ಕಲೆಯ ಬಗ್ಗೆ ಆಸಕ್ತಿ ಇರುವ ಸಚಿವರಿಲ್ಲ
Team Udayavani, Oct 28, 2018, 11:35 AM IST
ಬೆಂಗಳೂರು: ಈ ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಎಂ.ಪಿ.ಪ್ರಕಾಶ್, ಜೀವರಾಜ್ ಆಳ್ವ ಅವರ ಜೊತೆ ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದರು. ಕಲಾವಿದರ ಮಾತುಗಳಿಗೆ ಅವರು ಕೂಡ ಬೆಲೆ ಕೊಡುತ್ತಿದ್ದರು. ಆದರೆ ಈಗ ಕಲೆ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಯಾವ ಸಚಿವರು ಇಲ್ಲ ಎಂದು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಿದ್ದ ಸಾಧಕರೊಡನೆ ಸಂವಾದದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ವೇಳೆಯಿಂದ ಇಲ್ಲಿವರೆಗೂ ಎಲ್ಲ ಸಚಿವರು ಹಾಗೂ ಮುಖ್ಯಮಂತ್ರಿಗಳು ಪರಿಚಯವಿದ್ದಾರೆ. ಆದರೆ ನನ್ನ ರಂಗ ಚಟುವಟಿಕೆಗೆ ಅವರಿಂದ ನಯಾ ಪೈಸೆ ಅನುದಾನ ಪಡೆದಿಲ್ಲ. ಅನುದಾನ ಪಡೆದಿರುವುದು ಸಾಬೀತುಪಡಿಸಿದರೆ ರಂಗಚಟುವಟಿಕೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದರು.
“ವಿಜಯ ಶಾಲೆಯಲ್ಲಿ ಓದುತ್ತಿದ್ದಾಗ ವೇಷ ಭೂಷಣಕ್ಕೆ ಹಣವಿಲ್ಲದಿದ್ದರಿಂದ ಮೈತುಂಬಾ ಸೀಮೆ ಸುಣ್ಣದ ಬಣ್ಣ ಬಳಿದು ಕೊಂಡು ಪಾತ್ರಮಾಡಿದೆ. ಅದಕ್ಕೆ ಮೊದಲ ಬಹುಮಾನ ಬಂತು ಎಂದು ತಾವು ಬೆಳೆದು ಬಂದ ಹಾದಿ ಮೆಲುಕು ಹಾಕಿದರು. ಒಮ್ಮೆ ಸೀತಾರ್ವಾದಕ ರವಿ ಶಂಕರ್ ಅವರು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಗೀತ ಕಚೇರಿ ಏರ್ಪಡಿಸಿದ್ದರು. ಇದಕ್ಕೆ ಬೆಳಕು ಸಂಯೋಜನೆ ನಾನೇ ಮಾಡಿದ್ದೆ.
ಈ ವೇಳೆ ಎಂ.ಎಸ್.ಸತ್ಯು ನನ್ನನ್ನು ಕರೆದು ಪತ್ನಿ ಜೊತೆ ವೇದಿಕೆಗೆ ಕರೆದು ಸನ್ಮಾನ ಮಾಡುತ್ತೇವೆ ಎಂದಿದ್ದರು. ಹೀಗಾಗಿ ನಾನು ಮನೆಗೆ ತೆರಳಿ ಸೂಟುಬೂಟು ಧರಿಸಿ ಪತ್ನಿ ಜೊತೆ ಕಲಾ ಕ್ಷೇತ್ರಕ್ಕೆ ತೆರಳಿ ಮುಂದಿನ ಸಾಲಿನಲ್ಲಿ ಕುಳಿತೆ. ನನ್ನ ದುರಾದೃಷ್ಟಕ್ಕೆ ಲೈಟ್ಗಳು ಕೈಕೊಟ್ಟವು. ಕೂಡಲೇ ಸತ್ಯು ಅವರು ಸರಿಪಡಿಸುವಂತೆ ನನಗೆ ಸೂಚಿಸಿದರು.
ಸೂಟುಬೂಟು ಬಿಚ್ಚಿ ಏಣಿ ಹತ್ತಿ ಲೈಟ್ ಸರಿ ಮಾಡಿದೆ. ನನ್ನ ಹೆಂಡತಿ ನನ್ನ ಗಂಡ ಎಲೆಕ್ಟ್ರಿಷಿಯನ್ ಎಂದು ತಿಳಿದು ಸಂಗೀತ ಕಚೇರಿ ಮುಗಿಯುವವರೆಗೂ ಬಗ್ಗಿಸಿದ ತಲೆ ಎತ್ತಲಿಲ್ಲ. ಅವಳನ್ನು ಸಮಾಧಾನಪಡಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ ಎಂದಾಗ ನೆರೆದವರನ್ನು ನಗೆಗಡಲ್ಲಿ ತೇಲಿಸಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ಡಾ.ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!