ಸರಗಳವು, ಸುಲಿಗೆ: ನಾಲ್ವರ ಬಂಧನ
Team Udayavani, Jun 2, 2019, 3:01 AM IST
ಬೆಂಗಳೂರು: ಕಾರಿನಲ್ಲಿ ಬಂದು ಸರಗಳ್ಳತನ, ಸುಲಿಗೆ ಹಾಗೂ ಹಲ್ಲೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪ್ರೇಮ್ನಗರದ ಪ್ರಕಾಶ್ ಅಲಿಯಾಸ್ ಕುಳ್ಳ (27), ಮಾಗಡಿ ರಸ್ತೆಯ ಶಶಿ ಅಲಿಯಾಸ್ ಶಶಿಕುಮಾರ್(23), ಪ್ರಶಾಂತ್ ಅಲಿಯಾಸ್ ಮಂಡೆ (20) ಹಾಗೂ ಮೋಹನ್ ಕುಮಾರ್ ಅಲಿಯಾಸ್ ಅಚ್ಚು(21) ಬಂಧಿತರು.
ಆರೋಪಿಗಳಿಂದ 8.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರುಗಳು, ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೂಬ್ಬ ಆರೋಪಿ ವಿನೋದ್ ಕುಮಾರ್ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವಿನೋದ್ ಕುಮಾರ್ ಇತರೆ ಆರೋಪಿಗಳ ಜತೆ ಸೇರಿಕೊಂಡು ಅನ್ನಪೂರ್ಣೇಶ್ವರಿನಗರ, ತಲ್ಲಘಟ್ಟಪುರ, ಜೆ.ಪಿ.ನಗರ, ಬನಶಂಕರಿ, ನಂದಿನಿ ಲೇಔಟ್ ಸೇರಿ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಬಂದು ವಾಯುವಿಹಾರಕ್ಕೆ ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಸರಕಳವು ಮಾಡುತ್ತಿದ್ದರು.
ಬಂಧಿತರು ಇತ್ತೀಚೆಗೆ ಬನಶಂಕರಿ 2ನೇ ಹಂತದಲ್ಲಿ ಪತಿಯೊಂದಿಗೆ ವಾಯುವಿಹಾರಕ್ಕೆ ಹೋಗುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಮೊದಲಿಗೆ ಕಾರು ಕಳ್ಳತನ ಮಾಡಿತ್ತಿದ್ದ ಆರೋಪಿಗಳು, ನಂತರ ಅದೇ ಕಾರಿನಲ್ಲಿ ನಗರವೆಲ್ಲ ಸುತ್ತಾಡಿ ಕೃತ್ಯ ಎಸಗುತ್ತಿದ್ದರು. ಒಂದು ವೇಳೆ ನಿರಾಕರಿಸಿದರೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ