ಹತ್ತು ರೂ. ಪಾರ್ಕಿಂಗ್ ಶುಲ್ಕಕ್ಕಾಗಿ ಕೊಲೆ!
Team Udayavani, May 11, 2019, 3:03 AM IST
ಬೆಂಗಳೂರು: ಚಿತ್ರಮಂದಿರದ ಮುಂಭಾಗ ಬೈಕ್ ನಿಲ್ಲಿಸಲು 10 ರೂ. ಪಾರ್ಕಿಂಗ್ ಶುಲ್ಕ ಕೇಳಿದ್ದಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭರಣಿಧರನ್ (36) ಕೊಲೆಯಾದವರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಭಾರತಿನಗರ ಠಾಣೆ ಪೊಲೀಸರು, ಕೊಲೆ ಆರೋಪಿಗಳಾದ ಸೆಲ್ವರಾಜ್ ಹಾಗೂ ಶೇಖರ್ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಸ್ಟಿನ್ಟೌನ್ ನಿವಾಸಿ ಭರಣಿಧರನ್, ತನ್ನ ಸಂಬಂಧಿಕ ಹುಡುಗನ ಜತೆ ಕಾಂಚನಾ-3 ಸಿನಿಮಾ ವೀಕ್ಷಿಸಲು ಗುರುವಾರ ಸಂಜೆ ಹಲಸೂರು ಸಮೀಪದ ಲಾವಣ್ಯ ಚಿತ್ರಮಂದಿರಕ್ಕೆ ಬೈಕ್ನಲ್ಲಿ ಹೋಗಿದ್ದರು. ಈ ವೇಳೆ ಬೈಕ್ ನಿಲ್ಲಿಸಿದ್ದಕ್ಕೆ ಪಾರ್ಕಿಂಗ್ ಶುಲ್ಕವಾಗಿ 10 ರೂ. ನೀಡುವಂತೆ ಸೆಲ್ವರಾಜ್ ಭರಣಿಧರನ್ಗೆ ಕೇಳಿದ್ದಾರೆ.
ಅಷ್ಟೊಂದು ಶುಲ್ಕ ಏಕೆ ಎಂದು ಭರಣಿ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಸೆಲ್ವರಾಜ್ ಹಾಗೂ ಆತನ ಸ್ನೇಹಿತ ಶೇಖರ್, ಭರಣಿಯನ್ನು ಥಳಿಸಿದ್ದಾರೆ.
ಕೂಡಲೇ ಅಲ್ಲಿದ್ದವರು ಜಗಳ ಬಿಡಿಸಿ, ಹಲ್ಲೆಗೊಳಗಾಗಿದ್ದ ಭರಣಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ