ಬೆಂಗಳೂರು: ಹಿಟಾಚಿ ಹರಿದು ಮೂರು ವರ್ಷದ ಮಗು ದಾರುಣ ಸಾವು
Team Udayavani, Jan 1, 2022, 3:56 PM IST
ಬೆಂಗಳೂರು: ಹಿಟಾಚಿ ಹರಿದು ಮೂರು ವರ್ಷದ ಮಗುವೊಂದು ಸಾವನ್ನಪ್ಪಿದ ದುರಂತ ಘಟನೆ ಉಪ್ಪಾರಪೇಟೆ ಧ್ವನಂತರಿ ರಸ್ತೆಯಲ್ಲಿ ಇಂದು (ಶನಿವಾರ) ನಡೆದಿದೆ.
ಸಿಮಿಯಾನ್ (3) ಮೃತ ಮಗು. ಮಗು ತನ್ನ ತಂದೆಯೊಂದಿಗೆ ಹೊರಗೆ ಬಂದಿತ್ತು. ಈ ವೇಳೆ ರಿವರ್ಸ್ ಬರುತ್ತಿದ್ದ ಹಿಟಾಚಿಗೆ ಮಗು ಸಿಲುಕಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ಚಾಲಕ ಗಮನಿಸದೆ ಇರುವುದರಿಂದ ರಿವರ್ಸ್ ಆಗಿ ಬರುತ್ತಿದ್ದ ಹಿಟಾಚಿಯ ಹಿಂಭಾಗಕ್ಕೆ ಮಗು ಸಿಲುಕಿ ಸಾವನ್ನಪ್ಪಿದೆ.
ಈ ಕುರಿತು ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ