ಭಯೋತ್ಪಾದನೆ ಕುರಿತ ಕೃತಿ ಬಿಡುಗಡೆ
Team Udayavani, Mar 17, 2019, 6:37 AM IST
ಬೆಂಗಳೂರು: ಮನುಕುಲಕ್ಕೆ ಮಾರಕವಾಗಿರುವ ಭಯೋತ್ಪಾದನೆ ಕುರಿತಂತೆ ಹಿರಿಯ ಲೇಖಕ ಮತ್ತು ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಎನ್.ಆರ್.ಕುಲ್ಕರ್ಣಿ ಅವರು “ಫ್ಯಾಸಿಟ್ಸ್ ಆಫ್ ಟೆರರಿಸಂ ಇನ್ ಇಂಡಿಯಾ’ಎಂಬ ಕೃತಿಯನ್ನು ಹೊರತಂದಿದ್ದು, ಶನಿವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು.
ಮಿಥಿಕ್ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಕಣಕಾರ ಎಂ.ಆರ್.ವೆಂಕಟೇಶ್, ಪರಿಸರವಾದಿ ಎಂ.ಎಸ್.ಚೈತ್ರಾ ಅವರು ಕೃತಿ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಎಂ.ಎಸ್.ಚೈತ್ರಾ, ಮನುಕುಲವನ್ನು ಕಾಡುತ್ತಿರುವ ಭಯೋತ್ವಾದನೆ ಹತ್ತಿಕ್ಕಲು ವಿಶ್ವ ಸಮುದಾಯ ಮತ್ತಷ್ಟು ಕ್ರಮ ಕೈಗೊಳ್ಳಬೇಕಾಗಿದೆ. ಭಾರತವಷ್ಟೇ ಅಲ್ಲ, ವಿಶ್ವದ ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಸೇರಿ ಹಲವು ರಾಷ್ಟ್ರಗಳಿಗೆ ಉಗ್ರರ ದಾಳಿಯ ಕಹಿ ಅನುಭವವಾಗಿದೆ.
ಇಸ್ಲಾಂ ಭಯೋತ್ಪಾಧಕರ ವಿರುದ್ಧ ಮತ್ತಷ್ಟು ಹೋರಾಟ ನಡೆಯಬೇಕಾಗಿದೆ ಎಂದು ಹೇಳಿದರು. ಪ್ರಸ್ತುತ ಕೃತಿಯಲ್ಲಿ ಲೇಖಕರು ಇಸ್ಲಾಂ ಭಯೋತ್ಪಾದನೆ ಮೇಲೆ ಬೆಳಕು ಚೆಲ್ಲಿದ್ದು, ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ. ಕಾಶ್ಮೀರ ಪಂಡಿತರ ನೋವುಗಳ ಬಗ್ಗೆಯು ಪ್ರಸ್ತಾಪಿಸಿದ್ದು, ಉಗ್ರವಾದ ಭಾರತದ ಸಂಸ್ಕತಿ-ಪರಂಪರೆಗೆ ಯಾವ ರೀತಿಯ ಪೆಟ್ಟು ನೀಡಿದೆ ಎಂಬುವುದನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಅಂಕಣಕಾರ ಎಂ.ಆರ್.ವೆಂಕಟೇಶ್ ಮಾತನಾಡಿ, ಭಯೋತ್ಪಾದನೆಗೆ ಮೂಲಕ ಕಾರಣ ಆರ್ಥಿಕ ಸಹಾಯ. ಉಗ್ರರನ್ನು ಪೋಷಿಸುತ್ತಿರುವ ಸಂಘಟನೆಗಳಿಗೆ ಹಲವು ಕಡೆಗಳಿಂದ ಹಣ ಸಂದಾಯವಾಗುತ್ತಿದ್ದು, ಆ ಮೂಲವನ್ನು ಮಟ್ಟ ಹಾಕುವ ಅಗತ್ಯವಿದೆ. ಭಯೋತ್ಪಾದನೆಯಷ್ಟೇ ಮತಾಂತರು ಕೂಡ ಅಪಾಯಕಾರಿಯಾಗಿದ್ದು, ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು. ಲೇಖಕ ಎನ್.ಆರ್.ಕುಲ್ಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ