ಸರ್ಕಾರಗಳಿಂದ ಆಲಯಗಳ ಸಂಪತ್ತು ಕೊಳ್ಳೆ


Team Udayavani, Jan 14, 2019, 6:17 AM IST

sarkara.jpg

ಬೆಂಗಳೂರು: ಹೆಚ್ಚು ಭಕ್ತರು ಭೇಟಿ ನೀಡುವ ಮತ್ತು ಹೆಚ್ಚು ಆದಾಯ ಬರುವ ದೇವಾಲಯಗಳ ಮೇಲೆ ಸರ್ಕಾರಗಳ ಕಣ್ಣು ಹೆಚ್ಚಾಗಿದೆ. ಹಿಂದೆ ಘಜ್ನಿ ಮೊಹಮ್ಮದ್‌ ಸೋಮವಾನಾಥ ದೇವಾಯಲದ ಮೇಲೆ 17 ಬಾರಿ ದಾಳಿ ನಡೆಸಿ ಸಂಪತ್ತು ದೋಚಿಕೊಂಡು ಹೋಗಿದ್ದ. ಆದರೆ, ಈಗ ಸರ್ಕಾರದ ರೂಪದಲ್ಲಿರುವ ಈಗಿನ ಘಜ್ನಿ ಮೊಹಮ್ಮದ್‌ಗಳು ಸಂಪತರಿತ ದೇವಾಲಯಗಳ ಮೇಲೆ ದಾಳಿ ಮಾಡಿ ಅಲ್ಲಿನ ಸಂಪತ್ತು ಹೊಡೆಯುತ್ತಿದ್ದಾರೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್‌ ಕಳವಳ ವ್ಯಕ್ತಪಡಿಸಿದ್ದಾರೆ.

ದಿ ಮಿಥಿಕ್‌ ಸೊಸೈಟಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ “ಶ್ರೀ ಕುಕ್ಕೆ ಸುಬ್ರಹ್ಮಣ್ಯ: ಇತಿಹಾಸ ಮತ್ತು ಸಂಸ್ಕೃತಿ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಆವರು, ದೇಶದಲ್ಲಿ ಯಾವ್ಯಾವ ದೇವಸ್ಥಾನಗಳಿಗೆ ಹೆಚ್ಚು ಭಕ್ತರಿದ್ದಾರೆೆ, ಎಲ್ಲಿ ಹೆಚ್ಚು ಸಂಪತ್ತು ಮತ್ತು ಆದಾಯ ಇರುತ್ತದೆ ಅವುಗಳ ಮೇಲೆ ಸರ್ಕಾರಗಳ ಕಣ್ಣು ಯಾವಾಗಲೂ ಇರುತ್ತದೆ.

ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಸೋಮನಾಥ ದೇವಾಲಯದ ಮೇಲೆ ಘಜ್ನಿ ಮೊಹಮ್ಮದ್‌ 17 ಬಾರಿ ದಾಳಿ ಮಾಡಿ ಸಂಪತ್ತನ್ನು ದೋಚಿಕೊಂಡು ಹೋಗಿದ್ದ. ಈಗಿನ ಸರ್ಕಾರಗಳು ಸಹ ಸಂಪತºರಿತ ದೇವಾಲಯಗಳ ಹಣ ಹೊಡೆದು, ಆ ದೇವಸ್ಥಾನಗಳಿಗೆ ಏನನ್ನೂ ಮಾಡದೆ ಜೀವನ ಮಾಡುತ್ತವೆ. ದೇವಾಲಯಗಳ ಸಂಪತ್ತು ದೋಚುವ ಈ ಕೆಟ್ಟ ಸಂಸ್ಕೃತಿ ನಿಲ್ಲಬೇಕು. ಇದಕ್ಕಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಶಕ್ತಿ ಹಾಗೂ ಗುಣ. ಆದರೆ, ಅದು ದೇಶದ ಸಂಸ್ಕೃತಿ ಧ್ವಂಸ ಮಾಡುವ ಕೈಗಳಿಗೆ ಸಿಗದಂತೆ ರಕ್ಷಣೆ ಮಾಡಬೇಕಾಗಿದೆ. ನಂಬಿಕೆಯ ಬಲವನ್ನು ಧ್ವಂಸ ಮಾಡಲು ಹಲವು ಮಾರ್ಗಗಳನ್ನು ಹುಡುಕಿ ಅಲ್ಲಿ ಏನೂ ಮಾಡಲಾಗದೆ ಇಂದು ಧರ್ಮ ಮತ್ತು ನಂಬಿಕೆಯ ಮೇಲೆ ಆಕ್ರಮಣ ನಡೆಸಲಾಗುತ್ತಿದೆ.

ಎಲ್ಲ ದೇಶದವರಿಗೆ ನೆಲೆ ಕೊಟ್ಟು ಬೆಳೆಯಲು ಬಿಟ್ಟು ಈ ದೇಶದ ಧರ್ಮ ಮತ್ತು ನಂಬಿಕೆಗಳನ್ನು ಸಂವಿಧಾನ, ಮಾನವಹಕ್ಕು, ಲಿಂಗ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಮೂಲಕ ನೋಡುವ ಧರ್ಮ, ನಂಬಿಕೆ ಮತ್ತು ಸಂಸ್ಕೃತಿಯನ್ನು ಧ್ವಂಸಗೊಳಿಸುವ ಹೊಸ ವರ್ಗ ಹುಟ್ಟಿಕೊಂಡಿದೆ. ಧರ್ಮವನ್ನು ಸಂವಿಧಾನ ವಿರೋಧಿ ಎಂಬಂತೆ ಬಿಂಬಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

ಪಂಡಿತರ ಜವಾಬ್ದಾರಿ ದೊಡ್ಡದು: ಧರ್ಮ ಮತ್ತು ನಂಬಿಕೆಗೆ ಸಂಬಂಧಿಸಿದ ವಿಚಾರಗಳು ಸುಪ್ರೀಂಕೋರ್ಟ್‌ ಅಂಗಳಕ್ಕೆ ಹೋಗುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಸಹ ಕೋರ್ಟ್‌ ಬಾಗಿಲು ತಟ್ಟಬೇಕಾಯಿತು. ದೇವಾಲಯಗಳ ವಿಚಾರ ಬಂದಾಗ ಧಾರ್ಮಿಕ ನಂಬಿಕೆಗಳ ದೃಷ್ಟಿಕೋನ ಪರಿಗಣಿಸಬೇಕು.

ಧರ್ಮ ಮತ್ತು ನಂಬಿಕೆಗಳ ಮೇಲೆ ಆಕ್ರಮಣಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಪಂಡಿತರ ಜವಾಬ್ದಾರಿ ಬಹಳ ದೊಡ್ಡದು. ಧರ್ಮ ಮತ್ತು ನಂಬಿಕೆಗಳ ಬಗೆಗಿನ ಗೊಂದಲಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಪಂಡಿತರು ಬರೆಯಬೇಕು ಎಂದು ನಿವೃತ್ತ ನ್ಯಾ. ಕುಮಾರ್‌ ಸಲಹೆ ನೀಡಿದರು. ಮಿಥಿಕ್‌ ಸೊಸೈಟಿಯ ಗೌರವ ಅಧ್ಯಕ್ಷ ಪ್ರೊ. ಕೃ. ನರಹರಿ, ಗೌರವ ಕಾರ್ಯದರ್ಶಿ ವಿ.ನಾಗರಾಜ್‌, ಪ್ರೊ.ಎಂ.ಕೊಟ್ರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ವಿದ್ವತೂರ್ಣ ಗೋಷ್ಠಿಗಳು: ವಿಚಾರ ಸಂಕಿರಣದ ಅಂಗವಾಗಿ ಎರಡು ವಿದ್ವತೂರ್ಣ ವಿಚಾರಗೋಷ್ಠಿಗಳು ನಡೆದವು. ಇದರಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಭೌಗೋಳಿಕ ಪರಿಸರ ಹಾಗೂ ಪ್ರಾಗೈತಿಹಾಸ, ಸುಬ್ರಹ್ಮಣ್ಯ ಆರಾಧನೆ: ಮೂಲ ಮತ್ತು ವಿಕಾಸ, ಶಾಸನಗಳು, ದೇವಾಲಯ ವಾಸ್ತು, ಜಲವಿಜ್ಞಾನ, ಜಾನಪದ ಸಂಸ್ಕೃತಿ, ಐತಿಹ್ಯ ಮತ್ತು ನಂಬಿಕೆ,

ತಾಡೋಲೆಗಳು; ಪೂಜಾ ವಿಧಾನಗಳ ವಿಷಯಗಳ ಬಗ್ಗೆ ಡಾ. ಜೆ.ಕೆ.ಮಲ್ಲಿಕಾರ್ಜುನಪ್ಪ, ಪ್ರೊ. ವಾಸದೇವ ಬಡಿಗೇರ, ಪ್ರೊ. ಎಂ. ಕೊಟ್ರೇಶ್‌, ಎಸ್‌. ಕಾರ್ತಿಕ್‌, ಡಾ. ಹರಿಹರ ಶ್ರೀನಿವಾಸರಾವ್‌, ಡಾ. ಮಂಜುನಾಥ ಬೇವಿನಕಟ್ಟಿ, ದು.ಗು. ಲಕ್ಷ್ಮಣ್‌ ಹಾಗೂ ಸಿ.ಜೆ. ವಿಜಯಸಿಂಗ ಆಚಾರ್ಯ ಪ್ರಬಂಧಗಳನ್ನು ಮಂಡಿಸಿದರು.

ಒಂಬತ್ತನೇ ಶತಮಾನದ ಶಾಸನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಬಗ್ಗೆ ಉಲ್ಲೇಖವಿದೆ. ಆದರೆ ಅದಕ್ಕಿಂತಲೂ ಹಿಂದಿನಿಂದ ಆದು ಇತ್ತು. 33 ಯತಿಗಳ ಪರಂಪರೆ ಇದೆ. ಶಾಸನಗಳ ಆಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಪುನರ್‌ರಚನೆ, ಪುನರ್‌ ಅವಲೋಕನ ಅಗತ್ಯ.
-ಪ್ರೊ. ಎಂ. ಕೊಟ್ರೇಶ್‌

ಕುಕ್ಕೆ ಎಂಬ ಹೆಸರಿಗೆ ಪುರಾಣ ಮತ್ತು ಶಾಸನಗಳಲ್ಲಿ ಪುರಾವೆ ಇದೆ. ಅದಲ್ಲದೇ ಕುಕ್ಕೆಗೆ ಅಲ್ಲಿನ ಮೂಲನಿವಾಸಿಗಳಾದ ಮಲೆ ಕುಡಿಯರ ವ್ಯಕ್ತಿ ನಾಮ, ಸ್ಥಳ ನಾಮ, ಕುಲಕಸಬಿನಿಂದಲೂ ಆ ಹೆಸರು ಬಂದಿರಬಹುದು.
-ಪ್ರೊ. ಮಂಜುನಾಥ ಬೇವಿನಕಟ್ಟಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಲ್ಲ ಪೂಜಾ ವಿಧಾನಗಳು, ಧಾರ್ಮಿಕ ಕೈಂಕರ್ಯಗಳು ತಂತ್ರಸಾರ ಸಂಗ್ರಹದ ಪ್ರಕಾರವೇ ನಡೆಯುತ್ತಿವೆ. ಪೂಜಾ ವಿಧಾನಗಳ ವಿಚಾರದಲ್ಲಿ ಶಾಸ್ತ್ರ ನಿರ್ಣಯದ ಅಂತರಂಗ ಪ್ರಮಾಣಗಳನ್ನು ಪರಿಗಣಿಸಬೇಕು.
-ಸಿ.ಜೆ.ವಿಜಯಸಿಂಹ ಆಚಾರ್ಯ

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.