ಇಬ್ಬರು ನಾಮನಿರ್ದೇಶಿತರ ಪ್ರಮಾಣ ವಚನ ನಾಳೆ
Team Udayavani, Jun 4, 2017, 3:45 AM IST
ಬೆಂಗಳೂರು: ಸೋಮವಾರದಿಂದ ನಡೆಯಲಿರುವ ಅಧಿವೇಶನದ ಕುರಿತು ಪ್ರಸ್ತಾಪಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಅಧಿವೇಶನ ಮೊದಲ ದಿನ ಸಂತಾಪ, ನಾಮನಿದೇರ್ಶಿತರ ಪ್ರಮಾಣ ವಚನದೊಂದಿಗೆ ಮಳೆಗಾಲದ ಅಧಿವೇಶನ ಆರಂಭವಾಗಲಿದೆ.
ಪ್ರತಿ ಬಾರಿ ಸಂತಾಪ ಸೂಚನೆಯ ನಂತರ ಉಳಿದ ಕಲಾಪಗಳನ್ನು ಆರಂಭಿಸಲಾಗುತ್ತಿತ್ತು ಈ ಬಾರಿ ಸದನದ ಹಾಲಿ ಸದಸ್ಯೆ ವಿಮಲಾಗೌಡ ನಿಧನ ಹೊಂದಿರುವುದರಿಂದ ಅವರ ಗೌರವಾರ್ಥ ಮೊದಲ ದಿನ ಕೇವಲ ಸಂತಾಪ ಸೂಚನೆ ಮಾಡಿ ಸದನ ಮುಂದೂಡಲಾಗುವುದು ಎಂದು ಹೇಳಿದರು.ಅದಕ್ಕೂ ಮೊದಲು ರಾಜ್ಯ ಪಾಲರಿಂದ ನಾಮ ನಿರ್ದೇಶನಗೊಂಡ ಇಬ್ಬರು ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಸಾಮಾಜಿಕ, ಶೈಕ್ಷಣಿಕ ಸಾಧನೆಯಡಿ ಮೋಹನ್ ಕೊಂಡಜ್ಜಿ ಹಾಗೂ ಪಿ.ಆರ್. ರಮೇಶ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಕಳುಹಿಸಿದ್ದಾರೆ. ಅವರಿಗೆ ಪ್ರಮಾಣ ವಚನ ಬೋಧಿಸಲಾಗುವುದು ಎಂದು ತಿಳಿಸಿದರು.
ಜೂನ್ 6 ರಂದು ಪರಿಷತ್ ಸದಸ್ಯರಿಗೆ ಜಿಎಸ್ಟಿ ಕಾಯ್ದೆ ಬಗ್ಗೆ ಮಾಹಿತಿ ನೀಡಲು ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ಬೆಳಗ್ಗೆ ಪರಿಷತ್ ಸದಸ್ಯರಿಗೆ ಜಿಎಸ್ಟಿ ಸಾಧಕ ಬಾಧಕಗಳ ಕುರಿತು ದೆಹಲಿ ಮೂಲದ ಸಂಸ್ಥೆ ಮೂಲಕ ಮಾಹಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಹತ್ತು ದಿನ ನಡೆಯುವ ಈ ಅಧಿವೇಶನದಲ್ಲಿ 905 ಪ್ರಶ್ನೆಗಳು ಬಂದಿದ್ದು, 75
ಚುಕ್ಕೆಗುರುತಿನ ಪ್ರಶ್ನೆಗಳು ಬಂದಿವೆ. ಈ ಅಧಿವೇಶನದಲ್ಲಿ ಸರ್ಕಾರದ ಧನ ವಿನಿಯೋಗ ವಿಧೇಯಕ, ಮತ್ತು ಜಿಎಸ್ಟಿ ಬಿಲ್ ಮಂಡನೆಯಾಗಲಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ