ರಾಜ್ಯದಲ್ಲಿ ಸಿದ್ದರಾಮಯ್ಯವನರು ಮುಖ್ಯಮಂತ್ರಿ ಆಗುವ ಲಕ್ಷಣಗಳು ಕಾಣುತ್ತಿದೆ : ಎಂ.ಬಿ ಪಾಟೀಲ್
Team Udayavani, Dec 2, 2019, 12:26 PM IST
ಬೆಂಗಳೂರು : ಉಪಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ನಾಯಕರೆಲ್ಲಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೇಳಿಕೆ –ಪ್ರತಿ ಹೇಳಿಕೆಯಿಂದಲೇ ಚುನಾವಣಾ ರಣಾರಂಗದ ಬಿಸಿ ಹೆಚ್ಚುತ್ತಿದೆ.
ಮಾಜಿ ಸಚಿವ ಎಂ.ಬಿ ಪಾಟೀಲ್ ಈ ತಿಂಗಳ ಅಂತ್ಯದೊಳಗೆ ಮತ್ತೆ ಭಾಗ್ಯಗಳ ಸರ್ಕಾರ ಬರಲಿದೆ, ಈಗಿನ ಸರ್ಕಾರ ಇದೆವೋ ಇಲ್ಲವೋ ಎನ್ನುವಂತಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಮತ್ತೆ ರಾಜ್ಯದಲ್ಲಿ ಸಿದ್ದರಾಮಯ್ಯವನರು ಮುಖ್ಯಮಂತ್ರಿ ಆಗುವ ಲಕ್ಷಣಗಳು ಕಾಣುತ್ತಿದೆ ಎಂದು ಟ್ವೀಟ್ ಮಾಡಿ ಪರೋಕ್ಷವಾಗಿ ಎದುರಾಳಿ ಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.