ನಾಳೆ ನಮ್ಮ ಹಕ್ಕು ಚಲಾಯಿಸ್ತೀವಿ, ನೀವು?
Team Udayavani, May 11, 2018, 6:40 AM IST
ಮತ ಹಕ್ಕು ಚಲಾವಣೆಗೆ ಇನ್ನೊಂದೇ ದಿನ ಬಾಕಿ. ಭಾರೀ ಸಂಖ್ಯೆಯಲ್ಲಿ ಮೊದಲ ಬಾರಿಗೆ ಮತ ಹಕ್ಕು ಪಡೆದವರು ಈ ಬಾರಿ ಇದ್ದಾರೆ. ರಾಜಕಾರಣವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲು ಈ ಯುವ ಮನ ತುಡಿಯುತ್ತಿದೆ. ಹೊಸ ಸರ್ಕಾರಕ್ಕೆ ಷರಾ ಬರೆಯಲು ತುದಿಗಾಲಲ್ಲಿ ನಿಂತಿರುವ ರಾಜ್ಯದ ಯುವಮನದ ನಾಡಿ ಮಿಡಿತ ಇಲ್ಲಿದೆ.
ನಾಳೆ ಮತದಾನ ಮಾಡುತ್ತೇನೆ ಎಂಬುದು ನನಗೆ ಒಂದು ರೀತಿಯ ರೋಮಾಂಚನ ಉಂಟುಮಾಡು ತ್ತಿದೆ. ಮತದಾನ ನಮ್ಮ ಆದ್ಯತೆಯಾ ಗಬೇಕು. ಹಾಗಾದಾಗ ಯೋಗ್ಯ ಸರ್ಕಾರ ಚುನಾಯಿಸಲು ಸಾಧ್ಯವಾಗುತ್ತದೆ.
– ಸಾದಿಕ್, ಬೇಗೂರು, ಗುಂಡ್ಲುಪೇಟೆ.
ಮತದಾನದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಸಂವಿಧಾನಾ ತ್ಮಕವಾಗಿ ಬಂದಿರುವ ಮತದಾನದ ಹಕ್ಕನ್ನು ಮಾರಾಟ ಮಾಡಿಕೊಳ್ಳ ಬಾರದು. ಪ್ರತಿಯೊಬ್ಬರೂ ಮತ ಚಲಾಯಿಸಿ ಯೋಗ್ಯ ವ್ಯಕ್ತಿ ಆಯ್ಕೆ ಮಾಡಬೇಕು.
– ಸಯೀದಾ ಸ್ವಅಜೀಂ, ವಿದ್ಯಾರ್ಥಿನಿ, ಚಿತ್ರದುರ್ಗ
ನನ್ನ ಬೌದ್ಧಿಕ ವಿಕಾಸವಾದಾಗಿನಿಂದ ವ್ಯವಸ್ಥೆಯನ್ನು ದೂಷಿಸುತ್ತಾ, ನಕಾರಾತ್ಮಕವಾಗಿ ವಿಶ್ಲೇಷಿಸುತ್ತಾ ಬೆಳೆದು, ಈಗ ಅದೇ ವ್ಯವಸ್ಥೆಯನ್ನು ಆಯ್ಕೆ ಮಾಡುವ ಪರಿಸ್ಥಿತಿ ಎದುರಾದಾಗ ನನ್ನ ಮತದಿಂದ ವ್ಯವಸ್ಥೆ ರಚಿತವಾಗುತ್ತದೆ.
– ಅಮರ್ತ್ಯ ಸಿದ್ಧಾರ್ಥ, ಮಂಡ್ಯ
ಐದು ವರ್ಷ ರಾಜಕಾರಣಿಗಳ ದ್ದಾದರೆ, ನಾಳೆಯ ಒಂದು ದಿನ ನಮ್ಮದು. ಮುಂದಿನ ಐದು ವರ್ಷ ನಿಂತಿರೋದು, ನಾಳೆಯ ಒಂದು ದಿನದ ನಮ್ಮ ಹಕ್ಕಿನ ಮೇಲೆ. ಕೆಟ್ಟ ರಾಜಕಾರಣಿಯ ಸೊಕ್ಕು ಮುರಿಯುತ್ತೇನೆ.
– ಜಾವೀದ್, ಕೊಪ್ಪಳ
ಪ್ರಜಾಪ್ರಭುತ್ವದ ಸೊಗಸು ಇರು ವುದೇ ಮತದಾನ ಮಾಡುವು ದರಲ್ಲಿ. ನಮಗೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾನ ಅವಶ್ಯಕ. ನಾನು ಮೊದಲ ಬಾರಿ ಮತದಾನ ಮಾಡುತ್ತಿದ್ದೇನೆ.
– ಸಂಜನಾ, ಚಾಮರಾಜನಗರ
ನಮ್ಮ ಒಂದು ಮತ ದೇಶ, ರಾಜ್ಯದ ಅಭಿವೃದ್ಧಿ ಮತ್ತು ನಮ್ಮ ಆಳ್ವಿಕೆಗೆ ಬೇಕಾಗುವ ನೀತಿ, ನಿರೂಪಣೆ ನಿರ್ಧರಿಸುತ್ತದೆ. ಮತದಾನದಿಂದ ಉತ್ತಮರನ್ನು ಆಯ್ಕೆ ಮಾಡಿದರೆ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಬಹುದು.
– ಮಹೇಶ್ ವಿ., ಬಳ್ಳಾರಿ
ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇನೆ. ನಾನು ಹಾಕುವ ಒಂದು ಮತ ರಾಜ್ಯದ, ದೇಶದ ಅಭಿವೃದ್ಧಿಗೆ ಪೂರವಾಗುತ್ತದೆ.
– ಜಿ. ಸಿದ್ದರಾಮಣ್ಣ ಹೆಬ್ಟಾಕ, ತುಮಕೂರು
ಮೊದಲ ಬಾರಿಗೆ ಮತದಾನ ಮಾಡುವುದನ್ನು ಎಂದೂ ಮರೆ ಯಲಾರೆ. ಮತ ಚಲಾಯಿಸುವ ಹಕ್ಕು ಸಿಕ್ಕಿರುವುದು ನಾನು ಈ ದೇಶದ ಪ್ರಜೆ ಎಂದು ಹೇಳಿಕೊ ಳ್ಳುವ ಅವಕಾಶ. ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವೆ.
– ತನುಶ್ರೀ, ಹಾಸನ
ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಲು ದಕ್ಷ, ನಿಷ್ಠಾವಂತ ನಾಯಕ ಬೇಕು. ಮತದಾನ ಹಕ್ಕಿನ ಮೂಲಕ ನಾನು ಅಂತಹ ನಾಯಕನನ್ನು ಆಯ್ಕೆ ಮಾಡಲಿದ್ದೇನೆ.
– ಅಶ್ವಿನಿ ಎಚ್.ವಿ., ಶಿವಮೊಗ್ಗ
ಪ್ರಜಾಪ್ರಭುತ್ವದ ರಕ್ಷಣೆಗಾಗಿ ಉತ್ತಮ ಅಭ್ಯರ್ಥಿಗಳು ಚುನಾಯಿಸಿ ಬರುವುದು ಅತಿ ಮುಖ್ಯವಾಗಿದೆ. ಹಾಗಾಗಿ ನಾನು ಅರ್ಹ ವ್ಯಕ್ತಿಗಳಿಗೆ ನಾಳೆ ಮತ ಚಲಾಯಿಸಲಿದ್ದೇನೆ.
– ಗುರುಗೌತಮ್, ಮೈಸೂರು
ಶಿಕ್ಷಣ ವ್ಯವಸ್ಥೆಯಲ್ಲಿಂದು ಡೊನೇ ಷನ್ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ರಾಜಕೀಯ ನಾಯಕರು ಬೇಕು. ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಳ್ಳುವವರು ಬೇಕು.
– ಅರವಿಂದ್, ಬೆಂಗಳೂರು
ನನ್ನ ಕ್ಷೇತ್ರದ ಅಭಿವೃದ್ಧಿಯ ಕನಸುಗಳನ್ನು ನನಸಾಗಿಸುವ, ಜತೆಗೆ ರಾಜ್ಯ ಮತ್ತು ರಾಷ್ಟ್ರದ ಏಳಿಗೆಗೆ ಕ್ಷೇತ್ರದಿಂದಾಗುವ ಪ್ರಯತ್ನವೇನು ಎಂಬ ದೃಷ್ಟಿಕೋನದಿಂದ ಯೋಚಿ ಸುವ ವ್ಯಕ್ತಿಯನ್ನು ನಾನು ನಾಳೆ ಚುನಾಯಿಸಲಿದ್ದೇನೆ.
– ಅಕ್ಷಯ ನಾಯ್ಕರ, ಬೀಳಗಿ
ನನ್ನ ಮತ ಮಾರಾಟಕ್ಕಿಲ್ಲ. ಮಾರಾಟ ಮಾಡುವವನೂ ನಾನಲ್ಲ. ನಾನು ನಾಳೆ ಚಲಾಯಿಸಲಿರುವ ಮತ ನಮ್ಮ ದೇಶವನ್ನು ರಕ್ಷಿಸುವವನಿಗೆ ಹೋಗಲಿದೆ ಎಂಬ ನಂಬಿಕೆ ನನಗಿದೆ.
– ಶರಣಬಸವ ಪಾಟೀಲ್, ಲಿಂಗಸಗೂರು
ಇದೇ ಮೊದಲ ಬಾರಿಗೆ ಮತದಾನ ಮಾಡುವ ಕ್ಷಣಕ್ಕಾಗಿ ಕಾತುರದಿಂದ ಕಾದಿದ್ದೇನೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಉತ್ತಮರನ್ನು ಆಯ್ಕೆ ಮಾಡಿಕೊಂಡು ಮತ ಚಲಾವಣೆ ಮಾಡಲು ನಿರ್ಧರಿಸಿದ್ದೇನೆ.
– ಜಿ.ಎಂ.ತೇಜಸ್, ಕೋಲಾರ.
ಅಭಿವೃದ್ಧಿ ಕೆಲಸ ಮಾಡುವಂತಹ ಒಳ್ಳೆಯವರಿಗೆ ಮತದಾನ ಮಾಡಬೇಕು ಎಂಬುದು ನನ್ನ ಇಚ್ಛೆ. ಯಾವ ಪಕ್ಷದವರು ಎಂಬುದು ಮುಖ್ಯ ಅಲ್ಲ. ಡೆವಲಪ್ಮೆಂಟ್ ವರ್ಕ್ಸ್ ಮಾಡ್ತಾರಾ ಅನ್ನೋದು ನೋಡಬೇಕು.
– ಎಸ್.ಎಂ. ಮನುಶ್ರೀ, ಎವಿಕೆ ಕಾಲೇಜು, ದಾವಣಗೆರೆ.
ರೈತರೇ ದೇಶದ ಬೆನ್ನುಲುಬಾಗಿ ರುವಾಗ ಅವರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಉತ್ತಮ ಸಮಾಜಕ್ಕೆ ಶ್ರಮಿಸುವ ಸಮರ್ಥ ನಾಯಕನನ್ನು ಜಾತಿ ಧರ್ಮದಡಿ ನೋಡದೆ ನನ್ನ ಅಮೂಲ್ಯ ಮತ ನೀಡಿ ಗೆಲ್ಲಿಸುತ್ತೇನೆ.
– ಚೇತನ್, ಹನೂರು
ರೈತರ ಸಮಸ್ಯೆಗಳಿಗೆ ಸ್ಪಂದಿಸುವ, ಪಾರದರ್ಶಕ ಆಡಳಿತ ನೀಡುವ ನಾಯಕ ನನಗೆ ಬೇಕು. ಅಂತಹ ಸರಳ ವ್ಯಕ್ತಿತ್ವ ಹೊಂದಿರುವ ನಾಯಕನಿಗೆ ನನ್ನ ಮತ ಮೀಸಲಾಗಿರಲಿದೆ.
– ಆರೀಫ್ ವಾಲೀಕಾರ, ಬೆಳಗಾವಿ
ನಾನು ಪಕ್ಷಕ್ಕಿಂತ ಅಭ್ಯರ್ಥಿಯ ವ್ಯಕ್ತಿತ್ವ ನೋಡಿ ಮತ ಚಲಾಯಿಸುತ್ತೇನೆ. ಅಭ್ಯರ್ಥಿ ಹೇಗೆ ಆಡಳಿತ ನಡೆಸುತ್ತಾನೆ, ಜನರ ಕಷ್ಟ ಸುಖಗಳಿಗೆ ಹೇಗೆ ಸ್ಪಂದಿಸುತ್ತಾನೆ ಎಂಬುದನ್ನು ಅಳೆದು ಹಕ್ಕು ಚಲಾಯಿಸುತ್ತೇನೆ.
– ಗೀತಾ ಎಂ ನೀಲಗಾರ, ಬಾಗಲಕೋಟೆ
ಎಲೆಕ್ಷನ್ಗೂ ಮುನ್ನ ಸ್ಥಳೀಯ ಸಮಸ್ಯೆಗಳ ಬಗ್ಗೆ ಕ್ಯಾರೆ ಅನ್ನದ ವ್ಯಕ್ತಿ, ಚುನಾವಣೆ ಬಂತೆಂದರೆ ಜನರ ಮುಂದೆ ಪ್ರತ್ಯಕ್ಷರಾಗುತ್ತಾರೆ. ಚುನಾವಣೆಯ ಉದ್ದೇಶವನ್ನು ಇಟ್ಟುಕೊಂಡು ಕಣಕ್ಕಿಳಿಯುವ ಅಭ್ಯರ್ಥಿ ಬೇಕಾಗಿಲ್ಲ.
– ಪ್ರಿಯಾಂಕ, ಬೆಂಗಳೂರು
ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡದೆ, ಜನರ ಏಳಿಗೆಗಾಗಿ ಕೆಲಸ ಮಾಡುವ ಪಕ್ಷ ಹಾಗೂ ಅಭ್ಯರ್ಥಿಯನ್ನು ಗುರುತಿಸಿ ಓಟು ಹಾಕುತ್ತೇನೆ.
– ನರೇಶ್ ಶೆಟ್ಟಿ, ದಕ್ಷಿಣ ಕನ್ನಡ
ಕೃಷಿ, ಶಿಕ್ಷಣ,ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ತಿಳಿವಳಿಕೆ ಹೊಂದಿರುವ ವ್ಯಕ್ತಿಯಾಗಿರಬೇಕು. ಚುನಾವಣೆಗೂ ಮೊದಲು ಭರವಸೆ ನೀಡಿ, ಆ ನಂತರ ತನ್ನ ಕ್ಷೇತ್ರನ್ನು ಮರೆಯುವ ಅಭ್ಯರ್ಥಿ ನನಗೆ ಬೇಕಾಗಿಲ್ಲ.
– ವಿದ್ಯಾ ಭಾರತಿ, ಬೆಂಗಳೂರು
ಮತದಾನ ನನ್ನ ಹಕ್ಕು. ಪಕ್ಷ ಮುಖ್ಯವಲ್ಲ ನನಗೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಒಬ್ಬ ಸಮರ್ಥ ನಾಯಕನಿಗೆ ನನ್ನ ಈ ಅಮೂಲ್ಯವಾದ ಮತ ನೀಡುತ್ತೇನೆ. ಆ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ.
– ಭವ್ಯಾ ಶೆಟ್ಟಿಗಾರ್, ಉಜಿರೆ
ಮೊದಲಬಾರಿಗೆ ಮತ ಹಾಕುವುದು ಖುಷಿ ತಂದಿದೆ. ಪಕ್ಷಗಳು ಯುವಕ ಯುವತಿಯರಿಗೆ ಉದ್ಯೋಗ ದೊರಕುವ ಯೋಜನೆಯನ್ನು ರೂಪಿಸಬೇಕು. ನಾನಂತೂ ಅಭ್ಯರ್ಥಿಯ ಗುಣ ನೋಡಿ ಮತ ಹಾಕುತ್ತೇನೆ.
– ಡಿ.ಸವಿತಾ, ಮಧುಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA