ವಿಜಯ ಬ್ಯಾಂಕ್ಗೆ 207 ಕೋಟಿ ನಿವ್ವಳ ಲಾಭ
Team Udayavani, May 8, 2018, 12:32 PM IST
ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್ 2017-18ನೇ ಸಾಲಿನ ವಿತ್ತ ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ 207 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಕೇಂದ್ರ ಕಚೇರಿಯ ಮುಲ್ಕಿ ಸುಂದರರಾವ್ ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 4ನೇ ತ್ತೈಮಾಸಿಕದ ಹಣಕಾಸು ವರದಿಯ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್.ಎ. ಶಂಕರ ನಾರಾಯಣನ್ ಅವರು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದಲ್ಲಿ ಬ್ಯಾಂಕಿನ ವಹಿವಾಟು ಶೇ.20.07ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಶೇ.22.57 ರಷ್ಟು ಅಂದರೆ 1,18,677 ಕೋಟಿ ರೂ. ಸಾಲದ ರೂಪದಲ್ಲಿ ಹಾಗೂ ಶೇ.18.25ರಷ್ಟು (1,57,288 ಕೋಟಿ ರೂ.) ಠೇವಣಿ ರೂಪದಲ್ಲಿದೆ ಬಂದಿದೆ ಎಂದರು.
ಬ್ಯಾಂಕ್ ಅಂತಿಮ ತ್ತೈಮಾಸಿಕದಲ್ಲಿ 207 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಇದು ಮೂರನೇ ತ್ತೈಮಾಸಿಕಕ್ಕಿಂತ 127 ಕೋಟಿ ರೂ. ಹೆಚ್ಚಳ ಎನಿಸಿದೆ. ಆದರೆ, ಕಾರ್ಯಚರಣಾ ಲಾಭದಲ್ಲಿ 3098 ಕೋಟಿ ರೂ.ಗಳ ಗಳಿಸಿರುವುದು ದಾಖಲೆಯಾಗಿದೆ. ಆದರೆ, ನಿವ್ವಳ ಲಾಭ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಕೇವಲ ಮೂರು ಕೋಟಿಗಳು ಮಾತ್ರ ಏರಿಕೆಯಾಗಿದೆ. ಒಟ್ಟಾರೆ, 2017-18ನೇ ಸಾಲಿನಲ್ಲಿ ನಿವ್ವಳ ಲಾಭ 727 ಕೋಟಿ ರೂ.ಗಳಾಗಿದೆ.
ಲಾಭದಾಯಕವಲ್ಲದ ಸ್ವತ್ತು (ಎನ್ಪಿಎ) ಶೇ.6.59 ರಿಂದ ಶೇ.6.34 ಇಳಿಕೆಯಾಗಿರುವುದು ಬ್ಯಾಂಕಿನ ಅಭಿವೃದ್ಧಿಯ ಹಾದಿಯನ್ನು ಸೂಚಿಸುತ್ತದೆ. ಅಲ್ಲದೆ, ಈ ಅವಧಿಯಲ್ಲಿ ಗೃಹ ಸಾಲ ಶೇ.30.50 ರಷ್ಟು ಹಾಗೂ ಸಿಆರ್ಎಆರ್ (ಬೆಸೆಲ್-3) ಪ್ರತಿಶತ 13.90ಕ್ಕೆ ತಲುಪಿರುವುದು ಸಂತಸ ತಂದಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ವೈ. ನಾಗೇಶ್ವರ ರಾವ್ ಹಾಗೂ ಮುರಳಿ ರಾಮಸ್ವಾಮಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ