ವೀರಶೈವ ಧರ್ಮದ ಹುಟ್ಟಿನ ದಾಖಲೆ ತೃಪ್ತಿಕರವಾಗಿಲ್ಲ


Team Udayavani, Mar 17, 2018, 6:40 AM IST

Veerashaiva-lingayat–555.jpg

ಬೆಂಗಳೂರು: ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಕುರಿತು ರಚನೆಯಾಗಿದ್ದ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ತಜ್ಞರ ಸಮಿತಿ ವೀರ ಶೈವರು ಮತ್ತು ಲಿಂಗಾಯತರ ನಡುವೆ ಭಿನ್ನತೆಯನ್ನು ಸ್ಪಷ್ಟವಾಗಿ ವರ್ಗೀಕರಿಸಿದೆ. ವರದಿಯಲ್ಲಿನ ಉಲ್ಲೇಖ ಹೀಗಿದೆ:

– ವೀರಶೈವರ ಮಠಗಳು ಅಡ್ಡಪಲ್ಲಕ್ಕಿ ದರ್ಬಾರ್‌ ಮಾಡುತ್ತಾರೆ. ಲಿಂಗಾಯತರ ಮಠಗಳು ಸಾಮಾಜಿಕ ಸೇವೆ ಮಾಡುತ್ತವೆ.
– ವೀರಶೈವ ಲಿಂಗಾಯತ ಸಮುದಾಯದ ಮಠಗಳಲ್ಲಿ ವಿರಕ್ತ ಮತ್ತು ಗುರುವರ್ಗ ಎಂಬ ಎರಡು ಪ್ರಕಾರಗಳಿವೆ. ವಿರಕ್ತ ಮಠಗಳು  ಬಸವ ತತ್ವಗಳನ್ನು ಪಾಲಿಸುತ್ತಿದ್ದು, ಅವು ದೊಡ್ಡ ಸಂಖ್ಯೆಯಲ್ಲಿವೆ.
– ಗುರು ವರ್ಗದ ಮಠಗಳು ಸಾಂಪ್ರದಾಯಿಕ, ಧಾರ್ಮಿಕ ಮತ್ತು ಪುರೋಹಿತರ ಕಾರ್ಯದಲ್ಲಿ ತೊಡಗಿವೆ.
– ಗುರು ವರ್ಗದವರು ಬಸವಣ್ಣನನ್ನು ಗೌರವಿಸುವುದು ಮತ್ತು ಅವರ ತತ್ವಗಳಿಗೆ ಮನ್ನಣೆ ನೀಡುವುದು ಕಡಿಮೆ. ಅವರು ಹೆಚ್ಚಾಗಿ ಅಡ್ಡಪಲ್ಲಕ್ಕಿ, ದಸರಾ ದರ್ಬಾರಿನಲ್ಲಿ ಸಕ್ರೀಯರಾಗಿರುತ್ತಾರೆ.
– ವೀರಶೈವ ಧರ್ಮವನ್ನು ಪಂಚಾಚಾರ್ಯರು ಅಥವಾ ರೇಣುಕರು ಸ್ಥಾಪಿಸಿದ್ದರು ಎನ್ನುವುದಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲ. ವೀರಶೈವ ಧರ್ಮದ ಹುಟ್ಟಿನ ಬಗ್ಗೆ ದಾಖಲೆಗಳು ತೃಪ್ತಿಕರವಾಗಿಲ್ಲ.
– ವೀರಶೈವರಿಂದ ಲಿಂಗಾಯತ ಕಲುಷಿತವಾಗಿದೆ.
– ಲಿಂಗಾಯತರ ಶಿವ ಸಾಕಾರ ದೇವರಲ್ಲ. ಲಿಂಗಾಯತ ಶಿವನಿಗೂ, ವೀರಶೈವರ ಶಿವನಿಗೂ ವ್ಯತ್ಯಾಸ ಇದೆ. ವೀರಶೈವ ಲಿಂಗಾಯತರ ನಡುವಿನ ಸಾಮ್ಯತೆ: ಇಷ್ಟಲಿಂಗ ಕಟ್ಟಿಕೊಳ್ಳುವುದು, ಅಷ್ಟಾವರಣ, ಷಟ್‌ಸ್ಥಲ ಸಿದಾಟಛಿಂತಗಳಲ್ಲಿ ನಂಬಿಕೆ. ಜನನ, ಮರಣ ಮತ್ತು ಲಿಂಗದೀಕ್ಷೆಯಲ್ಲಿ ಸಾಮ್ಯತೆಗಳಿವೆ. ಆದರೆ, ಅಯ್ನಾಚಾರ,(ಉಪನಯನ) ಮಡಿವಂತಿಕೆ, ಕಾಯಕ ಕರ್ಮವೆಂದು ಪರಿಗಣಿಸುವುದು, ಮಹಿಳೆಗೆ ಹೆಚ್ಚು ಪ್ರಾಧಾನ್ಯತೆ ನೀಡುವುದು, ಮದುವೆಯಲ್ಲಿನ ವಿಧಿ ವಿಧಾನದಲ್ಲಿನ ವ್ಯತ್ಯಾಸಗಳು, ಚರ್ತುವರ್ಣದ ಆಚರಣೆ, ಸ್ಥಾವರಲಿಂಗ ಪೂಜೆ, ದೇವಾಲಯ ಸಂಸ್ಕೃತಿ ,ಪೌರೋಹಿತ್ಯ ನಡೆಸುವುದು, ವಚನಗಳ ತಿರಸ್ಕಾರ, ಸಂಸ್ಕೃತ ಭಾಷೆ ಬಳಕೆ, ಬೇರೆ ಗ್ರಂಥವನ್ನು ತಮ್ಮ ಗ್ರಂಥವೆಂದು ಹೇಳುವುದು ಇವುಗಳಿಂದಾಗಿ ವೀರಶೈವ ಮತ್ತು ಲಿಂಗಾಯತ ಬೇರೆಯೇ ಆಗಿವೆ.

ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದು ಹೇಳಲು ಕ್ರಿಶ್ಚಿಯನ್‌ ಧರ್ಮಗಳ ಉದಾಹರಣೆ ನೀಡಿರುವ ಸಮಿತಿ ಮುಸ್ಲಿಮರಲ್ಲಿ ಶಿಯಾ ಸುನ್ನಿ ಪಂಗಡಗಳಿದ್ದರೂ ಧರ್ಮಗ್ರಂಥ ಕುರಾನನ್ನು ಗೌರವಿಸುತ್ತಾರೆ. ರಮಜಾನ್‌ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ಅದೇ ರೀತಿ ಕ್ರಿಶ್ಚಿಯನ್ನರಲ್ಲಿ ಕ್ಯಾಥೋಲಿಕ್‌ ಮತ್ತು ಪ್ರೊಟೆಸ್ಟಂಟ್‌ ಪಂಗಡಗಳಿದ್ದರೂ ಒಂದೇ ಬೈಬಲ್‌ ಬಳಸುತ್ತಾರೆ. ಒಂದೇ ರೀತಿಯ ಧಾರ್ಮಿಕ ನಂಬಿಕೆ ಹೊಂದಿದ್ದಾರೆ. ಆದರೆ, ವೀರಶೈವ ಲಿಂಗಾಯತರಲ್ಲಿ ಧಾರ್ಮಿಕ ಗ್ರಂಥಗಳು ಭಿನ್ನವಾಗಿವೆ. ಹೀಗಾಗಿ ವೀರಶೈವ ಲಿಂಗಾಯತ ಎರಡೂ ಒಂದೇ ಅಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಲಿಂಗಾಯತರಾಗಿದ್ದ ಮೈಸೂರು ಒಡೆಯರು: 15ನೇ ಶತಮಾನದವರೆಗೂ ಮೈಸೂರು ಒಡೆಯರು ಲಿಂಗಾಯತರಾಗಿದ್ದರು. 1610ರಲ್ಲಿ ರಾಜ ಒಡೆಯರ್‌ ಕಾಲದಲ್ಲಿ ವೈಷ್ಣವರಾಗಿ ಪರಿವರ್ತನೆಗೊಂಡ ನಂತರ ಲಿಂಗಾಯತರು ಅವರ ಬಗ್ಗೆ ಅಸಮಾಧಾನಗೊಂಡಿದ್ದರು.
ಹಾಗೂ 1678 ರಲ್ಲಿ ಚಿಕ್ಕದೇವರಾಜನು ವಿಧಿಸಿದ್ದ ತೆರಿಗೆಗಳ ವಿರುದ್ಧ ಲಿಂಗಾಯತರು ದಂಗೆ ಎದ್ದಿದ್ದರು. ಆಗ 770 
ಲಿಂಗಾಯತ ಮಠಾಧೀಶರಲ್ಲಿ 440 ಮಠಾಧೀಶರನ್ನು ಮೋಸದಿಂದ ಚಿಕ್ಕದೇವರಾಜ ಕೊಲ್ಲಿಸಿ ‘ಜಂಗಮ ಕ್ರಾಂತಿ’ಯನ್ನು ಸದೆ ಬಡಿದರು.

ಬ್ರಿಟೀಷರಿಂದ ಮೈಸೂರು ರಾಜರಿಗೆ ಅಧಿಕಾರ ಮರಳಿ ಬಂದಾಗ ಲಿಂಗಾಯತರನ್ನು ಹದ್ದು ಬಸ್ತಿನಲ್ಲಿಡಲು 1818ರ
ಜನಗಣತಿಯಲ್ಲಿ ಸಿ. ರಂಗಾಚಾರಿಯವರು ಲಿಂಗಾಯತರನ್ನು ಮೂಲೆಗುಂಪು ಮಾಡಿ ಹಿಂದೂ ಧರ್ಮದ ಶೂದ್ರದ ಪಟ್ಟಿಗೆ ಸೇರಿಸಿದ್ದರು.

ಟಾಪ್ ನ್ಯೂಸ್

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.