ದೌರ್ಜನ್ಯದ ವಿರುದ್ಧ ಕ್ರಮವೇ ಇಲ್ಲ
Team Udayavani, Aug 25, 2018, 12:52 PM IST
ಬೆಂಗಳೂರು: ಗಾರ್ಮೆಂಟ್ಸ್ಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಶೋಚನಿಯ ಬದುಕಿನ ಬಗ್ಗೆ ಹತ್ತಾರು ಬಾರಿ ಸರ್ಕಾರದ ಗಮನಕ್ಕೆ ಬಂದರೂ ಕಾರ್ಮಿಕರ ಸಮಸ್ಯೆಗೆ ಸ್ಪಂದನೆ ಹಾಗೂ ದೌರ್ಜನ್ಯ ಎಸಗುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ.
ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಗಾರ್ಮೆಂಟ್ಸ್ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಆದರೆ, ಸರ್ಕಾರ ಎಚ್ಚೆತ್ತುಕೊಂಡಿಲ್ಲ.
ರಾಜ್ಯದಲ್ಲಿ 1,30,429 ಪುರುಷ ಕಾರ್ಮಿಕರು ಹಾಗೂ 4,05,174 ಮಹಿಳಾ ಕಾರ್ಮಿಕರು ಸೇರಿ ಒಟ್ಟು 5,35,603 ಮಂದಿ ರಾಜ್ಯದಲ್ಲಿರುವ ವಿವಿಧ ಗಾರ್ಮೆಂಟ್ಸ್ಗಳಲ್ಲಿ ದುಡಿಯುತ್ತಿದ್ದಾರೆ.
ಅದರಲ್ಲೂ ಬೆಂಗಳೂರಿನಲ್ಲಿರುವ ಗಾರ್ಮೆಂಟ್ಸ್ಗಳಲ್ಲಿ 1,05,876 ಪುರುಷರು ಹಾಗೂ 3,28,128 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಒಟ್ಟು 4,34,004 ಜನರು ಸಿಲಿಕಾನ್ ಸಿಟಿಯಲ್ಲಿರುವ ಗಾರ್ಮೆಂಟ್ಸ್ಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಗಾರ್ಮೆಂಟ್ಸ್ಗಳಲ್ಲಿ ದುಡಿಯುತ್ತಾರೆ. ಆದರೆ ಅವರ ನೋವುಗಳ ಬಗ್ಗೆ ಆಡಳಿತ ವ್ಯವಸ್ಥೆ ಸ್ಪಂದಿಸುತ್ತಿಲ್ಲ. ಪಿಎಫ್ ಇಎಸ್ಐ ಸಮಸ್ಯೆಗಳ ಬಗ್ಗೆ ಗಾರ್ಮೆಂಟ್ಸ್ ಲೇಬರ್ ಯೂನಿಯನ್ಗೆ ಹಲವು ದೂರುಗಳು ಬಂದಿರುತ್ತವೆ.
ಈ ದೂರುಗಳನ್ನು ಕಾರ್ಮಿಕ ಇಲಾಖೆಗೆ ಸಲ್ಲಿಸಿ ಅಧಿಕಾರಿಗಳು ವಿಚಾರಣೆ ಮುಂದದಾಗ ಕಾರ್ಖಾನೆ ಪರವಾದ ವಕೀಲ ಮಾತ್ರ ವಿಚಾರಣೆ ಹಾಜರಾಗುತ್ತಾರೆ. ಎಂದಿಗೂ ಕಾರ್ಖಾನೆಯ ಮೇಲಾಧಿಕಾರಿ ಅಥವಾ ಮಾಲೀಕರು ವಿಚಾರಣೆಗೆ ಹಾಜರಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅನ್ಯಾಯಕ್ಕೊಳಗೊಳ ಮಹಿಳೆಗೆ ಎಂದಿಗೂ ಪೂರ್ಣ ನ್ಯಾಯ ದೊರೆಯುವುದೇ ಇಲ್ಲ. ಒಂದಿಷ್ಟು ಹಣ ಕೊಟ್ಟು ಮಾಲೀಕರು ಕೈ ತೊಳೆದುಕೊಂಡು ಬಿಡುತ್ತಾರೆ.
ಅದರಲ್ಲೂ ಯೂನಿಯನ್ನಲ್ಲಿ ಇರುವ ಕಾರ್ಮಿಕರ ಮೇಲೆ ಕಾರ್ಖಾನೆ ಮೇಲಾಧಿಕಾರಿಗಳ ಕಿರುಕುಳ ಹೆಚ್ಚಾಗಿರುತ್ತದೆ. ಅವರನ್ನು ಬೇರೆ ಫ್ಯಾಕ್ಟರಿಗಳಿಗೆ ವರ್ಗಾವಣೆ ಮಾಡುವುದು, ಕೆಲಸ ನೀಡದೆ ಸುಮ್ಮನೆ ಕುರಿಸುವುದು, ಎಲ್ಲರೆದು ಅವಮಾನವಾಗುವಂತೆ ನಡೆಸಿಕೊಳ್ಳುವುದು ಹೀಗೆ ನೂರಾರು ಕಿರುಕುಳಗಳನ್ನು ನೀಡುತ್ತಾರೆ.
ಪತ್ರಿಕೆಗಳಲ್ಲಿ ಬಂದಂತಹ ವರದಿಗಳನ್ನಾಧಾರಿಸಿ, ಗಾರ್ಮೆಂಟ್ಸ್ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಿಂದ ದೂರು ಸಂಗ್ರಹಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬಹುದು. ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮೂಲಭೂತ ಸೌಕರ್ಯದ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನಾಧಾರಿಸಿ ಸರ್ಕಾರಕ್ಕೆ ಸಂಬಂಧಿಸಿದ ಅಂಗ ಸಂಸ್ಥೆಗಳು ದೂರು ದಾಖಲಿಸಿಕೊಂಡು ಕ್ರಮ ವಹಿಸಬೇಕು.
ಆದರೆ ಆದಾಗುತ್ತಿಲ್ಲ. ಸರ್ಕಾರಕ್ಕೆ ಎಲ್ಲವೂ ತಿಳಿದಿದ್ದು ಮೌನವಾಗಿದೆ. ಗಾರ್ಮೆಂಟ್ಸ್ನೊಳಗೆ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಆಂತರಿಕ ಸಮತಿಗಳು ಮಹಿಳೆಯರನ್ನು ಇಂತಹ ವಿಚಾರದಲ್ಲಿ ಶಿಕ್ಷಿತರಾನ್ನಾಗಿ ಮಾಡುತ್ತಿಲ್ಲ. ಫ್ಯಾಕ್ಟರಿಯೊಳಗೆ ನಾಮಕಾವಸ್ಥೆಗೆ ಮಾತ್ರವೇ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಆಂತರಿಕ ಸಮಿತಿಗಳಿವೆ. ಈ ಸಮಿತಿಗಳು ಮಹಿಳೆಯರ ಪರವಾದ ಹಕ್ಕುಗಳ ಬಗ್ಗೆ ಕಿಂಚಿತ್ತು ಯೋಚಿಸುವುದಿಲ್ಲ.
ಫ್ಯಾಕ್ಟರಿ ಪರವಾದ ಸಮಿತಿಗಳಾಗಿವೆ. ಅವು ಬದಲಾಗಬೇಕು ಎಂದು ಗಾರ್ಮೆಂಟ್ಸ್ ಸಂಘಟನೆಗಳು ತಿಳಿಸಿವೆ. ಗಾರ್ಮೆಂಟ್ಸ್ನಲ್ಲಿ ದುಡಿಯುತ್ತಿರುವ ಮಹಿಳೆಯರ ಹಕ್ಕುಗಳ ರಕ್ಷಣೆ, ಉದ್ಯೋಗ ಭದ್ರತೆ ಸೇರಿದಂತೆ ಅವರ ಹಿತರಕ್ಷಣೆ ಕಾಪಾಡುವುದು ಸರ್ಕಾರ, ಕೈಗಾರಿಕಾ ವಲಯ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದು ಗಾರ್ಮೆಂಟ್ಸ್ ಮಹಿಳೆಯರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
ಸಮಿತಿ ರಚಿಸಲು ಕ್ರಮ: ಗಾರ್ಮೆಂಟ್ಸ್ ಮಹಿಳೆಯರು ಅನುಭವಿಸುತ್ತಿರುವ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಸಮಿತಿ ರಚಿಸಬೇಕೆಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಗಾರ್ಮೆಂಟ್ಸ್ ಮಾಲೀಕರು, ಕಾರ್ಮಿಕರ ಇಲಾಖೆಯ ಆಯುಕ್ತರು, ಗಾರ್ಮೆಂಟ್ಸ್ ಕಾರ್ಮಿಕರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳನ್ನೊಳಗೊಂಡ ಸಮಿತಿ ರಚಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಇದರಲ್ಲಿ ಮಹಿಳೆಯರು ಅನುಭವಿಸುತ್ತಿರುವ ದೌರ್ಜನ್ಯದ ಕುರಿತು ಕ್ರಮ ತೆಗೆದುಕೊಳ್ಳುವವರು ಇರಬೇಕು. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಮಹಿಳಾ ಆಯೋಗದ ಅಧಿಕಾರಿಯೊಬ್ಬರನ್ನು ಈ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಗಾರ್ಮೆಂಟ್ಸ್ ಕಾರ್ಮಿಕರ ಪರವಾದ ಸಂಘಟನೆಗಳು ಒತ್ತಾಯಿಸಿವೆ.
ದೌರ್ಜನ್ಯದ ಅರಿವೇ ಇರಲಿಲ್ಲ: ಇತ್ತೀಚಿಗೆ ಗಾರ್ಮೆಂಟ್ಸ್ ನೌಕರರಿಗೆ ಮೈಸೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯಾಗಾರಕ್ಕೆ ಬಂದಂತಹ ಮಹಿಳೆಯರಿಗೆ ಪುರುಷ ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವೇ ಇರಲಿಲ್ಲ ಎಂಬುದು ದುರದೃಷ್ಟಕರ ಸಂಗತಿ.
ಫ್ಯಾಕ್ಟರಿಗಳಲ್ಲಿರುವ ಆಂತರಿಕ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಮಿತಿಗಳು ಈ ಬಗ್ಗೆ ಸರಿಯಾಗಿ ಗಾರ್ಮೆಂಟ್ಸ್ ಮಹಿಳೆಯರಿಗೆ ತರಬೇತಿ ನೀಡಿಲ್ಲದಿರುವು ಖೇದನಿಯ. ಹೀಗಾಗಿ ಬಹುತೇಕ ಯುವತಿಯರಿಗೆ ತಮ್ಮ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವೇ ಇರುವುದಿಲ್ಲ ಎಂದು ಕಾರ್ಮಿಕ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಗಾರ್ಮೆಂಟ್ಸ್ಗಳಲ್ಲಿ ದುಡಿಯುವ ಮಹಿಳೆಯರನ್ನು ಏಕವಚನದಲ್ಲಿ ಕರೆಯುವುದು, ಅವರನ್ನು ಕೀಳಾಗಿ ಕಾಣುವ ದೃಷ್ಟಿಕೋನ ಬದಲಾಗಬೇಕು. ಗಾರ್ಮೆಂಟ್ಸ್ ಮಹಿಳೆಯರ ಹಿತ ಕಾಪಾಡುವುದು ಕೇವಲ ಸರ್ಕಾರ ಮತ್ತು ಕೈಗಾರಿಕ ವಲಯದಷ್ಟೇ ಅಲ್ಲ. ಸಮಾಜದ ಜವಾಬ್ದಾರಿ ಕೂಡ.
-ಯಶೋಧಾ, ಮುನ್ನಡೆ ಸ್ವಯಂಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ.
ಸರ್ಕಾರ ಸ್ವಯಂಪ್ರೇರಿತಾ ದೂರು ದಾಖಲಿಸಿಕೊಂಡು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು. ಸರ್ಕಾರ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಮುಂದಾದರೆ ಅಗತ್ಯವಾದ ಮಾಹಿತಿಗಳನ್ನು ಸಂಘಟನೆಗಳು ನೀಡಲಿವೆ.
-ರುಕ್ಮಿಣಿ ವಿ.ಪಿ, ಗಾರ್ಮೆಂಟ್ಸ್ ಲೇಬರ್ ಯೂನಿಯನ್ನ ಅಧ್ಯಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ