ಯುವತಿಯರಿಗೆ ಕಥೆ ಇಷ್ಟ
Team Udayavani, Mar 18, 2019, 6:35 AM IST
ಬೆಂಗಳೂರು: “ನಾನು ಕಾಲೇಜು ದಿನಗಳಲ್ಲಿ ಕವಿತೆ ರಚಿಸುತ್ತಿದ್ದೆ.ಆದರೆ ಹುಡುಗಿಯರು ಕವಿತೆಗಳಿಗಿಂತ ಕತೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುವುದನ್ನು ಅರಿತುಕೊಂಡೆ. ಆ ನಂತರದ ದಿನಗಳಲ್ಲಿ ಕತೆ ಬರೆಯುವ ಗೀಳು ಹಚ್ಚಿಕೊಂಡೆ’ ಎಂದು ಹೇಳಿ ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿ ಹೇಳಿದರು.
ವಾಡಿಯಾ ಸಭಾಂಗಣದಲ್ಲಿ ಭಾನುವಾರ ಲೋಕಾರ್ಪಣೆಗೊಂಡ ತಮ್ಮ “ನೋ ಪ್ರಸೆಂಟ್ಸ್ ಪ್ಲೀಸ್’ ಕೃತಿ ಬಿಡುಗಡೆ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮೊಳಗಿನ ಕತೆಗಾರ ಮತ್ತು ಕವಿತೆಗಳ ಹುಟ್ಟು ಸೇರಿದಂತೆ ಹಲವು ಅನುಪಮ ವಿಷಯಗಳ ಬಗ್ಗೆ ಸಭಿಕರೊಂದಿಗೆ ಮನಬಿಚ್ಚಿ ಮಾತನಾಡಿದರು.
ಆಗ ಪತ್ರಿಕೆಗಳಲ್ಲಿ ಕತೆ ಪ್ರಕಟವಾದರೆ ಆ ಲೇಖಕರ ಫೋಟೊ ಕೂಡ ಬರುತ್ತಿತ್ತು. ಹೀಗಾಗಿ ನನ್ನ ಫೋಟೊ ಕೂಡ ಪತ್ರಿಕೆಯಲ್ಲಿ ಬರಲಿ ಎಂಬ ಕಾರಣದಿಂದಾಗಿ ಮತ್ತಷ್ಟು ಕತೆಗಳನ್ನು ಬರೆಯ ತೊಡಗಿದೆ. ಇದು ಹೊಸ ಕತೆಗಳ ಹುಟ್ಟಿಗೆ ಕಾರಣವಾಯಿತು. ನಂತರ ಬರವಣಿಗೆಯಲ್ಲೆ ರುಚಿ ಕಂಡುಕೊಂಡೆ ಎಂದರು.
ಮೂಲತಃ ನಾನು ವಿಜ್ಞಾನದ ವಿದ್ಯಾರ್ಥಿ ಆದರೆ ಸಾಹಿತ್ಯದ ಬಗ್ಗೆ ಅಪಾರ ಒಲವು. ಅಪ್ಪ (ಗೌರೀಶ ಕಾಯ್ಕಿಣಿ)ಸಾಹಿತ್ಯದ ಬರವಣೆಗೆಯಲ್ಲಿ ತೊಡಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಭಾವಿಸಿದರು. ಜತೆಗೆ ಶಿವರಾಮ ಕಾರಂತ, ಪಿ.ಲಂಕೇಶ್, ಕುವೆಂಪು ಸೇರಿದಂತೆ ಹಲವು ಹಿರಿಯ ಕಾದಂಬರಿಕಾರರ ಕೃತಿಗಳನ್ನು ಓದಿದ್ದೇ.
ಹಿರಿಯ ಸಾಹಿತಿಗಳೊಂದಿಗಿನ ಒಡನಾಟ ಕೂಡ ಪಕ್ವತೆಯನ್ನು ತಂದುಕೊಟ್ಟಿತು ಎಂದು ನುಡಿದರು. ಮುಂಬೈನಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ. ಬೇರೆ-ಬೇರೆ ಅನುಭವಗಳನ್ನು ಕಂಡಿದ್ದೇನೆ. ಅಲ್ಲಿ ನಾನು ಕಂಡ ಸನ್ನಿವೇಶಗಳೇ ಈಗ “ನೋ ಪ್ರಸೆಂಟ್ಸ್ ಪ್ಲೀಸ್’ ಕೃತಿಯಲ್ಲಿ ಕತೆಗಳಾಗಿ ರೂಪಡೆದಿವೆ ಎಂದು ಹೇಳಿದರು.
ಉದಯವಾಣಿ ಕಥಾ ಸ್ಪರ್ಧೆ: ಯಾವುದೇ ಕಥಾ ಸ್ಪರ್ಧೆಯಾಗಿರಲಿ ಅವುಗಳಿಗೆ ನನ್ನ ಕತೆಗಳನ್ನು ಕಳುಹಿಸುತ್ತಿದೆ.ಉದಯವಾಣಿ ಪತ್ರಿಕೆ ಏರ್ಪಡಿಸುತ್ತಿದ್ದ ಕಥಾ ಸ್ಪರ್ಧೆ ಸೇರಿದಂತೆ ಹಲವು ಪತ್ರಿಕೆಗಳಿಗೆ ಕತೆ ಕಳುಹಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದೇನೆ ಎಂದರು.
ಹಿರಿಯ ಸಂಶೋಧಕ ಷ.ಶೆಟ್ಟರ್ ಮಾತನಾಡಿ “ನೋ ಪ್ರಸೆಂಟ್ಸ್ ಪ್ಲೀಸ್’ಕೃತಿಗೆ ಅತ್ಯುತ್ತಮ ದಕ್ಷಿಣ ಏಷ್ಯಾ ಸಾಹಿತ್ಯಕ್ಕೆ ನೀಡುವ
ಡಿಎಸ್ಸಿ ಅಂತಾರಾಷ್ಟ್ರೀಯ ಪ್ರಶಸ್ತಿ (17 ಲಕ್ಷ ರೂ.ನಗದು ಮತ್ತು ಪುರಸ್ಕಾರ) ದೊರೆತಿರುವುದು ಹೆಮ್ಮೆಯ ಸಂಗತಿ.
ಮುಂಬೈನಲ್ಲಿದ್ದ ದಿನಗಳಲ್ಲಿ ಕಂಡುಬಂದ ಸನ್ನಿವೇಶಗಳನ್ನೆ ಕತೆಯಾಗಿ ರೂಪಿಸಿ ಓದುಗರಿಗೆ ನೀಡಿದ್ದಾರೆ. ಎಲ್ಲಾ ಕತೆಗಳು ಸೊಗಸಾಗಿ ಮೂಡಿ ಬಂದಿವೆ. ಈಗಾಗಲೇ ಈ ಕೃತಿ ಇಂಗ್ಲಿಷ್ನಲ್ಲಿ ಬಂದಿರುವುದು ಖುಷಿ ಪಡುವ ವಿಚಾರ. ಕವಿ ಸುಬ್ಬು ಹೊಲೆಯಾರ್, ಲೇಖಕ ವಿಕ್ರಮ ಹತ್ವಾರ್, ಸಿಂಧೂರಾವ್ ಸಂವಾದ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ