12 ಎಕರೆ ಜಮೀನು ಸ್ವಾಧೀನ
Team Udayavani, Jul 29, 2020, 10:28 AM IST
ಹೊಸಕೋಟೆ: ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಒಳಪಟ್ಟು ಒತ್ತುವರಿಯಾಗಿದ್ದ ಸುಮಾರು 12 ಎಕರೆ ಜಮೀನನ್ನು ಅಧಿಕಾರಿಗಳು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.
ಅರಣ್ಯ ಪ್ರದೇಶ ಒಟ್ಟು 237 ಎಕರೆ 12 ಗುಂಟೆಯಷ್ಟು ವಿಸ್ತೀರ್ಣ ಹೊಂದಿದ್ದು ಸುತ್ತಮುತ್ತಲಿನ ಕೆಲವು ಪ್ರಭಾವಶಾಲಿ ವ್ಯಕ್ತಿಗಳು, ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಮೇಲಧಿಕಾರಿಗಳಿಗೆ ನೀಡಿದ್ದ ದೂರಿನ ಅನ್ವಯ ಪರಿಶೀಲನೆ ನಡೆಸಿ ಕಂದಾಯ ಇಲಾಖೆಯಿಂದ ಜಮೀನಿನ ನಕಾಶೆ ಸಿದ್ಧಪಡಿಸಿ ಅದರಂತೆ ಅರಣ್ಯ ಇಲಾಖೆಗೆ ಸೇರಿದ ಸ್ವತ್ತಿನ ಸುತ್ತಲೂ ಮತ್ತೆ ಅತಿಕ್ರಮಣ ಮಾಡುವುದನ್ನು ತಡೆಗೆ ಕಂದಕಗಳನ್ನು ನಿರ್ಮಿಸಿ ಸಸಿ ನೆಡಲಾಗಿದೆ. ಶೀಘ್ರದಲ್ಲಿಯೇ ಸುತ್ತಲೂ ತಂತಿ ಬೇಲಿ ಅಳವಡಿಸಿ ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂತೋಣಿ ಮರಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಟಾರಾವ್ ಮಾರ್ಗದರ್ಶನದಲ್ಲಿ ತಾಲೂಕು ವಲಯ ಅರಣ್ಯಾಧಿಕಾರಿ ವರುಣ್ಕುಮಾರ್ ಸಿಬ್ಬಂದಿ ವರ್ಗದವರೊಂದಿಗೆ ತೆರವು ಕಾರ್ಯಾಚರಣೆ ಕೈಗೊಂಡಿದ್ದರು.