ಚರ್ಚೆ ಮಾಡುವ ಅವಶ್ಯಕತೆಯಿಲ್ಲ’
Team Udayavani, Jan 4, 2018, 6:30 AM IST
ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ಲಿಂಗಾಯತ ಧರ್ಮದ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡ ವ್ಯಕ್ತಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, “ದಿಂಗಾಲೇಶ್ವರ ಸ್ವಾಮೀಜಿಯೊಂದಿಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ.
ಅವರೇನು ದೊಡ್ಡ ಸ್ವಾಮಿಯಲ್ಲ. ಅವರದು ಬಸವಣ್ಣನ ಸಿದಾಟಛಿಂತದ ಮಠ ಎಂಬುದನ್ನು ಅವರು ಅರಿತುಕೊಂಡು ಮಾತನಾಡಬೇಕು. ದಿಂಗಾಲೇಶ್ವರೊಂದಿಗೆ ಚರ್ಚೆ ಮಾಡಲು ನಾನು ಒಪ್ಪಿಲ್ಲ. ಬಸವರಾಜ ಹೊರಟ್ಟಿಯವರು ಚರ್ಚೆಗೆ ಆಹ್ವಾನ ನೀಡಿದ ಬಗ್ಗೆ ನನಗೆ ಮಾಹಿತಿಯಿಲ್ಲ. ದಿಂಗಾಲೇಶ್ವರರು ನಮಗೆ ಲಿಂಗಾಯತ ಧರ್ಮ ಮಾನ್ಯತೆ ನೀಡುವವರಲ್ಲ. ಚರ್ಚೆ ಮಾಡಲು ಅವರು ಯಾರು ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಸವಣ್ಣನ ಬಗ್ಗೆ ತಿಳಿದುಕೊಂಡು ನಂತರ ಮಾತನಾಡಲಿ’ ಎಂದರು.