ಸಿದ್ದರಬೆಟ್ಟ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ
Team Udayavani, Feb 2, 2021, 6:25 PM IST
ನೆಲಮಂಗಲ: ನಿಜಗಲ್ಲು ಸಿದ್ದರಬೆಟ್ಟಕ್ಕೆ 1 ಕೋಟಿರೂ. ವೆಚ್ಚದಲ್ಲಿ ಮೂಲ ಸೌಕರ್ಯ ಒದಗಿಸಲು ವಿಶೇಷ ಪ್ರಕರಣ ಎಂದು ಪರಿಗಣಿಸಿ ಈ ಹಿಂದೆ ಅರಣ್ಯ ಸಚಿವರಾಗಿದ್ದ ಆನಂದ್ಸಿಂಗ್ ಅವರು ಅನುದಾನ ಬಿಡುಗಡೆ ಮಾಡಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದ್ದಾರೆ.
ತಾಲೂಕಿನ ಸೋಂಪುರ ಹೋಬಳಿಯ ಸಿದ್ದರಬೆಟ್ಟ ದಲ್ಲಿ ಸಿದ್ದಪುರುಷರು, ರಾಜಮಹಾರಾಜರು ನೆಲೆಸಿದ್ದಕ್ಕೆ ಅನೇಕ ಕುರುಹುಗಳಿದ್ದು, ಐತಿಹಾಸಿಕ ಸ್ಥಳವಾಗಿ ರೂಪುಗೊಂಡಿದೆ. ಇಲ್ಲಿನ ಸಿದ್ದಪ್ಪಾಜಿ, ಆಂಜನೇಯ, ನರಸಿಂಹ, ಗಣೇಶ ಸೇರಿದಂತೆ ಹತ್ತಾರು ದೇವಾಲ ಯಗಳಿದ್ದು , ಸಾವಿರಾರು ಭಕ್ತರು ಆಗಮಿಸುವುದರಿಂದ ಸದರಿ ಪ್ರವಾಸಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ವಿಜಯಕುಮಾರ್ ಅವರ ಮನವಿಗೆ ಹಾಗೂ ಸಂಸದ ತೇಜಸ್ವಿ ಸೂರ್ಯರ ಒತ್ತಾಯದಿಂದ ಈ ಹಿಂದೆ ಸಚಿವರಾಗಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯಕ್ಕೆ ಅನುದಾನ ಬಿಡುಗಡೆ ಮಾಡಲು ಸೂಚಿಸಿದ್ದಾರೆ.
ಇದನ್ನೂ ಓದಿ:ಮೆಟ್ರೋಲೈಟ್- ಮೆಟ್ರೋನಿಯೋ ಸೇವೆ