ಮೂವರು ಕೊಲೆ ಆರೋಪಿಗಳ ಬಂಧನ
Team Udayavani, Apr 11, 2019, 3:00 AM IST
ಬೆಂಗಳೂರು: ಮದ್ಯದ ಬಾಟಲಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆಗೈದ ಮೂವರು ಅರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ಲೋಕೇಶ್ ಅಲಿಯಾಸ್ ಪುಟಾಣಿ (21), ದೊಡ್ಡಗುಂಟೆಯ ಸೆಲ್ವರಾಜ್ ಅಲಿಯಾಸ್ ಸೆಲ್ವ(19) ಮತ್ತು ಕಾಕ್ಸ್ಟೌನ್ನ ಸುನಿಲ್(20) ಬಂಧಿತರು.
ಆರೋಪಿಗಳು ಮಾ.24ರಂದು ರಾತ್ರಿ ಬಾಣಸವಾಡಿ ಮುಖ್ಯ ರಸ್ತೆಯ ಉಡುಪಾಸ್ ಹೋಟೆಲ್ ಮುಂಭಾಗ ಮದ್ಯದ ಬಾಟಲಿ ಕೊಂಡೊಯ್ಯುತ್ತಿದ್ದ ಸತ್ಯಶೀಲನ್ ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದರು.
ಕಲ್ಲಳ್ಳಿ ಹಿಂದೂ ರುದ್ರಭೂಮಿ ಸಮೀಪ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮಾ.24ರಂದು ರಾತ್ರಿ 10.30ರ ಸುಮಾರಿಗೆ ಸತ್ಯಶೀಲನ್ ಬಾಣಸವಾಡಿ ಮುಖ್ಯ ರಸ್ತೆಯ ಉಡುಪಾಸ್ ಹೋಟೆಲ್ ಮುಂಭಾಗ ಮದ್ಯ ಬಾಟಲಿಯನ್ನು ಕೊಂಡೊಯ್ಯುತ್ತಿದ್ದರು.
ಇದೇ ವೇಳೆ ಎರಡು ಬೈಕ್ಗಳಲ್ಲಿ ಬರುತ್ತಿದ್ದ ಆರೋಪಿಗಳು, ಸತ್ಯಶೀಲನ್ನನ್ನು ಅಡ್ಡಗಟ್ಟಿ ಮದ್ಯದ ಬಾಟಲಿ ಕೊಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಸತ್ಯಶೀಲನ್ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಆತನ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಇರಿದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ