ವರ್ಷಾಂತ್ಯದೊಳಗೆ ಮಣ್ಣು ಆರೋಗ್ಯ ಚೀಟಿ ವಿತರಣೆ: ಕೃಷ್ಣ ಬೈರೇಗೌಡ
Team Udayavani, Mar 24, 2017, 3:45 AM IST
ವಿಧಾನ ಪರಿಷತ್ತು: ರಾಜ್ಯಾದ್ಯಂತ 16ಲಕ್ಷಕ್ಕೂ ಹೆಚ್ಚು ಮಣ್ಣಿನ ಮಾದರಿ ಸಂಗ್ರಹಿಸಲಾಗಿದ್ದು, ವರ್ಷಾಂತ್ಯದೊಳಗೆ ಮಣ್ಣು ಆರೋಗ್ಯ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ನ ಬಸವರಾಜ ಪಾಟೀಲ್ ಇಟಗಿ ಮಣ್ಣು ಆರೋಗ್ಯ ಪರೀಕ್ಷೆ ಬಗ್ಗೆ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಸಚಿವರು, “10 ಲಕ್ಷ ಹೆಕ್ಟೇರ್ನಲ್ಲಿ ತಲಾ 5 ಮಣ್ಣಿನ ಮಾದರಿ ತೆಗೆದುಕೊಳ್ಳಲಾಗುತ್ತದೆ. ಅದನ್ನು ಪರೀಕ್ಷಿಸಿ ವಿವರವನ್ನು ಮಣ್ಣು ಆರೋಗ್ಯ ಚೀಟಿಯಲ್ಲಿ ದಾಖಲಿಸಲಾಗುತ್ತದೆ. ಜತೆಗೆ ಆರು ಬೆಳೆಯ ವಿವರ ಪಡೆಯಲಾಗುತ್ತದೆ. ಜತೆಗೆ ಮಣ್ಣಿನ ಪ್ರಕಾರಕ್ಕೆ ಅನುಗುಣವಾಗಿ ಬಳಸಬೇಕಾದ ಗೊಬ್ಬರದ ವಿವರವೂ ಇರಲಿದೆ. ವರ್ಷಾಂತ್ಯದೊಳಗೆ ಮಣ್ಣು ಆರೋಗ್ಯ ಚೀಟಿ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.