ಇಂದು ಮೋದಿ, ಯೋಗಿ, ನಿತಿನ್ ಗಡ್ಕರಿ ರಾಜ್ಯ ಪ್ರವಾಸ
Team Udayavani, May 3, 2018, 6:30 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕಲಬುರಗಿ, ಬಳ್ಳಾರಿ ಹಾಗೂ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ನಾಯಕರ ರಾಜ್ಯ ಪ್ರವಾಸದ ವಿವರ ನೀಡಿದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮೇ 3ರಿಂದ 5ರ ತನಕ ರಾಜ್ಯದಲ್ಲಿದ್ದು ಶಿರಸಿ, ಸಾಗರ, ಬೈಂದೂರು, ಬೇಲೂರು, ಹೊನ್ನಾಳಿ, ಹಳಿಯಾಳ, ಮುದ್ದೇಬಿಹಾಳ, ತೇರದಾಳ, ಮುಧೋಳ, ಸೇಡಂ, ಬಾಲ್ಕಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
3ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಿಪ್ಪಾಣಿ ಮತ್ತು ಬೆಳಗಾವಿ ಗ್ರಾಮೀಣ ಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೇ 4ರಂದು ಕೇಂದ್ರ ಸಚಿವೆ ಸ್ಮತಿ ಇರಾನಿಯವರು ನವಲಗುಂದ, ನರಗುಂದ, ಕುಂದಗೋಳ, ಗುಳ್ಳೇದಗುಡ್ಡ, ಹುಬ್ಬಳ್ಳಿ ಮೊದಲಾದೆಡೆ ರೋಡ್ ಶೋ ನಡೆಸಲಿದ್ದಾರೆ.
5ರಂದು ಕೇಂದ್ರ ಗೃಹಸಚಿವ ರಾಜನಾಥ್ಸಿಂಗ್ ಅವರು ಕಲಬುರಗಿ ಗ್ರಾಮೀಣ, ಅಫjಲ್ಪುರ, ಚಿತ್ತಾಪುರ, ಚಿಂಚೋಳಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೇ 5ಕ್ಕೆ ಅಮಿತ್ ಶಾ ಅವರು ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಎಂಬ ಮಾಹಿತಿ ನೀಡಿದರು.