ಮೋಜಿನ ಜೀವನಕ್ಕಾಗಿ ಕಳ್ಳತನ: ಬಂಧನ
ಮನೆಗಳವು, ಬೈಕ್, ಸರಗಳವು | ಏಳು ಆರೋಪಿಗಳು ಪೊಲೀಸರ ವಶಕ್ಕೆ | ವಾರಸುದಾರರಿಗೆ ಆಭರಣ
Team Udayavani, Dec 27, 2020, 1:10 PM IST
ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಬೈಕ್ ಕಳವು, ಸರಗಳವು ಮತ್ತು ಮನೆಗಳವು ಮಾಡುತ್ತಿದ್ದ ಪ್ರತ್ಯೇಕಪ್ರಕರಣಗಳ 7 ಮಂದಿ ಆರೋಪಿಗಳನ್ನು ಮೈಕೋ ಲೇಔಟ್ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.
ತಾವರಕೆರೆ ನಿವಾಸಿ ಸಂತೋಷ್ ಅಲಿಯಾಸ್ಎಮ್ಮೆ ಹರೀಶ್ (35), ಸಂಜಯ್ ಅಲಿಯಾಸ್ ಸ್ಮಶಾನ ಸಂಜು (21), ಜಯನಗರದ ಮಹೇಂದ್ರನ್ ಅಲಿಯಾಸ್ ಮಗ್ಗಿ (20) ಮತ್ತು ಜೆ.ಪಿ.ನಗರದ ದೀಪಕ್ ಅಲಿಯಾಸ್ ದೀಪು (19)ಹಾಗೂ ಬಿಸ್ಮಲ್ಲಾನಗರ ಇಮ್ರಾನ್ ಅಹಮ್ಮದ್(30),ಸೈಯದ್ ಜಮೀರ್ಅಹಮ್ಮದ್(28) ಅತಿಕ್ ಪಾಷಾ(31) ಬಂಧಿತರು. ಆರೋಪಿಗಳಿಂದ 70 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ 42 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ವಸ್ತು, 20 ದ್ವಿಚಕ್ರ ವಾಹನಗಳನ್ನು ಮೂರು ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.
ಬಿಸ್ಮಲ್ಲಾನಗರ ಇಮ್ರಾನ್ ಅಹಮ್ಮದ್, ಸೈಯದ್ ಜಮೀರ್ ಅಹಮ್ಮದ್ ಮತ್ತು ಅತಿಕ್ ಪಾಷಾ ಬೀಗಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವುಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು.
ಇನ್ನು ಆರೋಪಿ ಸಂತೋಷ್ ಈ ಹಿಂದೆ ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಕನ್ನಕಳವು ಪ್ರಕರಣಗಳಲ್ಲಿ ಬಂಧಿತನಾಗಿದ್ದ. ಕಳೆದ ವರ್ಷ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಹಳೇ ಚಾಳಿ ಮುಂದುವರಿಸಿದ್ದಾನೆ. ಸೆಪ್ಟೆಂಬರ್ನಲ್ಲಿ ಬಿಸ್ಮಿಲ್ಲಾ ನಗರದ ಮನೆಯೊಂದರಲ್ಲಿ ಬೀಗ ಮುರಿದು ಚಿನ್ನಾಭರಣ, ಹಣ ಕಳವು ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ, ಕೃತ್ಯ ಎಸಗಿದ್ದು ಸಂತೋಷ್ ಎಂಬ ಸುಳಿವು ಗೊತ್ತಾಗಿತ್ತು. ಆರೋಪಿ ಪತ್ತೆಗಾಗಿ ಮೈಕೋಲೇಔಟ್ ಉಪವಿಭಾಗದ ಎಸಿಪಿ ಸುಧೀರ್ ಹೆಗಡೆ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಲಾಗಿತ್ತು. ತಾವರಕೆರೆಯ ಮನೆಯೊಂದರಲ್ಲಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.
ಸುದ್ದಗುಂಟೆಪಾಳ್ಯ, ತಿಲಕನಗರ, ಹಾಸನ, ಕೆ.ಆರ್. ಪೇಟೆ, ಚನ್ನರಾಯ ಪಟ್ಟಣ, ತಿಪಟೂರಿನಲ್ಲಿ ನಡೆದಿದ್ದ 12 ಕನ್ನಗಳವುಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು. ಹ್ಯಾಂಡಲ್ ಲಾಕ್ ಮುರಿದು ಕಳ್ಳತನ: ಮಹೇಂದ್ರನ್ಮತ್ತು ದೀಪಕ್ ಮೋಜಿನ ಜೀವನಕ್ಕೆ ಅಂಟಿ ಕೊಂಡಿದ್ದು, ಹಣಕ್ಕಾಗಿ ನಾಲ್ಕು ವರ್ಷಗಳಿಂದ ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿದ್ದರು. ಹಗಲಿನಲ್ಲಿ ಸುತ್ತಾಡಿ ದ್ವಿಚಕ್ರ ವಾಹನಗಳನ್ನು ಗುರುತಿಸಿ ಕೊಳ್ಳುತ್ತಿದ್ದರು. ನಿರ್ಮಾಣಹಂತದ ಕಟ್ಟಡಗಳಲ್ಲಿ ಮಲಗಿ, ರಾತ್ರಿ ವೇಳೆ ಹೋಗಿದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ತಿಲಕನಗರ ಪೊಲೀಸರು 20 ಲಕ್ಷ ರೂ. ಮೌಲ್ಯದ 19 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಆರೋಪಿ ದೀಪಕ್ ಈ ಹಿಂದೆ ದ್ವಿಚಕ್ರವಾಹನ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ. ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದು ಕೋರ್ಟ್ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಮಶಾನ ಸಂಜಯ್ ಬಂಧನ: ತಿಲಕ್ನಗರ, ಕೋರಮಂಗಲದಲ್ಲಿ ಬೆಳಗಿನ ಜಾವ ಮತ್ತು ರಾತ್ರಿವೇಳೆ ಸುಲಿಗೆ, ಸರಗಳ್ಳತನ ಮಾಡುತ್ತಿದ್ದ ಸ್ಮಶಾನ ಸಂಜಯ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಾಖಲಿಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಸಂಜಯ್ ಅಲಿಯಾಸ್ ಸ್ಮಶಾನ ಗುರುತು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. 5 ಲಕ್ಷ ರೂ. ಮೌಲ್ಯದ 86 ಗ್ರಾಂ ಚಿನ್ನದ ಸರ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ