ಆಶಾದಾಯಕ ಹಾದಿಯಲ್ಲಿ ತ್ಯಾಜ್ಯ ವಿಂಗಡಣೆ


Team Udayavani, Aug 13, 2018, 12:40 PM IST

ashadayaka.jpg

ಸುಮಾರು 800 ಚದರ ಕಿ.ಮೀ. ಸರಹದ್ದು ಹೊಂದಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಬರೋಬ್ಬರಿ 4 ಸಾವಿರ ಟನ್‌ ಮಿಶ್ರ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆ ಪೈಕಿ ಶೇ.40 ಅಂದರೆ, 1600 ಟನ್‌ನಷ್ಟು ಒಣತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ರೀತಿಯ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗಾಗಿ 2012ರಲ್ಲೇ ಬಿಬಿಎಂಪಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ್ದರೂ ವಿಂಗಡಣೆ ಪ್ರಮಾಣ ಹೆಚ್ಚಾಗಿರಲಿಲ್ಲ. ನಿರಂತರ ಜಾಗೃತಿ ಪರಿಣಾಮ ಇತ್ತೀಚಿಗೆ ತ್ಯಾಜ್ಯ ವಿಂಗಡಣೆ ಪ್ರಮಾಣ ಶೇ.40ಕ್ಕೆ ತಲುಪಿದ್ದು, ಒಣತ್ಯಾಜ್ಯ ವಿಂಗಡಣೆ ಹಾಗೂ ನಿರ್ವಹಣೆ ಒಂದು ಉದ್ಯಮವಾಗಿ ಮಾರ್ಪಡುವ ಜತೆಗೆ ನೂರಾರು ಜನರಿಗೆ ಉದ್ಯೋಗ ಒದಗಿಸಿದೆ.

ಬೆಂಗಳೂರಿನಲ್ಲಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ ಆರು ವರ್ಷಗಳ ನಂತರ ವಿಂಗಡಣೆ ಪ್ರಮಾಣ ಶೇ.40ರಷ್ಟು ತಲುಪಿರುವುದು ಭರವಸೆ ಮೂಡಿಸಿದೆ.
ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ 2012ರಲ್ಲೇ ಬಿಬಿಎಂಪಿ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದರೂ ವಿಂಗಡಣೆ ಪ್ರಮಾಣ ಹೆಚ್ಚಾಗಿರಲಿಲ್ಲ. ನಿರಂತರ ಜಾಗೃತಿಯ ಪರಿಣಾಮ ಇತ್ತೀಚಿಗೆ ತ್ಯಾಜ್ಯ ವಿಂಗಡಣೆ ಪ್ರಮಾಣ ಶೇ.40ರಷ್ಟು ತಲುಪಿದ್ದು, ಒಣತ್ಯಾಜ್ಯ ವಿಂಗಡಣೆ ಹಾಗೂ ನಿರ್ವಹಣೆ ಉದ್ಯಮವಾಗಿ ಮಾರ್ಪಡುವ ಜತೆಗೆ ನೂರಾರು ಜನರಿಗೆ ಉದ್ಯೋಗ ಒದಗಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 4 ಸಾವಿರ ಟನ್‌ ಮಿಶ್ರ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಆ ಪೈಕಿ ಶೇ.40ರಷ್ಟು ಅಂದರೆ 1600 ಟನ್‌ನಷ್ಟು ಒಣತ್ಯಾಜ್ಯ ಸಂಗ್ರಹವಾಗುತ್ತಿದೆ. ಅದರಲ್ಲಿ ಶೇ.40ರಷ್ಟು ಪ್ಲಾಸ್ಟಿಕ್‌ ಉತ್ಪನ್ನಗಳು ಸಂಗ್ರಹವಾಗುತ್ತಿದ್ದು, ಘಟಕ ನಿರ್ವಹಿಸುವವರಿಗೆ ಲಾಭದಾಯಕವಾಗಿ ಪರಿಗಣಿಸಿದೆ. ಘಟಕಗಳಿಂದ ಪಾಲಿಕೆಯ ತ್ಯಾಜ್ಯ ವಿಲೇವಾರಿ ಸಮಸ್ಯೆಯ ಜತೆಗೆ, ಆರ್ಥಿಕ ಒತ್ತಡವೂ ಕಡಿಮೆಯಾಗಿದೆ. 

ಸುಮಾರು 800 ಚದರ ಕಿಲೋ ಮೀಟರ್‌ ವ್ಯಾಪ್ತಿಯನ್ನು ಹೊಂದಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 4 ಸಾವಿರ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ತ್ಯಾಜ್ಯ ವಿಲೇವಾರಿಗಾಗಿಯೇ ಪಾಲಿಕೆಯಿಂದ ವಾರ್ಷಿಕ ಒಂದು ಕೋಟಿಗೂ ಹೆಚ್ಚಿನ ಮೊತ್ತವನ್ನು ವ್ಯಯಿಸಲಾಗುತ್ತಿದೆ. ನಿತ್ಯ ತ್ಯಾಜ್ಯ ವಿಲೇವಾರಿಯಲ್ಲಿ 400 ಕಾಂಪ್ಯಾಕ್ಟರ್‌ ಹಾಗೂ 3500 ಆಟೋ ಟಿಪ್ಪರ್‌ಗಳು ತೊಡಗಿಕೊಳ್ಳುತ್ತಿದ್ದು, ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಕಟ್ಟಡಗಳನ್ನು ಪಾಲಿಕೆಯಿಂದ ಪಡೆಯಲಾಗುತ್ತಿದೆ. 

ತ್ಯಾಜ್ಯ ವಿಲೇವಾರಿ ವಿಧಾನ: ಪಾಲಿಕೆಯ ವತಿಯಿಂದ ನಿತ್ಯ ಮನೆ-ಮನೆಗೆ ತೆರಳಿ ಪೌರಕಾರ್ಮಿಕರು ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಒಣತ್ಯಾಜ್ಯ ಸಂಗ್ರಹ ಘಟಕಗಳಲ್ಲಿ ಹಸಿತ್ಯಾಜ್ಯ ಹಾಗೂ ಒಣ ತ್ಯಾಜ್ಯವಾಗಿ ವಿಂಗಡಿಸುತ್ತಾರೆ. ಇದರೊಂದಿಗೆ ಕೇಂದ್ರ ಭಾಗದಲ್ಲಿ ಇಡಲಾಗಿರುವ ಕಸದ ಡಬ್ಬಿಗಳು, ಸಗಟು ತ್ಯಾಜ್ಯ ಉತ್ಪಾದಕರು ಹಾಗೂ ಬ್ಲಾಕ್‌ಸ್ಪಾಟ್‌ಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನೂ ವಿಂಗಡಣೆ ಮಾಡಲಾಗುತ್ತದೆ. 

ಮುಂಬೈ ನಗರದಂತಾಗಲಿಲ್ಲ: ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಮಹಾನಗರಗಳಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಸೂಕ್ತ ನಿರ್ವಹಣೆ ಹಾಗೂ ತಂತ್ರಜ್ಞಾನ ಬಳಕೆ ಇದಕ್ಕೆ ಸೂಕ್ತ ಮಾರ್ಗವಾಗಿದೆ. ಅದನ್ನು ಈಗಾಗಲೇ ಅಳವಡಿಸಿಕೊಂಡ ಮುಂಬೈ ನಗರವು ಪ್ಲಾಸ್ಟಿಕ್‌ ಮುಕ್ತ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೇ.50ರಷ್ಟು ತ್ಯಾಜ್ಯ ವಿಂಗಡಣೆ ಮಾಡಿದ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾದರೂ, ನಗರವು ಈವರೆಗೆ ಪ್ಲಾಸ್ಟಿಕ್‌ ಮುಕ್ತ ನಗರವಾಗಲು ಸಾಧ್ಯವಾಗಲಿಲ್ಲ. 

ವಿದೇಶಿ ಆಮದಿನಿಂದ ತೊಂದರೆಯೇನು?: ಈ ಮಧ್ಯೆ, ಬೆಂಗಳೂರಿನಲ್ಲಿರುವ ವಿವಿಧ ಕಂಪನಿಗಳಿಗೆ ಅಮೆರಿಕದಿಂದ ಅತ್ಯಂತ ಅಗ್ಗದ ಬೆಲೆಗೆ ಪುನರ್‌ಬಳಕೆ ತ್ಯಾಜ್ಯ ಪೂರೈಕೆಯಾಗುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿನ ತ್ಯಾಜ್ಯದ ಬೆಲೆ ಅರ್ಧಕ್ಕೆ ಅರ್ಧ ಕುಸಿದಿದೆ. ಶೀಘ್ರ ಪಾಲಿಕೆಯಿಂದ ತ್ಯಾಜ್ಯ ಬೆಲೆ ಕುಸಿತಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಗರದಲ್ಲಿ ತ್ಯಾಜ್ಯ ವಿಂಗಡಣೆಯಲ್ಲಿ ತೊಡಗಿರುವವರು ಆ ಕೆಲಸದಿಂದ ವಿಮುಖವಾಗುವ ಆತಂಕ ಎದುರಾಗಲಿದೆ.

ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿರುವ ಒಣತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ನಿತ್ಯ ಕನಿಷ್ಠ 1.5 ಟನ್‌ನಿಂದ 2.5 ಟನ್‌ವರೆಗೆ ಪ್ಲಾಸ್ಟಿಕ್‌, ಕಾಗದ, ಪೆಟ್‌ ಬಾಟೆಲ್‌ ಸೇರಿದಂತೆ ಹತ್ತಾರು ಬಗೆಯ ಒಣತ್ಯಾಜ್ಯ ಸಂಗ್ರಹವಾಗುತ್ತದೆ. ಅದರಂತೆ ಒಂದೊಂದು ಬಗೆಯ ತ್ಯಾಜ್ಯವನ್ನು ಒಂದು ಬೆಲೆಗೆ ಪ್ಲಾಸ್ಟಿಕ್‌ ಮರು ಬಳಕೆ ಕಂಪನಿಗಳಿಗೆ ನೀಡಲಾಗುತ್ತಿತ್ತು. ಆದರೆ, ಅಮೆರಿಕ ತ್ಯಾಜ್ಯ ಅಮದಾಗುತ್ತಿರುವುದರಿಂದ ಬೆಲೆ ಸಂಪೂರ್ಣವಾಗಿ ಕುಸಿದಿದೆ. ಉದಾಹರಣೆಗೆ ಈ ಮೊದಲು ರಟ್‌ ಕಾಗದಕ್ಕೆ ಪ್ರತಿ ಕೆ.ಜಿ.ಗೆ 9-10 ರೂ. ದೊರೆಯುತ್ತಿತ್ತು. ಆದರೆ, ಅಮೆರಿಕ ತ್ಯಾಜ್ಯ ಸ್ಥಳೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿನಿಂದ ಕೆ.ಜಿ. ರಟ್‌ ಕಾಗದ ಬೆಲೆ 3 ರಿಂದ 4 ರೂ. ಆಗಿರುವುದು ಒಣತ್ಯಾಜ್ಯ ಘಟಕಗಳ ಆತಂಕಕ್ಕೆ ಕಾರಣವಾಗಿದೆ. 

ಚಿಂದಿ ಆಯುವವರ ಬದುಕು: ಬೆಳ್ಳಂಬೆಳಗ್ಗೆ ಎದ್ದು ಚಳಿ ಮಳೆಯನ್ನದೆ ಹಾದಿ ಬೀದಿ, ಉದ್ಯಾನ, ಕೆರೆಗಳು, ಬಸ್‌-ರೈಲು ನಿಲ್ದಾಣ ಸೇರಿದಂತೆ ನಗರದ ತುಂಬೆಲ್ಲಾ ಅಲೆದಾಡುವ ಚಿಂದಿ ಆಯುವವರು, ಪ್ಲಾಸ್ಟಿಕ್‌ ಒಳಗೊಂಡಂತೆ ಒಣ ತ್ಯಾಜ್ಯ ಸಂಗ್ರಹಿಸುತ್ತಾರೆ. ಮಧ್ಯಾಹ್ನ ಹೊತ್ತಿಗೆ ಅವುಗಳನ್ನು ವಿವಿಧ ಗುಂಪುಗಳಾಗಿ ವಿಂಗಡಣೆ ಮಾಡಿ ತ್ಯಾಜ್ಯಸಂಗ್ರಹಣಾ ಘಟಕಗಳಿಗೋ ಅಥವಾ ಪ್ಯಾಕ್ಟರಿಗಳಿಗೂ ಹಾಕಿ ಸಂಜೆ ಅಷ್ಟರೊಳಗೆ 200-300 ರೂ ಹಣ ಗಳಿಸುತ್ತಾರೆ.

ಚಿಂದಿ ಆಯುವವರಿಗೆ ಪ್ರಾತಿನಿಧ್ಯ ದೊರೆಯಬೇಕಿದೆ: ಕೇಂದ್ರ ಸರ್ಕಾರವು 2016ರಲ್ಲಿ ನಗರ ಪ್ರದೇಶದ ಘನತ್ಯಾಜ್ಯ ನಿರ್ವಹಣೆಗೆ ಕೆಲ ನಿಯಮಾವಳಿಗಳನ್ನು ರೂಪಿಸಿದ್ದು, ಚಿಂದಿ ಆಯುವವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸೂಚಿಸಿದೆ. ಅದರಂತೆ ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ರೂಪಿಸಲಾದ ಘನತ್ಯಾಜ್ಯ ಸಂಗ್ರಹಣಾ ನಿಯಮಾವಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಮುಖ್ಯವಾಗಿ ಪಾಲಿಕೆಯಲ್ಲಿ ಇಂತಹ ನಿಯಮಾವಳಿ ಜಾರಿಗೊಳಿಸಿದರೆ, ಪಾಲಿಕೆಯಲ್ಲಿರುವ ಸಾವಿರಾರು ಚಿಂದಿ ಆಯುವವರಿಗೂ ಅನುಕೂಲವಾಗುತ್ತದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ. 

ಒಣತ್ಯಾಜ್ಯ ವಿಂಗಡಣೆಗೆ ಮತ್ತೂಂದು ಹೆಸರು ಹಸಿರು ದಳ 
ಹಸಿರು ದಳ ಸಂಸ್ಥೆಯು ನಗರದ ತ್ಯಾಜ್ಯ ವಿಂಗಡಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪಾಲಿಕೆಯೊಂದಿಗೆ ತ್ಯಾಜ್ಯ ಸಮಸ್ಯೆ ನಿವಾರಣೆಗೆ ದುಡಿಯುತ್ತಿದೆ. ಕಳೆದ 7 ವರ್ಷಗಳಿಂದ ತ್ಯಾಜ್ಯ ವಿಂಗಡಣೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಯು ಪಾಲಿಕೆಯ 44 ವಾರ್ಡ್‌ಗಳಲ್ಲಿನ ಒಣತ್ಯಾಜ್ಯ ಸಂಗ್ರಹ ಘಟಕಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಜತೆಗೆ ಹಾದಿ ಬೀದಿ ಅಲೆದಾಡಿ ಕಸ ಸಂಗ್ರಹಿಸುವರಿಗೆ ಸಾಮಾಜಿಕ ಭದ್ರತೆಯನ್ನು ಕೊಡಿಸಿದ್ದು, ಅನಕ್ಷರಸ್ಥರಾದ ಚಿಂದಿ ಆಯುವವರಿಗೆ ಹಾಗೂ ಅವರ ಕುಟುಂಬಗಳಿಗೆ ಆರೋಗ್ಯ ತಪಾಸಣೆ, ಮಕ್ಕಳಿಗೆ ಶಿಕ್ಷಣ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. 

ವಿಲೇವಾರಿ ಆಗುವ ತ್ಯಾಜ್ಯ ವಿಧಗಳು
-ಹಸಿ ತ್ಯಾಜ್ಯ
-ಒಣ ತ್ಯಾಜ್ಯ
-ಸ್ಯಾನಿಟೆರಿ ವೇಸ್ಟ್‌
-ಕಟ್ಟಡ ತ್ಯಾಜ್ಯ

ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳು
ಕನ್ನಹಳ್ಳಿ, ಸೀಗೇಹಳ್ಳಿ, ದೊಡ್ಡಬಿದರಕಲ್ಲು, ಸುಬ್ಬರಾಯನಪಾಳ್ಯ, ಚಿಕ್ಕನಾಗಮಂಗಲ, ಕೂಡ್ಲು, ಲಿಂಗಧೀರನಹಳ್ಳಿ.

ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕಗಳು
ಮಲ್ಲಸಂದ್ರ, ಕಾಡು ಅಗ್ರಹಾರ, ಶ್ರೀನಿವಾಸಪುರ, ಗೊಲ್ಲಹಳ್ಳಿ, ಕಣ್ಣೂರು, ಗುಡ್ಡದ ಹಳ್ಳಿ, ಮಿಟ್ಟಗಾನಹಳ್ಳಿ 

ತ್ಯಾಜ್ಯ ನಿರ್ವಹಣೆಯಲ್ಲಿ ಅಸಂಘಟಿತ ವಲಯದ ಕೊಡುಗೆ ಹೆಚ್ಚಿದೆ. ಅದರಲ್ಲೂ ಚಿಂದಿ ಆಯುವವರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದರೆ, ಪೌರಾಡಳಿತ ಇಲಾಖೆಯು ಜಾರಿಗೆ ತರಲು ಹೊರಟಿರುವ ಹೊಸ ನಿಯಮಾವಳಿಯಲ್ಲಿ ಅಸಂಘಟಿತ ವಲಯವನ್ನು ಕಡೆಗಣಿಸಿರುವುದು ಸರಿಯಲ್ಲ.
-ನಳಿನಿ ಶೇಖರ್‌, ಹಸಿರುದಳ ಎನ್‌ಜಿಒ ಮುಖ್ಯಸ್ಥೆ

ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಒಣತ್ಯಾಜ್ಯ ಸಂಗ್ರಹ ಘಟಕಗಳ ತ್ಯಾಜ್ಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿರುವ ಕುರಿತಂತೆ ಸೋಮವಾರ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಸಭೆ ಕರೆದಿದ್ದು, ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ಆರ್‌.ಸಂಪತ್‌ರಾಜ್‌, ಮೇಯರ್‌ 

ಅಮೆರಿಕದಿಂದ ತ್ಯಾಜ್ಯ ಆಮದು ಮಾಡಿಕೊಳ್ಳಲು ವಿವಿಧ ಕಂಪನಿಗಳು ಮುಂದಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಒಣ ತ್ಯಾಜ್ಯದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದರಿಂದಾಗುವ ನಷ್ಟ ತಡೆಯಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು.
-ಮನ್ಸೂರ್‌ ಗೌಸ್‌, ಒಣತ್ಯಾಜ್ಯ ಸಂಗ್ರಹ ಘಟಕದ ನಿರ್ವಾಹಕ

* ವೆಂ.ಸುನೀಲ್‌ಕುಮಾರ್‌/ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.