ವಿಧಾನಸೌಧಕ್ಕೆ ಕಾರು ಸೇವೆ ಹೆಸರಲ್ಲಿ ವಂಚನೆ
Team Udayavani, Mar 18, 2019, 6:35 AM IST
ಬೆಂಗಳೂರು: ವಿಧಾನಸೌಧ ಸಿಬ್ಬಂದಿಯ ಓಡಾಟಕ್ಕೆ ಕಾರುಗಳನ್ನು ನೀಡುವ ಟೆಂಡರ್ ಸಿಕ್ಕಿದೆ ಎಂದು ನಂಬಿಸಿ ಟ್ರಾವೆಲ್ಸ್ ಏಜೆನ್ಸಿ ಮಾಲೀಕನೊಬ್ಬ, ಹಲವು ಮಂದಿ ಕಾರು ಮಾಲೀಕರಿಂದ ಹಣ ಸಂಗ್ರಹಿಸಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ವಂಚನೆಗೊಳಗಾದ ಗಜೇಂದ್ರ ಕುಮಾರ್ ಎಂಬುವವರು ನೀಡಿರುವ ದೂರಿನ ಅನ್ವಯ, ಹ್ಯಾಪಿ ಟು ಟ್ರಿಪ್ ಟ್ರಾವೆಲ್ಸ್ ಮಾಲೀಕ ಡಿ.ಡಿ. ಮಂಜುನಾಥ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಬಾಗಲಕುಂಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಧಾನಸೌಧ ಸೇವೆಗೆ ಕಾರುಗಳನ್ನು ಬಿಡುವುದಾಗಿ ನಂಬಿಸಿ 34 ಕಾರು ಮಾಲೀಕರಿಂದ ತಲಾ 30 ಸಾವಿರ ರೂ. ಪಡೆದಿದ್ದ ಆರೋಪಿ ಮಂಜುನಾಥ್, ಬಳಿಕ ಕೆಲಸವೂ ಕೊಡದೆ ಹಣವೂ ವಾಪಾಸ್ ಕೊಟ್ಟಿಲ್ಲ. ಒಟ್ಟು 10.20 ಲಕ್ಷ ರೂ. ಪಡೆದು ವಂಚಿಸಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಹೆಸರಘಟ್ಟ ಮುಖ್ಯರಸ್ತೆಯ ಕಿರ್ಲೋಸ್ಕರ್ ಲೇಔಟ್ನಲ್ಲಿ ಹ್ಯಾಪಿ ಟು ಟ್ರಿಪ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮಂಜುನಾಥ್ಗೆ ಗಜೇಂದ್ರಕುಮಾರ್ ಪರಿಚಯವಾಗಿತ್ತು. 2017ರ ಸೆಪ್ಟೆಂಬರ್ನಲ್ಲಿ ಆರೋಪಿ ಮಂಜುನಾಥ್, ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಓಡಾಟಕ್ಕೆ ಕಾರುಗಳ ಸೇವೆ ಒದಗಿಸುವುದಕ್ಕೆ ಮೂರು ವರ್ಷಗಳ ಟೆಂಡರ್ ಏಜೆನ್ಸಿಗೆ ಸಿಕ್ಕಿದೆ.
ಇನೋವಾ ಕಾರಿಗೆ ತಿಂಗಳಿಗೆ 80 ಸಾವಿರ, ಸ್ವಿಫ್ಟ್ ಡಿಸೈರ್ಗೆ 71 ಸಾವಿರ ರೂ. ತಿಂಗಳ ಬಾಡಿಗೆ ಸಿಗಲಿದೆ. ಈ ಪ್ರಕ್ರಿಗೆ ಒಂದು ವಾಹನಕ್ಕೆ ಭದ್ರತಾ ಠೇವಣಿಯಾಗಿ 30 ಸಾವಿರ ರೂ.ಕಟ್ಟಬೇಕು ಎಂದು ನಂಬಿಸಿದ್ದು, ಆತನ ಬಳಿಯಿದ್ದ ಎರಡು ಕಾರುಗಳನ್ನು ಬಾಡಿಗೆಗೆ ಬಿಡುವಂತೆ ಕೇಳಿದ್ದಾನೆ.
ನಂಬಿದ ಗಜೇಂದ್ರ ತಮ್ಮ ಎರಡು ಕಾರುಗಳಿಗೆ ಭದ್ರತಾ ಠೇವಣಿಯಾಗಿ 60 ಸಾವಿರ ರೂ. ಕೊಟ್ಟಿದ್ದ. ಇದಾದ ಬಳಿಕ ಮಂಜುನಾಥ್ ಸೂಚನೆಯಂತೆ ಸ್ನೇಹಿತರಿಗೂ ವಿಷಯ ತಿಳಿಸಿ ಒಟ್ಟು 34 ಕಾರುಗಳಿಗೆ ತಲಾ 30 ಸಾವಿರ ರೂ.ಗಳನ್ನು ಕಟ್ಟಿಸಿದ್ದರು.
ಇದಾದ ಹಲವು ತಿಂಗಳು ಕಳೆದರೂ ಯಾವುದೇ ಕಾರುಗಳನ್ನು ಬಾಡಿಗೆಗೆ ಪಡೆಯದಿದ್ದಾಗ ಅನುಮಾನ ಬಂದು ಗಜೇಂದ್ರ ಸೇರಿದಂತೆ ಮತ್ತಿತರರು ವಿಧಾನಸೌಧಕ್ಕೆ ಬಂದು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಈ ಕುರಿತು ಮಂಜುನಾಥ್ರನ್ನು ಪ್ರಶ್ನಿಸಿದಾಗ ಸಬೂಬು ಹೇಳಿದ್ದ. ಅಂತಿಮವಾಗಿ ದೂರುದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ