ಅಡಕತ್ತರಿಯಲ್ಲಿ ಸಾರಿಗೆ ನೌಕರರ ಬದುಕು
Team Udayavani, Apr 30, 2021, 1:11 PM IST
ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರಜಾರಿಗೊಳಿಸಿದ ಬಿಗಿ ಕರ್ಫ್ಯೂ ನಿಯಮವು ಅಮಾನತುಗೊಂಡ ಸಾವಿರಾರು ಸಾರಿಗೆ ನೌಕರರನ್ನುಅಕ್ಷರಶಃ ಅಡ್ಡಕತ್ತರಿಯಲ್ಲಿ ಸಿಲುಕಿಸಿದೆ! ಸಾರಿಗೆ ನೌಕರರಿಗೂ ಸರ್ಕಾರದ ಬಿಗಿ ಕರ್ಫ್ಯೂಗೂ ಎತ್ತಣದಿಂದೆತ್ತ ಸಂಬಂಧ ಅನಿಸಬಹುದು.
ಆದರೆ, ಇವೆರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆ.ಅಷ್ಟೇ ಅಲ್ಲ, ಕೆಲ ನೌಕರರ ಜೀವನನಿರ್ವಹಣೆಯನ್ನೇ ದುಸ್ತರಗೊಳಿಸಿದೆ. ಇತ್ತೀಚೆಗೆ ನಡೆದ ಸಾರಿಗೆ ಮುಷ್ಕರದಲ್ಲಿ ನಿಗಮಗಳ ಕೆಂಗಣ್ಣಿಗೆ ಗುರಿಯಾದ ಸುಮಾರು ಮೂರುಸಾವಿರ ನೌಕರರನ್ನುಅಮಾನತುಗೊಳಿಸಲಾಗಿದೆ.
ಆದರೆ, ಸಾರಿಗೆ ನಿಗಮಗಳ ನಿಯಮದ ಪ್ರಕಾರ ಅಮಾನತುಗೊಂಡವರು ಕಡ್ಡಾಯವಾಗಿ ನಿತ್ಯ ಆಯಾಘಟಕಗಳಿಗೆ ಆಗಮಿಸಿ, ಸಹಿ ಹಾಕಬೇಕು. ಆಗ ಮಾತ್ರ ಅವರಿಗಿದ್ದ ಒಟ್ಟು ಸಂಬಳದಲ್ಲಿ ಅರ್ಧದಷ್ಟು ವೇತನ ಬಿಡುಗಡೆ ಮಾಡಲು ಅವಕಾಶ ಇರುತ್ತದೆ. ಆದರೆ, ಅಮಾನತುಗೊಂಡವರಲ್ಲಿ ಬಹುತೇಕರು ಬೇರೆ ಊರುಗಳಿಂದ ಬಂದು ಕರ್ತವ್ಯ ನಿರ್ವಹಿಸುವವರಾಗಿದ್ದು, ಕರ್ಫ್ಯೂ ಇರುವುದರಿಂದ ಎಲ್ಲರೂ ಕುಟುಂಬ ಸಮೇತರಾಗಿ ತಮ್ಮ ಊರುಗಳಿಗೆತೆರಳಿದ್ದಾರೆ.
ಸಂಚಾರವೂ ಸಂಪೂರ್ಣ ಸ್ತಬ್ಧಗೊಂಡಿದೆ.ಇಂತಹ ಸಂದರ್ಭದಲ್ಲಿ ನಿತ್ಯ ಡಿಪೋಗಳಿಗೆ ಬಂದು ಸಹಿ ಹಾಕುವುದು ದುಸ್ತರವಾಗಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ವೇತನ ಬಿಡುಗಡೆ ಅನುಮಾನ. ಈ ಹಿನ್ನೆಲೆಯಲ್ಲಿ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ನೌಕರರು ಅಲವತ್ತುಕೊಳ್ಳುತ್ತಾರೆ.
ಈ ಹಿನ್ನೆಲೆಯಲ್ಲಿ ತುಸು ವಿನಾಯ್ತಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ನಡುವೆ ಸಾರಿಗೆ ನೌಕರರ ಕೂಟವೂ ಅಮಾನತುಗೊಂಡ ನೌಕರರ ವಿಚಾರದಲ್ಲಿ ಮೌನವಹಿಸಿದೆ. ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೊರತುಪಡಿಸಿದರೆ, ಯಾವುದೇ ಮುಖಂಡರು ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಚಿಕ್ಕೋಡಿ ಮೂಲದ ಬಿಎಂಟಿಸಿ ನಿರ್ವಾಹಕ ಪಂಚಾಕ್ಷರಿ ಬೇಸರವ್ಯಕ್ತಪಡಿಸುತ್ತಾರೆ.
ಹೋರಾಟಕ್ಕೆ ಕೈಜೋಡಿಸಿದ್ದರಿಂದ ನಾನು ಸೇರಿದಂತೆ ನೂರಾರು ಸಹೋದ್ಯೋಗಿಗಳನ್ನುಅಮಾನತುಗೊಳಿಸಲಾಯಿತು. ನಿಯಮದ ಪ್ರಕಾರ ನಿತ್ಯ ಕಡ್ಡಾಯವಾಗಿ ಬೆಳಗ್ಗೆ 10ರಿಂದ ಸಂಜೆ 5ರ ಒಳಗೆ ಘಟಕಕ್ಕೆ ತೆರಳಿ ಸಹಿ ಹಾಕಿ ಬರಬೇಕು. ಲಾಕ್ಡೌನ್ ಆಗಿದ್ದರಿಂದ ಊರಿಗೆ ಬಂದಿದ್ದೇನೆ. ನೂರಾರು ಕಿ.ಮೀ.ದೂರದಿಂದ ಹೋಗಿ ಬರುವುದು ಕಷ್ಟ.
ಬೆಂಗಳೂರಲ್ಲಿ ಕೊರೊನಾ ಹಾವಳಿ ತೀವ್ರವಾಗಿದ್ದು, ಆಮ್ಲಜನಕಮತ್ತು ಹಾಸಿಗೆಗಳ ಸಮಸ್ಯೆ ಹೆಚ್ಚಿದೆ. ಇದೆಲ್ಲದರಿಂದ ಹೆದರಿ, ತಾಯಿ, ಪತ್ನಿ, ಮಕ್ಕಳೊಂದಿಗೆ ಊರಿಗೆ ಬಂದುಬಿಟ್ಟಿದ್ದೇನೆ. ಇಂತಹದ್ದರಲ್ಲಿ ಸಹಿ ಹಾಕಿ ಬರಲು ಹೇಗೆ ಸಾಧ್ಯ ನೀವೇ ಹೇಳಿ ಸರ್? ಈ ಸಮಸ್ಯೆ ಬಗ್ಗೆ ಕೂಟವೂಚಕಾರ ಎತ್ತುತ್ತಿಲ್ಲ ಎಂದು ಬಿಎಂಟಿಸಿ ಚಾಲಕಚಂದ್ರಶೇಖರ್ ಅಸಹಾಯಕತೆ ತೋಡಿಕೊಂಡರು.
ಮೇ 8ರ ಒಳಗೆ ವರದಿ ಸಲ್ಲಿಸುವಂತೆ ಸೂಚನೆ
ಹೈಕೋರ್ಟ್ ಮಧ್ಯಂತರ ಆದೇಶದ ಬೆನ್ನಲೆ ಮತ್ತು ವಜಾ ಮತ್ತು ಅಮಾನತುಗೊಂಡ ಹಾಗೂ ವರ್ಗಾವಣೆಗೊಂಡ ನೌಕರರ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡುಮೇ 8ರ ಒಳಗೆ ವರದಿ ಸಲ್ಲಿಸುವಂತೆ ಕಾನೂನು ಇಲಾಖೆ ಕೆಎಸ್ಆರ್ಟಿಸಿಯ ಎಲ್ಲ ಇಲಾಖಾಮುಖ್ಯಸ್ಥರಿಗೆ ಸೂಚಿಸಿದೆ. ಕಾರ್ಮಿಕ ಸಂಘದ ಬೇಡಿಕೆಗಳನ್ನು ಪಕ್ಷಗಾರರು ಸೌಹಾರ್ದಯುತ ಮಾತುಕತೆಮೂಲಕ ಇತ್ಯರ್ಥಪಡಿಸಿಕೊಂಡು ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ವಿಫಲರಾದಲ್ಲಿ, ಹೈಕೋರ್ಟ್ ನಿವೃತ್ತನ್ಯಾಯಾಧೀಶರನ್ನು ಕಾರ್ಮಿಕ ವಿವಾದಕ್ಕೆ ಸಂಬಂಧಿಸಿದಂತೆ ನೇಮಿಸಲಾಗುವುದು ಎಂದೂ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ