ಯುವತಿ ವಿಚಾರಕ್ಕೆ ವಿದ್ಯಾರ್ಥಿಗೆ ಇರಿತ
Team Udayavani, Oct 21, 2021, 10:19 AM IST
Representative Image
ಬೆಂಗಳೂರು: ಯುವತಿ ವಿಚಾರಕ್ಕೆ ಇಬ್ಬರು ಪದವಿ ವಿದ್ಯಾರ್ಥಿಗಳು ಹೊಡೆದಾಟ ನಡೆಸಿದ್ದು, ಒಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ. ಮಾಗಡಿ ರಸ್ತೆಯ ಅಗ್ರಹಾರ ನಿವಾಸಿ ಕೀರ್ತನ್ ಕುಮಾರ್ (21)ಹಲ್ಲೆಗೊಳಗಾದ ಯುವಕ.
ಕೃತ್ಯ ಎಸಗಿದ ನಾಲ್ಕು ಮಂದಿ ಯುವಕರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಕೀರ್ತನ್ ಕುಮಾರ್ ತನ್ನ ಸಹಪಾಠಿ ಹಾಗೂ ಬ್ಯಾಡರಹಳ್ಳಿಯ ಅಂಜನನಗರ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದಾನೆ. ಆರೋಪಿ ಯುವಕ ಕೂಡ ಮತ್ತೂಂದು ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ.
ಬುಧವಾರ ಸಂಜೆ 5 ಗಂಟೆಯಲ್ಲಿ ಯುವತಿಯ ತಾಯಿ ಕೀರ್ತನ್ ಕುಮಾರ್ಗೆ ಕರೆ ಮಾಡಿ, ಇದುವರೆಗೂ ಮಗಳು ಮನೆಗೆ ಬಂದಿಲ್ಲ. ಎಲ್ಲಿದ್ದಾಳೆ? ಎಂದು ಮಗಳ ಬಗ್ಗೆ ವಿಚಾರಿಸಿದ್ದಾರೆ. ಅದರಿಂದ ಗಾಬರಿಗೊಂಡ ಕೀರ್ತನ್ ಕುಮಾರ್ ಕೂಡಲೇ ಮನೆಗೆ ಬಂದಿದ್ದಾನೆ. ಅದೇ ವೇಳೆ ಆರೋಪಿ ಯುವತಿಯನ್ನು ಬೈಕ್ನಲ್ಲಿ ಡ್ರಾಪ್ ಮಾಡಿದ್ದಾನೆ.
ಇದನ್ನೂ ಓದಿ;- ವಾರಣಾಸಿ ರೈತರ ಹೋರಾಟಕ್ಕೆ ಬೆಂಬಲ: ಪಾಟೀಲ
ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದೆ. ನಂತರ ಕೀರ್ತನ್ ಕುಮಾರ್ ಆಟೋ ಹತ್ತಿ ಕೊಂಡು ಮನೆಗೆ ಹೊರಟ್ಟಿದ್ದು, ಆತನನ್ನು ಆರೋಪಿ ಹಾಗೂ ಆತನ ಮೂವರು ಸಹಚರರು ಹಿಂಬಾಲಿಸಿ ದ್ದಾರೆ. ಮಾರ್ಗ ಮಧ್ಯೆ ಕೀರ್ತನ್ ಕುಮಾರ್ ಆಟೋ ಇಳಿದು ಬಸ್ ಏರಿದ್ದಾನೆ. ಆದರೂ ಬಿಡದ ಆರೋಪಿ ಗಳು ಸುಂಕದಕಟ್ಟೆ ವೃತ್ತದಲ್ಲಿ ಬೈಕ್ ನಿಲ್ಲಿಸಿ, ಬಸ್ ಏರಿ, ಕೀರ್ತನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಬೈಕ್ ನ ಕೀಲಿ ಕೈನಿಂದ ಕೈಹಾಗೂ ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾರೆ. ಬಳಿಕ ಚಾಕುವಿನಿಂದ ಎದೆ ಭಾಗಕ್ಕೂ ಇರಿದು ಪರಾರಿಯಾಗಿದ್ದಾರೆ. ರಕ್ತಸ್ರಾವದಿಂದ ಬಿದ್ದಿದ್ದ ಕೀರ್ತನ್ ಕುಮಾರ್ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ದಾಖಲಾಗಿದ್ದು, ಶೋಧಕಾರ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ