ಕಾರ್ಮಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಿ
Team Udayavani, May 16, 2021, 7:20 PM IST
ದೊಡ್ಡಬಳ್ಳಾಪುರ: ಕಟ್ಟಡ ಕಾರ್ಮಿಕರುಸ್ಥಳದಲ್ಲಿಯೇ ಇರಬೇಕೆಂಬನಿರ್ಬಂಧದಿಂದ ಪೊಲೀಸರು ಇತರೆಕಾರ್ಮಿಕರನ್ನು ಮಾರ್ಗ ಮಧ್ಯದಲ್ಲಿಯೇತಡೆಯುತ್ತಿರುವುದಿಂದ ಗ್ರಾಮೀಣಪ್ರದೇಶಗಳಲ್ಲಿ ವಿವಿಧ ಕಾಮಗಾರಿಗಳನ್ನುನಡೆಸಲು ಕಷ್ಟವಾಗುತ್ತಿದೆ.
ಸರ್ಕಾರಕಟ್ಟಡ ಕಾರ್ಮಿಕರಿಗೆ ಕೆಲಸ ಮಾಡಲುಅವಕಾಶ ಮಾಡಿಕೊಡುವುದರೊಂದಿಗೆ,ಲಾಕ್ಡೌನ್ ಹಿನ್ನೆಲೆ ಯಲ್ಲಿ ವಿಳಂಬವಾದಕಾಮಗಾರಿಗಳ ಅವಧಿ ವಿಸ್ತರಿಸಬೇಕುಎಂದು ದೊಡ್ಡಬಳ್ಳಾಪುರ ತಾಲೂಕುಸಿವಿಲ್ ಗುತ್ತಿಗೆದಾರರ ಸಂಘಒತ್ತಾಯಿಸಿದೆ.ಈ ಕುರಿತು ಸುದ್ದಿಗಾರರ ಜತೆಮಾತನಾಡಿದ ತಾಲೂಕು ಸಿವಿಲ್ಗುತ್ತಿಗೆದಾರರ ಸಂಘದ ಅಧ್ಯಕ್ಷಜಿ.ಲಕ್ಷ್ಮೀಪತಿ, ಲಾಕ್ಡೌನ್ನಲ್ಲಿಯೂರಾಜ್ಯ ಸರ್ಕಾರ ಕಟ್ಟಡ ನಿರ್ಮಾಣಕಾಮಗಾರಿಗ ಳಿಗೆ ಅವಕಾಶಮಾಡಿಕೊಟ್ಟಿರುವುದು ಸ್ವಾಗ ತಾರ್ಹ.ನಗರ ಪ್ರದೇಶಗಳಲ್ಲಿ ನಿರ್ಮಾಣವಾಗುವ ಅಪಾರ್ಟ್ಮೆಂಟ್ ಮೊದಲಾದ ಬೃಹತ್ ಕಟ್ಟಡ ಕಾಮಗಾರಿಗಳಲ್ಲಿಕಾರ್ಮಿಕರು ಸ್ಥಳೀಯವಾಗಿ ನೆಲೆಸಿರುತ್ತಾರೆ.
ಆದರೆ ಗ್ರಾಮೀಣಪ್ರದೇಶಗಳಲ್ಲಿ ಒಂದೇ ಸ್ಥಳ ದಲ್ಲಿಕಾರ್ಮಿಕರು ಸಿಗುವುದಿಲ್ಲ. ಗ್ರಾಮಗಳಲ್ಲಿವಿವಿಧ ಸರ್ಕಾರಿ ಕಟ್ಟಡಗಳು, ಚರಂಡಿ,ಕಾಂಕ್ರೀಟ್ ರಸ್ತೆ, ಕೆರೆಗಳ ಹೂಳೆತ್ತುವಮೊದಲಾದ ಕಾಮಗಾರಿಗಳಿಗೆಕಾರ್ಮಿಕರನ್ನು ಇತರೆ ಕಡೆಯಿಂದಕರೆತರುವ ಅನಿವಾರ್ಯತೆ ಇದೆ. ಆದರೆಇವರಿಗೆ ಪೊಲೀಸರು ತಡೆಯೊಡ್ಡುವುದು ನಿಲ್ಲಬೇಕು. ಗುತ್ತಿಗೆದಾರರದಿಂದ ನೀಡಿರುವ ಗುರುತಿನ ಚೀಟಿಯನ್ನುಮಾನ್ಯ ಮಾಡಿ ಓಡಾಟಕ್ಕೆ ಅವಕಾಶಮಾಡಿ ಕೊಡಬೇಕು. ಟೆಂಡರ್ ನಿಗದಿಗೆಕೊವಿಡ್ ಕಾರಣದಿಂದ ವಿನಾಯಿತಿನೀಡಿ ಟೆಂಡರ್ ಅವಧಿಯನ್ನು ವಿತರಣೆಮಾಡಬೇಕು. ಗುತ್ತಿಗೆ ಅವಧಿ ಮೀರಿದರೆದಂಡ ವಿಧಿಸಬಾರದು ಎಂದುಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿಲಕ್ಷ್ಮೀಕಾಂತ್, ಖಜಾಂಚಿ ಎ.ಚಂದ್ರಣ್ಣ,ನಿರ್ದೇಶಕ ಕೆ.ಆವಲಮೂರ್ತಿಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ