ತಾಯಿಯಿಂದ ಬೇರ್ಪಟ್ಟಿದ್ದ ಆನೆಮರಿ ಬನ್ನೇರುಘಟ್ಟ ಪಾರ್ಕ್ಗೆ
Team Udayavani, Aug 6, 2022, 1:03 PM IST
ಆನೇಕಲ್: ಕಾವೇರಿ ವನ್ಯಜೀವಿ ಅಭಯಾರಣ್ಯದ ಹಲಗೂರು ವ್ಯಾಪ್ತಿಯ ಮುತ್ತತ್ತಿ ಕಾಡುದಾರಿಯಲ್ಲಿ, ತಾಯಿಯಿಂದ ಬೇರ್ಪಟ್ಟ ಗಂಡಾನೆ ಮರಿಯೊಂದನ್ನು ಸಂರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಪನ್ವಾರ್ ತಿಳಿಸಿದ್ದಾರೆ.
ಆನೆ ಮರಿಯು ಅಂದಾಜು 4 ತಿಂಗಳದ್ದಾಗಿದ್ದು 2-3 ದಿನ ಗಳಿಂದ ತಾಯಿಯ ಹಾಲು ಸಿಗದೇ ನಿತ್ರಾಣವಾಗಿತ್ತು. ಸಿಬ್ಬಂದಿ ಆನೆಮರಿ ಯನ್ನು ಹಲವು ಆನೆಗಳ ಗುಂಪಿಗೆ ಸೇರಿಸಲು ಮಾಡಿದ ಪ್ರಯತ್ನ ಫಲವಾಗಿ ಅದನ್ನು ಸಂರಕ್ಷಿಸಿ ಕರೆತರಲಾಗಿದೆ ಎಂದರು.
ಪಾರ್ಕಿನ ವೈದ್ಯ ಉಮಾಶಂಕರ್ ಮಾಹಿತಿ ನೀಡಿ, ಆನೆ ಮರಿ ಸಾಧಾರಣ ಆರೋಗ್ಯ ಹೊಂದಿದ್ದು, ಕಡಿಮೆ ಎಂದರೂ 6-12 ತಿಂಗಳ ಕಾಲ ತಾಯಿಯ ಹಾಲು ಅವಶ್ಯವಾಗಿದೆ. ಇಲ್ಲಿಗೆ ಬಂದ ಆನೆ ಮರಿ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಿದ್ದು, ನಮ್ಮಲ್ಲಿನ ನುರಿತ ಮಾವುತರು ಅದರ ಆರೈಕೆ ಮಾಡುತ್ತಿದ್ದಾರೆ. ಆನೆ ಮರಿಯ ರಕ್ತದ ಮಾದರಿಯನ್ನು ಹೆಬ್ಟಾಳದ ತಪಾಸಣಾ ಕೇಂದ್ರಕ್ಕೆ ಕಳಿಸಿದ್ದು, ಪಾರ್ಕಿನ ಪಶು ವೈದ್ಯಕೀಯ ತಂಡದ ನಿಗಾವಣೆಯಲ್ಲಿದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ