ಜಾರ್ಜ್ ಫೆರ್ನಾಂಡಿಸ್ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ
Team Udayavani, Feb 1, 2019, 6:11 AM IST
ಬೆಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ನಿಧನಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಸಮಾಜವಾದಿಯಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರು ತಮ್ಮ ಸರಳ ಜೀವನಶೈಲಿಯಿಂದ ಮಾದರಿಯಾಗಿದ್ದರು. ಅಧಿಕಾರಕ್ಕಾಗಿ ಆಸೆಪಡದೆ ಜನಸೇವೆಯೇ ಜನಾರ್ದನ ಸೇವೆ ಎಂದು ಜೀವನದುದ್ದಕ್ಕೂ ನಡೆದ ಅವರೊಬ್ಬ ರಾಜಕೀಯ ಸಂತ.
ಭಾರತದ ಅತ್ಯಂತ ದುರ್ಗಮ ಸೇನಾನೆಲೆಯಾದ ಸಿಯಾಚಿನ್ಗೆ ತೆರಳಿದ ಮೊದಲ ರಕ್ಷಣಾ ಸಚಿವರೆಂಬ ಹೆಗ್ಗಳಿಕೆ ಅವರದ್ದು. ಧೈರ್ಯದ ಪ್ರತಿರೂಪದಂತಿದ್ದ ಜಾರ್ಜ್, ಸಂಸತ್ತಿನ ಮೇಲೆ ಉಗ್ರಗಾಮಿಗಳ ದಾಳಿಯಾದಾಗ ಸಂಸತ್ ಭವನದ ಬಾಗಿಲುಗಳನ್ನು ಹಾಕಿಸಿ ಸೈನಿಕರ ಸಹಕಾರದಿಂದ ರಕ್ಷಣಾಕಾರ್ಯ ನಡೆಸಿದ ರೀತಿ ಚರಿತ್ರಾರ್ಹ ಎಂದು ಸ್ಮರಿಸಿದ್ದರಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ