕ ಕಡಿಮೆ ಆಗುವುದು, ಹಸಿವಾಗದಿರುವುದು, ರಾತ್ರಿ ವೇಳೆ ಬೆವರುವುದು, ಸಂಜೆ ವೇಳೆ ದೇಹ ಬಿಸಿಯಾಗುವುದು, ಚಲನೆ ವೇಳೆ ಬೆನ್ನುಮೂಳೆ ಕಠಿಣತೆ, ನೋವು, ನಿರಂತರ ಸ್ನಾಯುಸೆಳೆತ, ಉರಿ ಮುಂತಾದವು.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.