ಸಾವಿರಾರು ಜನರ ಜೀವ ತೆಗೆಯಲು ಸಂಚು ರೂಪಿಸಿದ್ದ ಉಗ್ರ ಕೌಸರ್
Team Udayavani, Sep 30, 2018, 12:29 PM IST
ಬೆಂಗಳೂರು: ರಾಮನಗರದಲ್ಲಿ ಸೆರೆಸಿಕ್ಕ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಉಗ್ರ ಜಹೀಲುªಲ್ ಇಸ್ಲಾಂ ಅಲಿಯಾಸ್ ಕೌಸರ್, ಬೌದ್ಧಗುರು ದಲೈಲಾಮ ಹಾಗೂ ಬಿಹಾರ ರಾಜ್ಯಪಾಲರ ಉಪಸ್ಥಿತಿಯಲ್ಲೇ ಸಾವಿರಾರು ಜನರ ಪ್ರಾಣ ತೆಗೆಯಲು ಸಂಚು ರೂಪಿಸಿದ್ದ ಎಂಬುದು ಎನ್ಐಎ ತನಿಖೆ ವೇಳೆ ದೃಢಪಟ್ಟಿದೆ.
ಜತೆಗೆ, ಜ.19ರಂದು ಬೋಧ್ಗಯಾದ ಕಾಲಚಕ್ರದಲ್ಲಿ ಮೂರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ಇಟ್ಟಿದ್ದು ಬೆಂಗಳೂರಿನಲ್ಲಿ ಸೆರೆಸಿಕ್ಕ ಮತ್ತೂಬ್ಬ ಆರೋಪಿ ಆದಿಲ್ ಶೇಖ್ ಎಂಬುದು ಬಹಿರಂಗಗೊಂಡಿದೆ. ಪ್ರಕರಣದ ಇತರೆ ಆರೋಪಿಗಳಾದ ಪೈಗಂಬರ್ ಶೇಖ್, ಅಹಮದ್ ಅಲಿ, ನೂರ್ ಅಸ್ಲಾಂ ವಿರುದ್ಧ ಪಾಟ್ನಾ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈ ಮಾಹಿತಿಯನ್ನು ಉಲ್ಲೇಖೀಸಿದ್ದಾರೆ.
ಮಯನ್ಮಾರ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸೆಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದ ಕೌಸರ್, ಪಶ್ಚಿಮ ಬಂಗಾಳದ ಇತರೆ ಆರೋಪಿಗಳ ಜತೆ ಸೇರಿ ಬೌದ್ಧರನ್ನೇ ಟಾರ್ಗೆಟ್ ಮಾಡಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ. ಇದರ ಭಾಗವಾಗಿಯೇ ಬೌದ್ಧದರ್ಮ ಗುರು ದಲೈಲಾಮ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತೀರ್ಮಾನಿಸಿದ್ದ ಎಂದು ತಿಳಿದು ಬಂದಿದೆ.
ಸಂಚು ಸಿದ್ಧವಾಗಿದ್ದು ಬೆಂಗಳೂರಲ್ಲಿ!: ಬುಧ್ವಾನ್ ಬಾಂಬ್ ಸ್ಫೋಟದ ಬಳಿಕ 2014ರಲ್ಲಿಯೇ ರಾಜ್ಯವನ್ನು ಆಶ್ರಯತಾಣ ಮಾಡಿಕೊಂಡ ಕೌಸರ್ ಬೆಂಗಳೂರು ಹಾಗೂ ಇತರ ಭಾಗಗಳಲ್ಲಿ ತಳವೂರಿದ್ದ ಬಳಿಕ ರಾಮನಗರಕ್ಕೆ ಸ್ಥಳಾಂತರ ಗೊಂಡಿದ್ದ. ಇಲ್ಲಿಂದಲೇ ಬೋದ್ಗಯಾ ಸ್ಫೋಟದ ಸಂಚು ರೂಪಿಸಿದ್ದ. ಪಶ್ಚಿಮ ಬಂಗಾಳದ ಇತರೆ ಆರೋಪಿಗಳು ಆತನ ಸೂಚನೆ ಮೇರೆಗೆ ಜನವರಿ 19ರಂದು ಕಾಲಚಕ್ರ ಮೈದಾನದಲ್ಲಿ ಮೂರು ಐಇಡಿಗಳನ್ನು ಇರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸ್ಫೋಟದ ಬಳಿಕ ಉಗ್ರ ಆದಿಲ್ ಶೇಖ್ ಬೆಂಗಳೂರಿಗೆ ಆಗಮಿಸಿದ್ದು, ಹಲವು ಬಾರಿ ಕೌಸರ್ನನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾನೆ. ಕೆಲವು ದಿನಗಳ ಕಾಲ ಸುಮ್ಮನಿದ್ದು ಮತ್ತೂಂದು ಸ್ಫೋಟಕ್ಕೆ ಸಂಚು ರೂಪಿಸುವುದು ಅವರ ಉದ್ದೇಶವಾಗಿತ್ತು. ಆದರೆ ಸಂಚು ರೂಪಿಸುವ ಮೊದಲೇ ಸಿಕ್ಕಿಬಿದ್ದಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ರಾಜ್ಯದ ಉಗ್ರ ಸೆಲ್ಗಳ ಬಗ್ಗೆ ಶೋಧ ಮುಂದುವರಿಕೆ: ಆಗಸ್ಟ್ 7ರಂದು ರಾಮನಗರದಲ್ಲಿ ಉಗ್ರ ಕೌಸರ್ ಹಾಗೂ ದಂಡು ರೈಲು ನಿಲ್ದಾಣದಲ್ಲಿ ಆದಿಲ್ ಶೇಖ್ ಸೆರೆಸಿಕ್ಕಿದ್ದು ರಾಜ್ಯ ಉಗ್ರರ ಅಡಗುತಾಣವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜತೆಗೆ ತಲೆಮರೆಸಿಕೊಂಡಿರುವ ಜೆಎಂಬಿ ಉಗ್ರ ಆರಿಫ್ ಹುಸೇನ್ ಕೂಡ ರಾಜ್ಯದಲ್ಲಿಯೇ ಆಶ್ರಯ ಪಡೆದುಕೊಂಡಿದ್ದಾನೆಯೇ ಎಂಬ ಶಂಕೆ ರಾಜ್ಯ ಗುಪ್ತಚರದಳ ಹಾಗೂ ಪೊಲೀಸ್ ಇಲಾಖೆಯನ್ನು ಕಾಡುತ್ತಿದೆ.
ಈ ನಿಟ್ಟಿನಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಗುಪ್ತಚರ ದಳ ಮತ್ತಷ್ಟು ಚುರುಕುಗೊಂಡಿದ್ದು, ರಾಮನಗರ, ತುಮಕೂರು, ಮಂಗಳೂರು ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಮಾಹಿತಿ ಕಲೆ ಹಾಕುತ್ತಿದೆ. ಮತ್ತೂಂದೆಡೆ ರಾಜ್ಯ ಉಗ್ರರ ಅಡುಗುತಾಣ ವಿಚಾರ ಸೆ.28ರಂದು ನಡೆದ ದಕ್ಷಿಣ ಭಾರತ ರಾಜ್ಯಗಳ ಡಿಜಿಪಿಗಳ ಸಭೆಯಲ್ಲೂ ಪ್ರಸ್ತಾಪವಾಗಿದೆ.
ವಿಶೇಷ ಎಂದರೆ ಡಿಜಿಪಿ ನೀಲಮಣಿ ರಾಜು, ಜೆಎಂಬಿ ಉಗ್ರರಾದ ಕೌಸರ್ ಹಾಗೂ ಆದಿಲ್ಶೇಖ್ ಬಂಧನ ವಿಚಾರ ಪ್ರಸ್ತಾಪಿಸಿ, ರಾಜ್ಯದಲ್ಲಿ ಉಗ್ರರು ಇನ್ನೂ ಅಡಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನೆರೆರಾಜ್ಯಗಳು ಪರಸ್ಪರ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕಾಲಕ್ಕೆ ಹಣ ಹಿಂದಿರುಗಿಸದ್ದಕ್ಕೆ ಮಹಿಳೆಯ ಕೊಲೆ
ಸಿಹಿ-ಕಹಿ ನಡುವೆ ವರ್ಕ್ ಫ್ರಂ ಹೋಂ : ವರ್ಕ್ ಫ್ರಂ ಹೋಂಗೆ ಒನ್ ಇಯರ್
ಕರೆಂಟ್ ಶಾಕ್ ಬೇಡ : ಮೂರನೇ ಬಾರಿ ವಿದ್ಯುತ್ ದರ ಏರಿಕೆ ಪ್ರಸ್ತಾವಕ್ಕೆ ಜನ ವಿರೋಧ
ಹಣಕಾಸಿನ ವಿಚಾರ : ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ
ಅದು ಹಳೇಯ ಆಡಿಯೋ, ಈಗಿನದ್ದಲ್ಲ.. ಆಡಿಯೋ ಲೀಕ್ ಬಗ್ಗೆ ಪ್ರಸನ್ನ ಕುಮಾರ್ ಸ್ಪಷ್ಟನೆ