ನಿರ್ದೇಶಕರ ಸಂಘಕ್ಕೆ ವಿ. ನಾಗೇಂದ್ರ ಪ್ರಸಾದ್ ಪುನಾರಾಯ್ಕೆ
Team Udayavani, Aug 13, 2018, 12:40 PM IST
ಬೆಂಗಳೂರು: ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ವಿ.ನಾಗೇಂದ್ರ ಪ್ರಸಾದ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಭಾನುವಾರ ಕ್ರೆಸೆಂಟ್ ರಸ್ತೆಯ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ನಾಗೇಂದ್ರ ಪ್ರಸಾದ್ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಸಾಧುಕೋಕಿಲ, ರೂಪಾ ಅಯ್ಯರ್ ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯದರ್ಶಿಗಳಾಗಿ ಶರಣ್ ಕಬ್ಬೂರ್, ನಾಗೇಂದ್ರ ಆಯ್ಕೆಯಾದರೆ, ಟಿ.ಎನ್. ನಾಗೇಶ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕವಿರಾಜ್, ಮಳವಳ್ಳಿ ಸಾಯಿಕೃಷ್ಣ, ರವಿ ಶ್ರೀವತ್ಸ, ಮುಸ್ಸಂಜೆ ಮಹೇಶ್ ಮತ್ತು ಎಂ.ಡಿ.ಕೌಶಿಕ್ ಆಯ್ಕೆಯಾಗಿದ್ದಾರೆ.