ಜಾರ್ಖಂಡ್ಗೆ 58 ವಲಸೆ ಕಾರ್ಮಿಕರು
Team Udayavani, May 4, 2020, 4:46 PM IST
ದೇವನಹಳ್ಳಿ: ತಾಲೂಕಿನಲ್ಲಿ ವಿವಿಧ ಕಡೆ ಕಾರ್ಯ ನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ 58 ಜನ ವಲಸೆ ಕಾರ್ಮಿಕ ರನ್ನು ನಗರದ ಹೊಸ ಬಸ್ ನಿಲ್ದಾಣ ದಿಂದ ಪೊಲೀಸರು ಬಸ್ಗಳ ಮೂಲಕ ಕಳುಹಿಸಿಕೊಟ್ಟರು.
ನಗರದ ಬ್ರಿಗೇಡ್, ಹಿರನಂದನಿ, ಗ್ರೀನ್ ಪಾರ್ಕ್ ಹತ್ತಿರ, ನಂದಿ ಉಪ ಚಾರ್ ಹತ್ತಿರ, ಆಕಾಶ್ ಆಸ್ಪತ್ರೆ ಹತ್ತಿರ, ನಂದ ಗೋಕುಲ, ಐವಿಸಿ ರಸ್ತೆ ಸಮೀಪ ಗಳಲ್ಲಿ ಅಪಾರ್ಟ್ಮೆಂಟ್ ಮತ್ತು ಇನ್ನಿತರೆ ಕೆಲಸಗಳನ್ನು ಜಾರ್ಖಂಡ್ ಮೂಲದ 58 ಜನ ವಲಸೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು.
ಸರ್ಕಾರದ ಆದೇಶದಂತೆ ಸ್ವ ಸ್ಥಳಗಳಿಗೆ ತೆರಳಲು ಸರ್ಕಾರ ಆದೇಶಿಸಿರು ವುರಿಂದ ಪೊಲೀಸರು ಸಂಪೂರ್ಣ ಮಾಹಿತಿ ಪಡೆದು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ನಂತರ, ಮಾಲೂರು ರೈಲ್ವೆ ಸ್ಟೇಷನ್ವರೆಗೆ ಬಸ್ ಟಿಕೆಟ್ ಕೊಟ್ಟು ಕಳುಹಿಸಲಾಗಿದೆ.
ಮಾಲೂರಿನಿಂದ ನಂತರ ರೈಲ್ವೆ ಮೂಲಕ ಜಾರ್ಖಂಡ್ಗೆ ಕಳುಹಿಸಲಾಗುತ್ತಿದೆ ಎಂದು ದೇವನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಜು ತಿಳಿಸಿದರು. ಕೂಲಿಗಾಗಿ ಬಂದವರನ್ನು ಸ್ವ ರಾಜ್ಯಗಳಿಗೆ ಕಳುಹಿಸಿಕೊಟ್ಟರು. ಒಂದು ಬಸ್ ನಲ್ಲಿ 26 ಕಾರ್ಮಿಕರನ್ನು ಸಾಮಾಜಿಕ ಅಂತರದ ಮೂಲಕ ಕಳುಹಿಸಲಾಯಿತು.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!