ತನ್ನನ್ನು ಮರೆತು ಜನರ ಸೇವೆ
Team Udayavani, Jan 22, 2019, 12:40 AM IST
ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ನಾನು ಮೊದಲು ನೋಡಿದ್ದು ನಾನು ತುಮಕೂರು ಜಿಲ್ಲೆಯಲ್ಲಿ ಡೆಪ್ಯೂಟಿ ಕಮಿಷನರ್ ಆಗಿದ್ದಾಗ. ಆಗ ಸ್ವಾಮಿಗಳು ಇನ್ನೂ ತರುಣರು. ಮಠದ ಸುತ್ತಲಿನ ಪ್ರದೇಶಕ್ಕೆಲ್ಲ ಸಂಸ್ಕೃತಿಯ ಕೇಂದ್ರವಾಗುವಂತೆ ಮಾಡಿದರು.
ಈಗ ಮಠ ಹಿಂದಿನ ರೀತಿಯ ಸಂಸ್ಕೃತಿ ಕಾರ್ಯಕ್ರಮಗಳನ್ನು ವಿಸ್ತಾರಗೊಳಿಸಿರುವುದಲ್ಲದೇ, ಒಂದು ವಿಶ್ವವಿದ್ಯಾಲಯವೆಂಬಂತೆ ಕೆಲಸ ಮಾಡುತ್ತಿದೆ. ಸರ್ವಜನರ ಕ್ಷೇಮಕ್ಕಾಗಿ ದುಡಿಯುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸ್ವಾಮಿಗಳು ಇಂದಿನ ಪ್ರಮುಖ ದೇಶ ಸೇವಕರಲ್ಲಿ ಪ್ರಥಮ ಪಂಕ್ತಿಯಲ್ಲಿ ಒಂದು ಸ್ಥಾನವನ್ನು ಪಡೆದಿದ್ದಾರೆ.
ಸನ್ಯಾಸವೆಂದರೆ ಸರ್ವಸಂಗವನ್ನು ತೊರೆಯುವುದು ಎನ್ನುವುದು ಒಂದು ಭಾವನೆ; ತೊರೆಯುವುದು ಸರಿ, ಸರ್ವಸಂಗವೂ ಸರಿ. ಆದರೆ, ಈ ಸರ್ವಸಂಗ ತನ್ನದು ಎನ್ನುವ ಸರ್ವಸಂಗ, ತನ್ನನ್ನು ಮರೆತು ಜನರನ್ನೇ ನೆನೆಯುತ್ತಾ ಸೇವೆ ಸಲ್ಲಿಸುವವರು ಸ್ವಾರ್ಥವನ್ನು ತೊರೆದು ಲೋಕಕ್ಷೇಮದ ವಿಷಯದಲ್ಲಿ ಆಸಕ್ತರಾಗಿರುತ್ತಾರೆ.
(ಶ್ರೀಗಳ ಕುರಿತು ಕಾರ್ಯಕ್ರಮವೊಂದರಲ್ಲಿ ಹೇಳಿದ್ದು)
– ಮಾಸ್ತಿ ವೆಂಕಟೇಶ ಅಯ್ಯಂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ