ಗುರುವಿಲ್ಲದ ಜೀವನ ವ್ಯರ್ಥ
Team Udayavani, Jul 30, 2018, 12:15 PM IST
ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ ಗುರು ಇರಬೇಕು. ಗುರು ಇಲ್ಲದವರ ಜೀವನ ಇದ್ದೂ ಪ್ರಯೋಜನ ಇಲ್ಲ ಎಂದು ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಬಲೇಶ್ವರ ಬೆಳಕು ಸ್ನೇಹಿತರ ಕೂಟ ಟ್ರಸ್ಟ್ ಏರ್ಪಡಿಸಿದ ತೃತೀಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಭಕ್ತರಿದ್ದಲ್ಲಿ ಗುರುವಿಗೆ ಗೌರವ ಇದ್ದೇ ಇರುತ್ತದೆ. ಗುರು ಭಕ್ತಿ ಇದ್ದಲ್ಲಿ ಜಯ ಇರುತ್ತದೆ. ಗುರುವಿನ ಮಾರ್ಗದರ್ಶನದಿಂದ ವ್ಯಕ್ತಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಬೆಂಗಳೂರಿನಲ್ಲಿ ಎಲ್ಲವೂ ಅಸ್ಥಿರವಾಗಿದೆ. ಎಲ್ಲರೂ ಭಯದ ವಾತಾವರಣದಲ್ಲಿ ಬದುಕುತಿ¨ªಾರೆ. ಆದರೆ, ಪ್ರತಿಯೊಬ್ಬ ಮನುಷ್ಯ ಮಾಡಿದ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಯಾಂತ್ರಿಕ ನಗರದಲ್ಲಿ ಬಬಲೇಶ್ವರ ಯುವಕರು ಸ್ನೇಹ ಕೂಟ ಕಟ್ಟಿಕೊಂಡು ಕೂಡಿ ಬಾಳುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರಾಷ್ಟ್ರೀಯ ಕ್ರೀಡಾಪಟು ಸಚಿನ್ ಸಾಲುಂಕೆ, ಪತ್ರಕರ್ತ ಶಂಕರ ಪಾಗೋಜಿ, ಹಾಗೂ ಮಹದೇವಪ್ಪ ಗುಡೂರು ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಬಿಬಿಎಸ್ ಕೆಟಿ ಹಂಗಾಮಿ ಅಧ್ಯಕ್ಷ ರಾಜಕುಮಾರ ಬಿರಾದಾರ, ಕಲ್ಲಪ್ಪ ನವಣಿ, ವಿ.ಎಸ್. ಪಾಟೀಲ್, ಉದ್ಯಮಿ ಸುಭಾಷ್ ಯಾದವ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ