ಚಂದ್ರನ ಕುರಿತು ತಿಳಿಯಲು ಶಿಕ್ಷಕರ ನಿರಾಸಕ್ತಿ

ನೆಹರು ತಾರಾಲಯ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಒಬ್ಬ ಶಿಕ್ಷಕ ಮಾತ್ರ ಹಾಜರು | ಕಾರ್ಯಕ್ರಮ ರದ್ದು

Team Udayavani, Jul 19, 2019, 8:10 AM IST

bng-tdy-3..

ಬೆಂಗಳೂರು: ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಮಾಹಿತಿ ನೀಡಿ, ಬೋಧನೆ ಮಾಡಿ ವಿದ್ಯಾರ್ಥಿ ಗಳನ್ನು ವೈಜ್ಞಾನಿಕವಾಗಿ ಸಜ್ಜುಗೊಳಿಸಬೇಕಾದ ಶಿಕ್ಷಕರೇ ವಿಸ್ಮಯ, ಕೌತುಕದ ಬಗೆಗಿನ ಕಾರ್ಯಾ ಗಾರದಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ತೋರಿದ್ದಾರೆ.

ನೆಹರು ತಾರಾಲಯದಲ್ಲಿ ಜು.18ರಂದು ಶಿಕ್ಷರಿಗೆ ಚಂದ್ರಯಾನ ಕುರಿತ ವೈಜ್ಞಾನಿಕ ವಿಚಾರ ವಿನಿಮಯ ಕಾರ್ಯಾಗಾರ ಆಯೋಜಿಸಲಾಗಿತ್ತು. ಆದರೆ, ಬಂದದ್ದು ಒಬ್ಬ ಶಿಕ್ಷಕ. ಸರ್ಕಾರಿ ಮತ್ತು ಖಾಸಗಿ ಶಾಲೆ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಆದರೆ, ಇಂತಹ ಬಹುಮುಖ್ಯ ಕಾರ್ಯಾಗಾರದಲ್ಲಿ ಶಿಕ್ಷಕರನ್ನು ತೊಡಗಿಸಲು ಆಸಕ್ತಿ ತೋರಬೇಕಿದ್ದ ಶಿಕ್ಷಣ ಇಲಾ ಖೆಯೂ ಗಮನಹರಿಸಿಲ್ಲ. ಪರಿಣಾಮ, ತಾರಾ ಲಯ, ಕಾರ್ಯಾಗಾರವನ್ನೇ ರದ್ದು ಮಾಡಿದೆ.

ಕಾರ್ಯಗಾರ ಕುರಿತು ಇನ್ನೊಮ್ಮೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆಹ್ವಾನ ಕಳುಹಿಸಲಾಗುವುದು. ನಿರೀಕ್ಷಿತ ಸಂಖ್ಯೆ ಶಿಕ್ಷಕರು ಬಂದರೆ ಕಾರ್ಯಾಗಾರ ನಡೆಸುತ್ತೇವೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್‌ ಜಿ. ಗಲಗಲಿ ಮಾಹಿತಿ ನೀಡಿದರು.

ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಮಕ್ಕಳಿಗೆ ವೈಜ್ಞಾನಿಕ ಹಾಗೂ ಉತ್ಕೃಷ್ಟ ಮಟ್ಟದ ಮಾಹಿತಿ ನೀಡುವ ಉದ್ದೇಶದಿಂದ ತಾರಾಲಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಕಾರ್ಯಕ್ರಮದ ಪಟ್ಟಿಯನ್ನು ವರ್ಷದ ಆರಂಭ ದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತದೆ. ಆದರೆ, ಕಾರ್ಯಗಾರಗಳಲ್ಲಿ ಶಿಕ್ಷಕರು ಭಾಗವಹಿಸ ದಿರುವುದು ಬೇಸರ ತರಿಸಿದೆ ಎಂದು ಪ್ರಮೋದ್‌ ಗಲಗಲಿ ಬೇಸರ ವ್ಯಕ್ತಪಡಿಸಿದರು.

ಚಂದ್ರಗ್ರಹಣ ಕುರಿತು ಭರಪೂರ ಮಾಹಿತಿ: ಬಾಹ್ಯಾಕಾಶದ ವಿಸ್ಮಯಗಳ ಬಗ್ಗೆ ತಿಳಿವಳಿಕೆ ನೀಡಲೆಂದೇ ಕಾರ್ಯನಿರ್ವಹಿಸುತ್ತಿರುವ ನೆಹರು ತಾರಾಲಯದಲ್ಲಿ ಭರಪೂರ ಮಾಹಿತಿ ಲಭ್ಯವಿದೆ. ಎರಡು ದಿನಗಳ ಹಿಂದಷ್ಟೇ ನಡೆದ ಚಂದ್ರಗ್ರಹಣ ವೀಕ್ಷಣೆಗೆ ತಾರಾಲಯ ಮುಕ್ತ ಅವಕಾಶ ಕಲ್ಪಿಸಿತ್ತು. ಆದರೆ, ಮುಂಗಾರು ಮಾರುತಗಳು ಆಗಸವನ್ನು ಮರೆಮಾಚಿದ್ದರಿಂದ ಎಲ್ಲರಿಗೂ ವಿಸ್ಮಯ ವೀಕ್ಷಿಸುವ ಅವಕಾಶ ಸಿಗಲಿಲ್ಲ ಎಂದು ನಿರ್ದೇಶಕರು ವಿವರಿಸಿದರು.

ಆ.30ರಿಂದ ವಾರಾಂತ್ಯದ ತರಗತಿ: ತಾರಾ ಯಲಯದಲ್ಲಿ ಆ.30ರಿಂದ ಸೆ.1ರವರೆಗೆ ಮತ್ತು ನ.29ರಿಂದ ಡಿ.1ರವರೆಗೆ ವಿಜ್ಞಾನ ವಿಸ್ಮಯಗಳು, ಕೌತುಕಗಳನ್ನು ವಿಶ್ಲೇಷಿಸಿ ಮನದಟ್ಟು ಮಾಡುವ ವಾರಾಂತ್ಯ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ 40 ಮಂದಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.

ವಿಜ್ಞಾನ ಪಾರ್ಕ್‌ನಲ್ಲಿ ಮಕ್ಕಳ ಜಾತ್ರೆ: ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನ ಬೆಳೆಸುವ ಉದ್ದೇಶದಿಂದ ತಾರಾಲಯದ ವಿಜ್ಞಾನ ಪಾರ್ಕ್‌ಗೆ ಶಾಲಾ ಮಕ್ಕಳನ್ನು ಕರೆತರಲಾಗುತ್ತದೆ. ಹೀಗಾಗಿ ಈ ಪಾರ್ಕ್‌ ತುಂಬಾ ಮಕ್ಕಳದ್ದೇ ಆಟ. ಪಾರ್ಕ್‌ನ ಒಳ ಭಾಗದಲ್ಲಿ ಹಾಕಿರುವ ಬಾಹ್ಯಾಕಾಶ, ಭೌಗೋಳಿಕ ಚಲನವಲನ, ವಿಸ್ಮಯ, ಕೌತುಕಗಳ ಬಗ್ಗೆ ಭಿತ್ತರಿಸಿರುವ ಮಾಹಿತಿ ಫ‌ಲಕಗಳತ್ತ ಮಕ್ಕಳ ಕಣ್ಣಾಡಿಸುತ್ತಾ ಪಾರ್ಕ್‌ ತುಂಬೆಲ್ಲಾ ಓಡಾಡಿ ಖುಷಿಪಡುವುದು ಇಲ್ಲಿ ಸಾಮಾನ್ಯ.

ತಿಂಗಳಿಗೊಮ್ಮೆ ಚಿತ್ರ ಪ್ರದರ್ಶನ: ತಾರಾಲಯವು ತಿಂಗಳಿಗೊಮ್ಮೆ ವಿಜ್ಞಾನ ಕುರಿತ ಚಲನಚಿತ್ರ ಪ್ರದರ್ಶಿಸುತ್ತದೆ. ಜು.21ರಂದು, 1969ರಲ್ಲಿ ಅಮೆರಿಕದ 11 ಗಗನ ಯಾತ್ರಿಗಳು ಚಂದ್ರನ ಮೇಲೆ ಪಾದಾರ್ಪಣೆ ಮಾಡಿ, ಸುರಕ್ಷಿತವಾಗಿ ಹಿಂದಿರುಗಿನ ಘಟನೆ ಆಧರಿಸಿದ, ‘ಫಾರ್‌ ಆಲ್ ಮ್ಯಾನ್‌ ಕೈಂಡ್‌’ ಚಿತ್ರವನ್ನು ಪ್ರದರ್ಶಿಸುತ್ತಿದೆ. ಜತೆಗೆ ಮಕ್ಕಳ ತರಗತಿ ಪಠ್ಯಕ್ಕೆ ಅಗತ್ಯವಿರುವ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ದೂರದರ್ಶಕ ತಯಾರಿಕೆ ಕಮ್ಮಟ: ನಭದಲ್ಲಿ ನಡೆಯುವ ವಿಸ್ಮಯಗಳನ್ನು ಕುಳಿತಲ್ಲೇ ಕಣ್ತುಂ ಬಿಕೊಳ್ಳಲು ಬೇಕಾದ ದೂರದರ್ಶಕ ಯಂತ್ರ ತಾರಾಲಯದಲ್ಲಿದೆ. ದೂರದರ್ಶಕ ಯಂತ್ರ ಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಾರಾಲಯವು ಸಾರ್ವಜನಿಕರು ಮತ್ತು ವಿದ್ಯಾ ರ್ಥಿಗಳಿಗೆ ಸುಲಭವಾಗಿ ಕಲಿಸುತ್ತದೆ. ಇದಕ್ಕಾಗಿ ಜು.30ರಿಂದ ನಾಲ್ಕು ದಿನ ದೂರದರ್ಶಕ ತಯಾರಿಸುವ ಕಮ್ಮಟ ಆಯೋಜಿಸಿದೆ.

 

● ಪುಷ್ಪಲತಾ ಜೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.