ಶ್ರೀ ಮಹೇಶ್ವರಮ್ಮ ದೇವಿ ಕರಗ ನಾಳೆ
Team Udayavani, May 21, 2019, 2:25 PM IST
ಯಲಹಂಕ: ವಹ್ನಿಕುಲ ಕ್ಷತ್ರಿಯರ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಮಹೇಶ್ವರಮ್ಮ ದೇವಿಯ ಕರಗ ಮಹೋತ್ಸವ ಬುಧವಾರ (ಮೇ 22) ರಾತ್ರಿ ನೆರವೇರಲಿದೆ.
ದೇವಿಯ ಹಸಿ ಕರಗ ಉತ್ಸವ ಸೋಮವಾರ ಮುಂಜಾನೆ 5 ಗಂಟೆಗೆ ನೆರವೇರಿದ್ದು, ಮಂಗಳವಾರ (ಮೇ 21) ಆರತಿ, ಬಾಯಿಕಟ್ಟುವುದು ಹಾಗೂ ಅಗ್ನಿಕುಂಡ ಪ್ರವೇಶ ನಡೆಯಲಿದೆ. 22ರಂದು ರಾತ್ರಿ 12 ಗಂಟೆಗೆ ಮಹೇಶ್ವರಮ್ಮ ದೇವಿ ಹೂವಿನ ಕರಗ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವಗಳು ನಡೆಯಲಿವೆ.
ಯಲಹಂಕ ಸುತ್ತಮುತ್ತಲ ಗ್ರಾಮಗಳ 25 ದೇವರುಗಳ ಮತ್ತಿನ ಪಲ್ಲಕ್ಕಿಗಳು ಕರಗಕ್ಕೆ ಸಾಥ್ ನೀಡಲಿದ್ದು, ಯಲಹಂಕದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ರಾತ್ರಿ ಮಹಿಳೆಯರು ಆರತಿ ದೀಪಗಳ ಸಮೇತ ಅಗ್ನಿಕುಂಡ ತುಳಿಯುವ ಕಾರ್ಯಕ್ರಮ ನಡೆಯಲಿದೆ.
ಮುನಿರಾಜು ಎಂಬುವರು 2 ಬಾರಿ ಕರಗವನ್ನು ಹೊರಲಿದ್ದು, ಹಳೇ ಯಲಹಂಕ, ಗಾಂಧಿನಗರ, ಮಾರುತಿನಗರ ವೆಂಕಟಾಲಗಳಲ್ಲಿನ ಮೆರವಣಿಗೆ ನಂತರ ಗುರುವಾರ ಬೆಳಗ್ಗೆ 7 ಗಂಟೆಗೆ ಕರಗವು ದೇವಾಲಯದ ಸನ್ನಿಧಿ ತಲುಪಲಿದೆ. 500ಕ್ಕೂ ಹೆಚ್ಚು ವೀರಕುಮಾರರು ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್